ಮಣ್ಣಿನ ಗಣಪನೆ
ಮಣ್ಣಿನ ಗಣಪನೆ
ನಾ ನಿನ್ನ ಮಣ್ಣೆಂದು ಪೂಜಿಸಲಿಲ್ಲಾ.
ನನ್ನೆಲ್ಲಾ ಕಷ್ಟಕೆ ನೀ ನೀಡು ಸ್ಪಷ್ಟನೆ
ನಾ ನಿನ್ನ ಭಜಿಸಿದ್ದು ಸುಳ್ಳೆ..?
ಕೈ ಎತ್ತಿ ಮುಗಿದಿಲ್ಲ..ಗರಿಕೆಯ ತಂದಿಲ್ಲಾ
ಹರಿಕೆಯಂತು ನಾ ಹೊತ್ತಿಲ್ಲ..
ನಿನ್ನ ನಾಮ ಮನದಲ್ಲಿರುವುದು ಸುಳ್ಳೆ..
ಹಚ್ಚಿದ ಬೆಂಕಿಗೂ ದೀಪದ ಬೆಳಕಿಗೂ
ವ್ಯತ್ಯಾಸ ನಾ ಕಾಣೆ
ಕೈ ಹಿಡಿದರೆ ಸುಡದೆ?
ಸುಡದೇ ಎನ್ನ ಕಾಪಾಡಿಕೋ
ಐಶ್ವರ್ಯ ಬೇಡಿಲ್ಲ..ಬೇರೇನು ಬೇಕಿಲ್ಲಾ.ಅದೃಷ್ಟ ನಂಬಿಲ್ಲ.
ಅದೃಶ್ಯವಾಗಿರುವ
ನಿನ್ನ ಒಲಮೆ ಒಂದೇ ಸಾಕೆನಗೆ....
ಸಂದೇಶ ಪೂಜಾರಿ ಗುಲ್ವಾಡಿ
ಮಣ್ಣಿನ ಗಣಪನೆ
ನಾ ನಿನ್ನ ಮಣ್ಣೆಂದು ಪೂಜಿಸಲಿಲ್ಲಾ.
ನನ್ನೆಲ್ಲಾ ಕಷ್ಟಕೆ ನೀ ನೀಡು ಸ್ಪಷ್ಟನೆ
ನಾ ನಿನ್ನ ಭಜಿಸಿದ್ದು ಸುಳ್ಳೆ..?
ಕೈ ಎತ್ತಿ ಮುಗಿದಿಲ್ಲ..ಗರಿಕೆಯ ತಂದಿಲ್ಲಾ
ಹರಿಕೆಯಂತು ನಾ ಹೊತ್ತಿಲ್ಲ..
ನಿನ್ನ ನಾಮ ಮನದಲ್ಲಿರುವುದು ಸುಳ್ಳೆ..
ಹಚ್ಚಿದ ಬೆಂಕಿಗೂ ದೀಪದ ಬೆಳಕಿಗೂ
ವ್ಯತ್ಯಾಸ ನಾ ಕಾಣೆ
ಕೈ ಹಿಡಿದರೆ ಸುಡದೆ?
ಸುಡದೇ ಎನ್ನ ಕಾಪಾಡಿಕೋ
ಐಶ್ವರ್ಯ ಬೇಡಿಲ್ಲ..ಬೇರೇನು ಬೇಕಿಲ್ಲಾ.ಅದೃಷ್ಟ ನಂಬಿಲ್ಲ.
ಅದೃಶ್ಯವಾಗಿರುವ
ನಿನ್ನ ಒಲಮೆ ಒಂದೇ ಸಾಕೆನಗೆ....
ಸಂದೇಶ ಪೂಜಾರಿ ಗುಲ್ವಾಡಿ