Friday, 28 October 2016

ಕವಿ

                      ಕವಿ

ಮಹಾ ಕಾವ್ಯದ ಸೃಷ್ಟಿಗೆ ಪಣ ತೊಟ್ಟಿದ್ದಾನೆ..ಪದಗಳೇ ಸಾಲುತ್ತಿಲ್ಲ...
ಬಳುವಳಿ ಪಡೆಯಲು ಅವನಿಗಿಷ್ಟವಿಲ್ಲ.
ಸಾರಸ್ವತ ಲೋಕದ ಬ್ರಹ್ಮನು ಅವನಲ್ಲ.ಆದರೂ ಆಸೆ ಚಿಗುರಿತಲ್ಲಾ..
ಅವನೊಬ್ಬ ಭಾವಜೀವಿ.
ಬಿರುದು ಸನ್ಮಾನವಿತ್ತ ಜನ ಮಹಾಕವಿಯೆಂದರು..ಅವನ ದೃಷ್ಟಿಯಲ್ಲಿ ಸೃಷ್ಟಿಕಾರ್ಯ ಮುಗಿದಿಲ್ಲ.
ಹುಚ್ಚನಂತೆ ಗೊಣಗುತ್ತಾನೆ...ನಾಲ್ಕು ಸಾಲು ಗೀಚುತ್ತಾನೆ...ಮತ್ತೆ ಗೀಚುತ್ತಾ ಇದ್ದಾನೆ
  
             ಸಂದೇಶ ಪೂಜಾರಿಗುಲ್ವಾಡಿ

No comments: