ನೆನಪುಗಳು
ಅಂದು ಹುಣ್ಣಿಮೆಯಾಗಿತ್ತು
ಅಂಗಳ ತುಂಬ ತಿಂಗಳ ಬೆಳಕು ಬೆಳದಿಂಗಳ ಚೆಲ್ಲಿತ್ತು..
ಮನವೇತಕೊ ಗತಕಕೆ ತಿರುಗಿತ್ತು.
ಅಂದು ಚಿಂತೆಕಾಣದ ಮನ
ಚಿಂತೆಯಲೆ ನರಳುತಿದೆ ಈ ದಿನ.
ಬದುಕೆಲ್ಲಾ ಬರಿ ಯೋಗ ಧ್ಯಾನ
ಮೂಕವಾಯ್ತು ಮೌನ....
ಎಲ್ಲವ ಸಾಧಿಸಿ ಜಯಿಸುವ ಕನಸು ಆ ಯುವತನದಲ್ಲಿ.
ಬದುಕನು ನೀಗಿಸಿ ಮುಳುಗಿಸಿ ಮನಸು ಈ ಮುಪ್ಪಿನಲ್ಲಿ..
ಭೊಗಸೆಯ ತುಂಬ ಕಂಡ ಕನಸ ಕದ್ದೊಯ್ದವರಾರು
ಮಾತು ಮಾತಿಗೂ ನಗಿಸುತಿದ್ದ ಜನ ಎಲ್ಲಿ ನನ್ನವರು?
ಬಾಳ ತಿರುಳೆಲ್ಲ ಇರುಳಲ್ಲಿ ತೊಯ್ದಂತಿದೆ.
ಕಾದ ಮರಳಲ್ಲಿ ಬಿಸಿ ನೀರ ಹೊಯ್ದಂತಿದೆ.
ಬಾ ಚಂದ್ರಮ ಇಲ್ಲಿ ಭುವಿಗೆ
ತಾ ಬೆಳಕನು ಎನ್ನ ಬಾಳಿಗೆ.....
-ಸಂದೇಶ ಪೂಜಾರಿ ಗುಲ್ವಾಡಿ
ಅಂದು ಹುಣ್ಣಿಮೆಯಾಗಿತ್ತು
ಅಂಗಳ ತುಂಬ ತಿಂಗಳ ಬೆಳಕು ಬೆಳದಿಂಗಳ ಚೆಲ್ಲಿತ್ತು..
ಮನವೇತಕೊ ಗತಕಕೆ ತಿರುಗಿತ್ತು.
ಅಂದು ಚಿಂತೆಕಾಣದ ಮನ
ಚಿಂತೆಯಲೆ ನರಳುತಿದೆ ಈ ದಿನ.
ಬದುಕೆಲ್ಲಾ ಬರಿ ಯೋಗ ಧ್ಯಾನ
ಮೂಕವಾಯ್ತು ಮೌನ....
ಎಲ್ಲವ ಸಾಧಿಸಿ ಜಯಿಸುವ ಕನಸು ಆ ಯುವತನದಲ್ಲಿ.
ಬದುಕನು ನೀಗಿಸಿ ಮುಳುಗಿಸಿ ಮನಸು ಈ ಮುಪ್ಪಿನಲ್ಲಿ..
ಭೊಗಸೆಯ ತುಂಬ ಕಂಡ ಕನಸ ಕದ್ದೊಯ್ದವರಾರು
ಮಾತು ಮಾತಿಗೂ ನಗಿಸುತಿದ್ದ ಜನ ಎಲ್ಲಿ ನನ್ನವರು?
ಬಾಳ ತಿರುಳೆಲ್ಲ ಇರುಳಲ್ಲಿ ತೊಯ್ದಂತಿದೆ.
ಕಾದ ಮರಳಲ್ಲಿ ಬಿಸಿ ನೀರ ಹೊಯ್ದಂತಿದೆ.
ಬಾ ಚಂದ್ರಮ ಇಲ್ಲಿ ಭುವಿಗೆ
ತಾ ಬೆಳಕನು ಎನ್ನ ಬಾಳಿಗೆ.....
-ಸಂದೇಶ ಪೂಜಾರಿ ಗುಲ್ವಾಡಿ
No comments:
Post a Comment