ಕವಿತೆಯ ಹುಟ್ಟು
ಹ್ರದಯದ ಕದ ತಟ್ಟಿ ಇಣುಕಿ
ಕೋಟಿ ಪದಗಳ ಪಟ್ಟಿ ಕೆಣುಕಿ
ಹುಟ್ಟುವುದು ಕಾಣ ಕವಿತೆ
ಈಗಷ್ಟೆ ಜನ್ಮ ಮ್ರತ್ಯುವಿಲ್ಲದೆ ಮರುಜನ್ಮ
ಸದ್ಯ ಸ್ವಸ್ಥ ಪುನರುತ್ಥಾನ
ನಿನ್ನಂತೆ ತುಂಬಿ ನಿಂತದಲ್ಲ ಸದಾ ಉಕ್ಕುವ ಒರತೆ.
ಯೋಜನೆಯ ಯೋಚನಾಲಹರಿ
ಮುಂಚೂಣಿಯಲ್ಲಿದೆ ಭಾವನೆ ಸಾಗಿದ್ದೆ ದಾರಿ.
ಮಿಥ್ಯವಾದವಲ್ಲ ಸತ್ಯದ ಕಲ್ಪನೆ ಒಡಲಾಳದ ಚರಿತೆ.
ಚೈತನ್ಯದ ದಾಳಿಗೆ ಚೇತ್ಕಾರ ಮೇಳೈಯಿಸಿ
ದೂರ ಸರಿದಿದೆ ಜಡತೆ ಕೊನೆಯರಸಿ
ಉದಯಿಸಿದೆ ಬೆಳದಿಂಗಳ ಬಾಂಧವ್ಯ ಕವಿತೆ.
ಸಂದೇಶ ಪೂಜಾರಿ ಗುಲ್ವಾಡಿ
ಹ್ರದಯದ ಕದ ತಟ್ಟಿ ಇಣುಕಿ
ಕೋಟಿ ಪದಗಳ ಪಟ್ಟಿ ಕೆಣುಕಿ
ಹುಟ್ಟುವುದು ಕಾಣ ಕವಿತೆ
ಈಗಷ್ಟೆ ಜನ್ಮ ಮ್ರತ್ಯುವಿಲ್ಲದೆ ಮರುಜನ್ಮ
ಸದ್ಯ ಸ್ವಸ್ಥ ಪುನರುತ್ಥಾನ
ನಿನ್ನಂತೆ ತುಂಬಿ ನಿಂತದಲ್ಲ ಸದಾ ಉಕ್ಕುವ ಒರತೆ.
ಯೋಜನೆಯ ಯೋಚನಾಲಹರಿ
ಮುಂಚೂಣಿಯಲ್ಲಿದೆ ಭಾವನೆ ಸಾಗಿದ್ದೆ ದಾರಿ.
ಮಿಥ್ಯವಾದವಲ್ಲ ಸತ್ಯದ ಕಲ್ಪನೆ ಒಡಲಾಳದ ಚರಿತೆ.
ಚೈತನ್ಯದ ದಾಳಿಗೆ ಚೇತ್ಕಾರ ಮೇಳೈಯಿಸಿ
ದೂರ ಸರಿದಿದೆ ಜಡತೆ ಕೊನೆಯರಸಿ
ಉದಯಿಸಿದೆ ಬೆಳದಿಂಗಳ ಬಾಂಧವ್ಯ ಕವಿತೆ.
ಸಂದೇಶ ಪೂಜಾರಿ ಗುಲ್ವಾಡಿ
No comments:
Post a Comment