Friday, 28 October 2016

ಕವಿತೆಯ ಹುಟ್ಟು

                     ಕವಿತೆಯ ಹುಟ್ಟು

ಹ್ರದಯದ ಕದ ತಟ್ಟಿ ಇಣುಕಿ
ಕೋಟಿ ಪದಗಳ ಪಟ್ಟಿ ಕೆಣುಕಿ
ಹುಟ್ಟುವುದು ಕಾಣ ಕವಿತೆ

ಈಗಷ್ಟೆ ಜನ್ಮ ಮ್ರತ್ಯುವಿಲ್ಲದೆ ಮರುಜನ್ಮ
ಸದ್ಯ ಸ್ವಸ್ಥ ಪುನರುತ್ಥಾನ
ನಿನ್ನಂತೆ ತುಂಬಿ ನಿಂತದಲ್ಲ ಸದಾ ಉಕ್ಕುವ ಒರತೆ.

ಯೋಜನೆಯ ಯೋಚನಾಲಹರಿ
ಮುಂಚೂಣಿಯಲ್ಲಿದೆ ಭಾವನೆ ಸಾಗಿದ್ದೆ ದಾರಿ.
ಮಿಥ್ಯವಾದವಲ್ಲ ಸತ್ಯದ ಕಲ್ಪನೆ ಒಡಲಾಳದ ಚರಿತೆ.

ಚೈತನ್ಯದ ದಾಳಿಗೆ ಚೇತ್ಕಾರ ಮೇಳೈಯಿಸಿ
ದೂರ ಸರಿದಿದೆ ಜಡತೆ ಕೊನೆಯರಸಿ
ಉದಯಿಸಿದೆ ಬೆಳದಿಂಗಳ ಬಾಂಧವ್ಯ ಕವಿತೆ.
          ಸಂದೇಶ ಪೂಜಾರಿ ಗುಲ್ವಾಡಿ

No comments: