ಶೂನ್ಯ
ನಿನ್ನ ಜೊತೆ ತಿರುಗಿದ ನೆನಪು
ಆ ಕನಸಲ್ಲೆ ಜಗ ಮಗಿಸುವ ಭಾವ
ವಾಸ್ತವತೆ ಅರಿತಾಗ ಬರೀ ಶೂನ್ಯ
ನಿನ್ನ ಮಾತಿಗೆ ಮರುಳಾದ ಮನ
ಕಲ್ಪನೆಯಲ್ಲೂ ಒಂತರ ಆನಂದ
ಭರವಸೆಯೇ ಬತ್ತಿದ ಸಾಗರ ನಿನ್ನ ಉತ್ತರ.
ಅದೆಷ್ಟೋ ಮೊಳಕೆ ಒಡೆಯದ ಕನಸು
ಒಡೆದಿದ್ದರೆ ಬಲಿಯದೆ ಮುಗ್ಗುತ್ತಿತ್ತು.ಅದು ನನಗು ಗೊತ್ತು..ಬರಿ ಶೂನ್ಯ ಸಂಪತ್ತು.
ಸಂದೇಶ ಪೂಜಾರಿ ಗುಲ್ವಾಡಿ