2.
ಮನಸ್ಸಿನಿಂದ ಮಾಸದ ನೆನಪು ನೀನು ಮುದ್ದು
ನೆನಪಿನಿಂದ ಮರೆತು ಹೋದ ಕನಸು ನಾನು ಇಂದು.
ದುಃಖವುಕ್ಕಿ ಕಣ್ಣ ಬಿಂದು
ಜಾರಲಾಗದೆ ಆರಿತೀಗ ನೊಂದು..
3.
ಎದೆಯಾಳದಿಂದ ಏಳುವ ನೋವಿನ ಅಲೆಗಳು
ಕಣ್ಣವೆಯಲ್ಲಿ ಉಕ್ಕಿಸುವುದು ಬರಿ ನೀರಲ್ಲಾ..
ಹೆಪ್ಪುಗಟ್ಟಿದ ಭಾವಗಳನ್ನ
ಮುಪ್ಪಾದರು ವಾಸಿಯಾಗದ ನೋವನ್ನ
ಸುಪ್ತ ಹೃದಯದ ಆರ್ದ್ರತೆಯನ್ನ.
ಒಣ ಮನಸ್ಸಿನ ಅಸಾಹಯಕ ಅಳಲನ್ನ
ಒತ್ತರಿಸಿ ಬಿಕ್ಕಳಿಸುವ ದುಃಖವನ್ನ...
4.
ಮೋಡ ತಿಳಿಯಾಗಲು
ಮಳೆಯೇ ಹನಿಯಬೇಕಿಲ್ಲಾ
ಗಾಳಿ ಬೀಸಿದರೂ ಸಾಕು...
ನಿನ್ನ ನೆನಪಾಗಲು
ಬಳಿಯಿರಬೇಕಿಲ್ಲಾ
ಕ್ಷಣ ಕಣ್ಮುಚ್ಚಿದರೂ ಸಾಕು...
ಗಾಢ ಪ್ರೇಮವಾಗಲು ಬಂಧನದ
ಅಪ್ಪುಗೆ ಬೇಕಿಲ್ಲ
ನಿನ್ನ ಒಪ್ಪಿಗೆಯೊಂದಿದ್ದರೆ ಸಾಕು...
5.
ಸಿಗದ ತಾರೆಯ ಹಿಡಿದು ಬಂಧಿಸಿದರೆ..
ಆಕಾಶದಲ್ಲಿ ಮಿನುಗುವವರಾರು..?
6.
ಏನ ಬರೆಯಲಿ ನಿನ್ನ ನೆನಪಲಿ
ಗೀಚಲು ಪದಗಳಿಲ್ಲಾ..
ಯೋಚನೆ ಮನದಲೆಲ್ಲಾ..
7.
ಚಂದಿರನ ಮೊಗದಲಿ ಅಂದವೇಕೋ ಇಂದು
ಹುಣ್ಣಿಮೆಯೆ..?
ನೈದಿಲೆಯ ಕಂಡ ಮೇಲಂತು ಬದಲಾಯಿತು ಚಹರೆ
ಇದು ನಿಜವೇ..?
8.
ನೀವು ಮೊದಲು ಮಾಡಿದ ಚಿಂತನೆ ಸರಿಯಾಗಿರುತ್ತೆ..
ಮತ್ತೆ ಬದಲಾಯಿಸಬೇಡಿ..
ತೀರ ಬದಲಾಯಿಸಲೇ ಬೇಕಾದ ಸಂಧರ್ಭ ಬಂದರೆ ಮತ್ತೆ ಮೊದಲಿನಿಂದಲೇ ಚಿಂತಿಸಿ..
9.
ಮೊಗ್ಗು ಅರಳದೇ ತಾಯೆದೆಗೆ ಮರಳಿದೆ..
ಹಿಗ್ಗೆ ಇಲ್ಲದೇ ಹೂವು ಕುಗ್ಗಿ ಬಾಡಿದೆ..
ನರಳಲು ನೋವೆ ಇಲ್ಲದೆ ಸಾವು ಸಾಗಿದೆ..
ತೆರಳಲು ದಾರಿ ಇಲ್ಲದೆ ಎದೆ ನೂಕು ನುಗ್ಗಲಾಗಿದೆ.
ಒಪ್ಪದೆ ಬೆಪ್ಪನಾಗಿ ಅಣುಕು ನಗುವು ಮೂಡಾಯ್ತು....
10.
ತ್ಯಾಗವೆನ್ನುವ ಅಕ್ಷರದಲ್ಲಿ (ಅಕ್ಕರದಲಿ)
ಪ್ರೀತಿಯೊಂದು ಬಿಂದುವಷ್ಟೇ..
ಅನಂತ ಬಿಂದುವಿನ ಸಾಗರವೇ ಈ ತ್ಯಾಗ..
11.
ಪ್ರೀತಿ,ಸ್ನೇಹ ಯಾವತ್ತು ಯಾರಗೂ ಉಸಿರುಗಟ್ಟಿಸುವಂತೆ ಇರಬಾರದು..ಒಂದು ವೇಳೆ ಹಾಗನಿಸಿದರೆ ಅದು ತನ್ನ ಗೌರವವನ್ನ ಕಳೆದು ಕೊಳ್ಳುತ್ತಾ ಸಾಗುತ್ತದೆ.
ಕೆಲವರು ತುಂಬಾ ಗ್ರೇಟ್ ..ಯಾಕಂದ್ರೆ ಅವರು ಯಾರನ್ನು ಅಷ್ಟಾಗಿ ಹಚ್ಚಿ ಕೊಂಡಿರಲ್ಲ..ಕಾರಣ ಇಷ್ಟೇ
ಹೆಚ್ಚು ಹಚ್ಚಿಕೊಂಡ ವ್ಯಕ್ತಿಗಳು ಬೇಗ ದೂರಾಗ್ತರೆ ಅನ್ನೊ ಸತ್ಯ ಅವರಿಗೆ ಮೊದಲೇ ಗೊತ್ತಿರುತ್ತೆ..
12.
ನಿನ್ನ ಮನಸಲ್ಲಿ ನಾನಿಲ್ಲದೆ ಮೇಲೆ
ಈ ಹೃದಯ ಚೂರಾಯಿತು
ಕನಸಲಿ ನಿನ್ನ ಕಾಣದೆ
ಕಣ್ಮಚ್ಚಿ ದಿನ ಮೂರಾಯಿತು
ಒಡಲಿನ ಒಡಕಿಗೆ
ಕಂಬನಿ ಇಂಗಿ
ನಡುಗಿದೆ ದೇಹವು
ಭಯದಲಿ ಜೋರಾಗಿ
ಇಂದೇನೆ ಮಡಿವೆನು ಎಂಬ ಆತಂಕದಿ..
ಯಾರಲು ಹೇಳದ ಮೂಕ ಮೌನ
ದೂರದೆ ದೂರಾದೆ ನನ್ನಿಂದ ನಾ...
13.
ದಾರಿ ಹೋಕ ನಾನು
ಈ ಪಯಣದಲಿ ಸಿಗುವೆಯಾ ನೀನು..
ಸಂಜೆ ತನಕ ಏನು...
ಕೊನೆಯ ತನಕ ನಗುವೆ ನಾನು....
14.
ನಿನಗಾಗಿ ಹುಟ್ಟಲಿಲ್ಲ ಕವಿತೆ
ನಿನ್ನ ನೆನಪಲಿ ಹಳೆ ಸಾಲುಗಳ ಮರೆತೆ
ಪದಗಳು ಮರೆಯಾದವು ನನ್ನೊಳಗೆ ಅವಿತೆ..
15.
ಬಣ್ಣಗಳು ಬೆರೆತು
ಸೌಂದರ್ಯವು ಕಲೆತು
ಚಂದಿರನ ಮೊಗದಲಿ ಮಂದಹಾಸ ಹೊರತು
ನೊಂದ ರಹಸ್ಯ ಇರಕೂಡದು..🌛🌕🌜
16.
ಸ್ಪೆಷಲ್ ಡೇ ಅಂದ್ರೆ...
ನಿನ್ನೊಲವಿನ ಸನಿಹಕೆ ಬಂದ ದಿನ
ನನ್ನೊಳಗೆ ನಿನ್ನ ಸೆಳೆದ ದಿನ
ನನ್ನ ಆತುರಕೆ ತುಸು ಬೇಸರಿಸಿ
ಕಾತುರದಿ ಕಾದ ದಿನ
ನಮ್ಮ ಹರುಷದ ಸಮ್ಮಿಲನ
17.
ಸಂಚಾರಿ ನಾನು ನಿನ್ನ ಹೃದಯಕೆ
ಸಂಚಲ್ಲೆ ಸೆಳೆದೆ ನೀ ತುಂಬಾ ಸನಿಹಕೆ
ಇಂಚಿಂಚು ಪ್ರೀತಿನಾ ಹಂಚಿ ಬಾಳೋಣ ...
ಕಳೆದೋಗೋ ಸಮಯ ಮಿಂಚಿ ಮರೆಯಾಗೋ ಮುನ್ನ...
18.
ಹೇಳಲಾಗದ ಮಾತಿನಂತೆ
ಅರಿಯಲಾಗದ ನೋವಿನಂತೆ
ನಾನು ನೀನು ಮತ್ತೆ ಮೌನಿಯಂತೆ
ಕರೆಯಲಾರದ ಕೂಗು ನನ್ನದು
ಮರೆಯಲಾರದ ನೆನಪು ನಿನ್ನದು
ಬೆರೆಯಲಾಗದ ಸ್ನೇಹ ನಮ್ಮದು
19.
ಮಸಣದ ಹೂವೇ
ಪ್ರತಿಸಲ ನೋವೇ
ನಿನ್ನಲ್ಲೂ ಒಂದು ಭಾವನೆ ಇದೆಯಾ
ನವೀನ ಹೃದಯದ
ವಾತ್ಸಲ್ಯ ನೋಟದ
ಹೊಂಬೆಳಕಿನ ಸನಿಹ ಸುಳಿದೆಯಾ
20.
ನಿನ್ನ ಒಲವಿನ ಓಲೆ
ಓದಿದ ಮೇಲೆ
ತರ ತರ ಭಾವ
ಬಯಸಿದೆ ಜೀವ
ಅರಿಯದೆ ಮೂಡಿದೆ ಪ್ರೀತಿ
ನಿಜಕೂ ಮರೆತೆನು
ನಿನ್ನ ಅರಿತು ಬೆರೆತ ರೀತಿ
21.
ಹೆಚ್ಚಿನ ಸಮಯದಲ್ಲಿ ಹೀಗಾಗುತ್ತೆ...ಇಲ್ಲ ಹೀಗೆ ನಮಗನಿಸಬಹುದು.
ನಾವು ಸರಿಯಿದ್ದಾಗ ಸುತ್ತಲಿನ ಪರಿಸ್ಥಿತಿ ಸರಿಯಿರಲ್ಲ..
ಪರಿಸ್ಥಿತಿ ಸರಿಯಾದಗ ನಾವೇ ಸರಿಯಿರಲ್ಲ.
22.
ಬೆರಳು ಬೆರೆತು
ಕೊರಳ ಹಿಡಿದು..
ಅದರ ದೊರೆತು
ಅರಿವೆ ಮರೆತು
ಪರವಶ
ನಾ ನಿನ್ನ ವಶ...
23.
ಚಿತ್ತ ಗಾಮಿನಿ..
ಕಣ್ತೆರದು ಕಣ್ಬಿಡುವ ಮುನ್ನ ಕಣ್ಗಾವಲಲಿ ಮಾಯಾವಾಗುವ ಹರಿಣಿ.
ಇವಳಿಗಾಗಿ ಕಾದಿದೆ ಮನ ಚಂಪಕ ಮಾಲೆ ಹಿಡಿದು..
24.
ಹುಚ್ಚು ಹೃದಯ ಚುಚ್ಚಿ ಕೊಳ್ಳುತ್ತಿದೆ ನಿನ್ನ ಹಚ್ಚಿಕೊಂಡು, ತುಂಬ ಮೆಚ್ಚಿಕೊಂಡು..
25.
ನಿನ್ನ ಜೊತೆ ಆಡದ ಮಾತಿಗೆ
ಕಾದಿದೆ ಈ ಮನ
ಮಾತಲ್ಲಿ ಹೇಳದಿದ್ದರೂ
ಮೌನದಲ್ಲೆ ಎಲ್ಲಾ ಅರಿವೆಯಾ ಚಿನ್ನಾ...
26.
ನಿನ್ನ ಕವನಗಳಿಗೂ
ನನ್ನ ಭಾವನೆಗಳಿಗೂ
ಹೊಂದಾಣಿಕೆಯಾಗುತ್ತಿದೆ..
ನನ್ನೆದೆ ಹಾಳೆಯಲಿ ಅಚ್ಚೊತ್ತಿಡುವೆ
ಮತ್ತಷ್ಟು ಕಳುಹಿಸು..
27.
ಹೃದಯವೇ ಅರಿಯದ ಮೌನವೊಂದಿದೆ..
ಹೇಗೆ ಹೇಳಲಿ
ಹೀಗೆ ಬಂದು ಹಾಗೆ ಹೋದ ಅತಿಥಿಯೆಂದು.
ಕಾಡದಿದ್ದರೂ
ಮಾತಾಡದಿದ್ದರೂ
ಬೇಡವೆಂದರೂ
ನೆನಪು ಮೂಡದೆ.?
ಆ ನೋವು ಹೃದಯವ ಹಿಂಡದೆ..?
28.
ಕೊನೆಯ ಸಾಲು ಬರೆಯುತಿರುವೆ ನಾನಿಂದು ನಿನ್ನ ನೆನಪಲಿ..
ಮತ್ತೆ ನೆನಪು ಮೂಡಿದರೆ ಮೊದಲಿನಿಂದ ಬರೆಯುವೆ..
29.
ನನ್ನೊಳಗೆ ನಾನು ನಕ್ಕೆ
ನಿನ್ನ ನೆನಪಿನಾಳಕ್ಕೆ
ಮುಗ್ಧ ಮನಸ್ಸು ಜಾರಿ
ಅದು ಎಲ್ಲ ಎಲ್ಲೇ ಮೀರಿ
ಬೇಡ ಬೇಡವೆಂದು
ಬಯಸಿದೆ ನಿನ್ನ ಇಂದು..
30.
ಆತುರದ ಬಯಕೆಗಳಿಗಿಂತ
ಕಾತರದ ಕಾಯುವಿಕೆ ಹಿತವಾಗಿರುತ್ತೆ
31.
ಸಮಾಜದಲ್ಲಿ ಸಮಾನತೆ ಯಾರಿಗೂ ಇಷ್ಟವಿದ್ದಂತಿಲ್ಲ..
ಅಸಮಾನ್ಯರೆಂದೆನಿಸಿಕೊಳ್ಳಲು ಅಸಮಾನತೆ ಸೃಷ್ಟಿಸಿದಂತಿದೆ..
32.
ಹೊಸತರಲ್ಲಿ ಅತಿ ಹೆಚ್ಚು ಸ್ನೇಹ ಪ್ರೀತಿ....
ಈಗ ಯೋಚಿಸುವಾಗ
33.
ನನಗನಿಸಿದ ಪ್ರಕಾರ ಬರವಣಿಗೆಯ ಹೊರತು ಬೇರಾರು ನಮ್ಮ ನೋವನ್ನ ಅರ್ಧಕ್ಕೆ ಇಳಿಸಲಾರರು.. ಖುಷಿಯನ್ನ ದ್ವಿಗುಣಗೊಳಿಸಲಾರರು.
ಒಂದು ವೇಳೆ ಪವಾಡ ನೆಡೆದರೆ they are best Friends...👊
34.
ಪ್ರೀತಿ ಎಂದರೇನು?...ಒಂದು ಕ್ಷಣ ಕಣ್ಮುಚ್ಚಿ ಎದೆಯ ಮೇಲೆ ಕೈಯಿಟ್ಟು ಬಡಿತ ಆಲಿಸಿದ ಮೇಲೂ ಅರಿವಾಗದಿದ್ದರೆ
ಯಾರನ್ನೇಕೆ ಕೇಳಲಿ.
35.
ಈ ಸಂಬಂಧಗಳೇ ಹೀಗೆ ದೂರಿದ್ದರೆ ಹತ್ತಿರವಾಗುವ ಕಾತುರ.. ಯೋಗ್ಯತೆ ಮೀರಿ ಸ್ನೇಹ ಬಯಸುತ್ತದೆ.
ನಿರೀಕ್ಷೆಯಂತೆ ಹತ್ತಿರವಾಗುತ್ತಿದ್ದೇವೆ ಎಂದಾಗ ಇನ್ನಷ್ಟು ಒಲವಾಗಿರಬೇಕಿತ್ತು.ಇಲ್ಲಾ ನಲಿವಾದರೂ ಇರಬೇಕಿತ್ತು.
ಅದರೆ ಮನಕೆ ಬೀಸಿದೆ ಬಿರುಗಾಳಿ
ಹೊಸ ಸುದ್ದಿಯ ಕೇಳಿ
ಹತ್ತಿರವಾಗಬೇಡಿ ಯಾರು
ವಿಸ್ತಾರವಾಗಿರುವ ಪ್ರಪಂಚದಲ್ಲಿ
ಅದೃಷ್ಯನಾಗಿರುವಾಸೆ..ಎನ್ನಲು ಕಾರಣ ಏನಿರಬಹುದು..?
36.
ಅದರಗಳು ನಾಚುತ್ತಿದೆ
ನಿನ್ನ ಮಧುರ ಭಾವನೆಯ ಅರಿತು
ಮೌನದಲಿ ಸೋಕೀಗ
ತನುವಿಗದೇ.. ಸಾಕೀಗಾ
37.
ಮನದಿ ನೂರಾರು ನಿನಾದದ ತರಂಗ
ಮಾತು ತುಂಬಿ ಮೌನ ತುಳುಕಿದ ಅಂತರಂಗ
ಮುಗ್ದತೆಯ ಲೂಟಿ ಮಾಡಿ
ಕನಸುಗಳ ಪೈಪೋಟಿ ನಡೆದಿದೆ..
38.
ಹೂವಿಗೆ ಹೂವ ನೀಡಿ ಪ್ರೀತಿ ಮಾಡಿದೆ 🌹
ಬಾಡದೆ ಹೀಗೆ ಇರಲಿ ಎಂದು ದಿನವೂ ಬೇಡಿದೆ 🙏
39.
ಹಾಯ್ಕ
ಅಪ್ಪನೆಂದರೇ
ಕಪ್ಪುಕುಳಿಯಿಲ್ಲದ
ಚಂದಿರನವ
ಅಪ್ಪನೆಂದರೆ
ಮುದ್ದು ಮಾಡದೆ ತಪ್ಪ
ತಿದ್ದಿದವನು
40.
ಅವನ ಸ್ಪರ್ಶಕ್ಕೆ ಮುಳ್ಳುಗಳೇ
ನಾಚಿದನ್ನು ನೋಡಿ
ನಾನು ಸೋತಿದ್ದು.
41.
ಎಲ್ಲಾ ಹೇಳಿದ ಮೇಲೆ ನೀನೆಲ್ಲ ಅರಿತಮೇಲೆ
ಮಾತೆಲ್ಲಾ ಮೌನವಾಗಿದೆ.
ಒಂದೆರಡು ಮಾತನ್ನು ನನ್ನಲ್ಲೆ ಉಳಿಸಿಕೊಂಡಿದ್ದರೆ..
ನಿನಗೂ ಕೇಳುವ ಕುತೂಹಲವಿರುತ್ತಿತ್ತೇನೋ
ನನಗೂ ಹೇಳುವ ಹಂಬಲವಿರುತ್ತಿತ್ತೇನೋ
ಈ ಮೌನ ಸಾಕಾಗಿದೆ
ನನ್ನ ಮೂಗನನ್ನಾಗಿ ಮಾಡಿದೆ..
ಹತಾಶೆಯಲ್ಲು ಮುಗಳ್ನಗೆ ಬೀರುವೆ
ಮೌನ ಸೀಳಲು
ತೆರೆಯ ಸರಿಸಿ ನೀನು ಸ್ಪಂದಿಸುವೆಯಾ?
42.
ಹುದುಗಿರುವ ಭಾವಗಳ ಮತ್ತೆ ಕೆದುಕದಿರು ಮನವೇ
ತದುಕಿ ಎತ್ತಿದ ಅವಶೇಷಗಳ ಪಳೆಯುಳಿಕೆಗೆ
ಮರುಜನ್ಮ ನೀಡದಿರು.
ಬಣ್ಣ ಬಯಲಿನಲ್ಲಿ ದಕ್ಕದೇನು
ದಿಕ್ಕರಿಸಿ ದುಡುಕದಿರು ಸುಮ್ಮನೆ
43.
ನನ್ನಲ್ಲಿ ಮೊಳೆತ ಪ್ರೀತಿಯ ಭಾವನೆಗಳು ಆಳವಾಗಿ ಬಲಿತಿಲ್ಲ..ಕಾರಣವಿಷ್ಟೆ ಅವು ನಿನ್ನೊಂದಿಗೆ ಬೆರೆತಿಲ್ಲ..
44.
ಕೆಲವೊಂದು ಘಟನೆಯಲ್ಲಿನ ಭಾವನೆಗಳು ಭಾರವಾದ ಅನುಭವಗಳನ್ನು ನೀಡುತ್ತೆ.
ನಾವು ಎಲ್ಲವನ್ನೂ ಮರೆಯಬಹುದು..ಅದರೆ ಒಮ್ಮೊಮ್ಮೆ ಕೆಲ ಘಟನೆಗಳು ನಾನಿನ್ನು ನಿನ್ನ ಮರೆತಿಲ್ಲ ಎಂದು ನಕ್ಕು ಬಿಡುತ್ತೆ..
ಆ ನಗು ಒಂದು ಘಳಿಗೆಯಾದರೂ ಹೃದಯವನ್ನು ಭಾರಗೊಳಿಸುವುದು...😜
45.
ಅವಳೂ ರಾಧೆಯಂತೆ
ಮನದಲಿ ನೊಂದಳಂತೆ
ತನುವಲಿ ಬೆಂದಳಂತೆ....ಕೃಷ್ಣನ ನೆನೆದು..
ಪ್ರೀತಿಯ ಕರೆಯು ಕೇಳಲೆ ಇಲ್ಲ
ಅವನೂ ದೇವರು ಅಲ್ಲ
ಕೊನೆಗೂ ದೂರಲೆ ಇಲ್ಲ....ತನ್ನನೆ ಹಳೆದು..
46.
ಮೌನಿ ನೀನಾಗ ಬೇಡ
ಮೌನದಲೂ ಮಾತಾಡುವೆ ನಾನೀಗ.
ಧ್ಯಾನಿ ನೀನಾಗ ಬೇಡ
ನಿನ್ನ ಧ್ಯಾನದಲ್ಲಿ ನಾನಿರುವಾಗ.
47.
ಇಂದು ಬಸ್ ಬಂದಿದೆ..
ಹಾಗಾಗಿ ಬಸ್ ಬಂದಿಲ್ಲ..
ಸೋ ಬಾಸ್ ಸಹ ಬಂದಿಲ್ಲ..
😂😂😂
48.
ಬೇರೊಬ್ಬರ ಟೈಮ್ ಪಾಸ್ ಗಾಗಿ ನೀವು ಬಳಕೆಯಾಗತ್ತಿದ್ದೀರಿ ಎಂದರೆ...ಅವರು ನಿಮ್ಮನ್ನು ಕಡಗಣಿಸುತ್ತಿದ್ದಾರೆಯೆಂದಲ್ಲ..
ಆ ಮೂರ್ಖರು ಅವರಿಗರಿವಿಲ್ಲದೆ ಅವರ ಜೀವನದ ಅತಿ ಮೌಲ್ಯ ನೀವೆಂದು ಭಾವಿಸಿರುವುದು.
49.
ಈ ಬ್ರಹ್ಮಾಂಡದಲ್ಲಿ ಅಗಣಿತ ತಾರೆಗಳಿದ್ದರೂ ನಿನ್ನನ್ನೇ ಹುಡುಕಲು ಕಾರಣವಿದೆ..
50.
ಪ್ರತಿ ದಿನದಂತೆ ಇಂದು ಕೂಡ
ತಾರೆಗಳ ಮಧ್ಯ ಚಂದ್ರ ಹೊಳೆಯುತಿರೆ
ನೋಡುವ ಕಂಗಳಿಗೇನೋ ಹೊಸ ಬೆರಗು..
ಅದೆ ಬಾನು ಅದೇ ನಕ್ಷತ್ರ...
51.
ನಲಿವಿಲ್ಲದ ಮೇಲೆ
ಒಲವಿಲ್ಲದ ಬಳ್ಳಿ
ಬಲವಿಲ್ಲದ ಮರವ ಬಿಡಿಸಿ ಕೊಂಡಿತೆ....?
52.
ಹೋಳಿಗೆ
ನಾನು ತೆಗೆದಿಟ್ಟೆ ಹೋಳಿಗೆ
ಅವಳು ತೆಗೆದಿಟ್ಟಳು ಹೋಳಿಗೆ..
ನಾನು ಇಟ್ಟಿದ್ದು ಬಣ್ಣ .. ಲೇ
ಅವಳು ಇಟ್ಟಿದ್ದು ಬಣಾಲೆ..
53.
ಮುಂಜಾನೆ ಅವಳಿಟ್ಟ ರಂಗೋಲಿಯಲ್ಲಿ
ಎರಡು ಹಿಡಿ ಬಣ್ಣವ ಕದ್ದಿಟ್ಟಿದ್ದೆ
ಹೋಳಿಯಾಡಲು..
ಸಂಜೆ ಕಳೆದರೂ ಅವಳ ಸುಳಿವಿಲ್ಲ...
54.
ಅದ್ಭುತ ಪ್ರೀತಿಯ ಶಕ್ತಿ
ನಮ್ಮನ್ನು ಇಷ್ಟಪಡುವವರನ್ನು ಕಡೆಗಣಿಸಿ..
ನಮ್ಮನ್ನು ಕಡೆಗಣಿಸಿದವರನ್ನು ಇಷ್ಟಪಡುವುದು..😂😂😂
55.
ಗಂಧ ಮೊಗ್ಗಿನಲ್ಲೇ ಇದ್ದರೂ ಪರಿಮಳ ಪಸರಿಸುವುದು ಅರಳಿದಾಗ..
56.
ಸಾಗಿದ ದೂರ ಕಾಲು ದಾರಿ
ಕಂಗಲಾಗಿಸುವ ಕವಲು ದಾರಿ
ಅಂದು ಕೈ ಬೀಸಿ ಕರೆದಾಗ ಮಾಯಾ ನಗರಿ
ಹೆದರಿ ಹೆದ್ದಾರಿ ಹುಡುಕಿ ಕುಳಿತಿದ್ದೆ ಬಸ್ಸನ್ನೇರಿ.
ತಲುಪಾಯ್ತು ಅರ್ಧ ದಾರಿ
ಇಂದು ಇಳಿಯುವ ಮನಸ್ಸಿಲ್ಲ..
ಪಯಣದಲಿ ಸುಖವಿಲ್ಲ..
57.
ಕರವೊಡ್ಡಿ ಕೊರಗಿ ಕೊರಗಿ ಕರೆದ ಕರೆಗೆ ಕರಗಲಾರದೆ ನಿನ್ನ ಕರುಳು.
ಕುರುಹು ತೋರಲು ತಡವೇಕೆ
ದೊರೆಗೆ ಧರೆಯ ದಾರಿ ದೂರವೇ?
58.
ಅಭಿಮಾನದ ಹುಚ್ಚು....ಎಷ್ಟಿತ್ತೆಂದರೆ
ಬದುಕಿರುವಾಗಲೆ ಪೋಟೋಗೆ
ಹಾರ ಹಾಕಿ ಕುಂಕುಮವಿಟ್ಟರು.
59.
ವಿಚಾರ ಒಳ್ಳೆಯದಾಗಿದ್ದರೆ ಶತ್ರುಗಳಿಗೂ ಶಹಬ್ಬಾಷ್ ಎನ್ನು.
ಆದರೆ ಅಳವಡಿಸಿಕೊಳ್ಳವ ಮುನ್ನ ವಿಮರ್ಶೆ ಮಾಡುವುದನ್ನು ಮರೆಯ ಬೇಡ.
60.
ಜಾತ್ರೆ
ಎಲ್ಲ ಅರಿತ ದೇವರು
ಹೊರಟಾಯಿತು
ತೇರ ಏರಿ ಮೆರವಣಿಗೆಗೆ.
ಎಂದಿನಂತೆ ಇಂದು ಸಹ
ಕೊನೆಗುಳಿದಿರುವುದು
ನಾನು ನನ್ನ ನೆನಪು
61.
ತಪ್ಪಾಯಿತೇ...ನಿನ್ನ ನಗುವೇ
ಕರೆಯೋಲೆ ಎಂದು ಭಾವಿಸಿದ್ದು.
ನಿನ್ನೆದೆಯ ಸಾಮ್ರಾಜ್ಯಕ್ಕೆ ದಕ್ಕಲಿಲ್ಲ ಆಮಂತ್ರಣ,
ಗೆಳೆಯ..ನಿನ್ನ ನೋಡಲು ನೆಪ ಹುಡುಕುತಿರುವೆ ..
ಈಗಲಾದರು ನೀಡು ಆಮಂತ್ರಣ.
ಸಂಧಿಸುವೆ ಮಂಟಪದಲ್ಲಿ...
62.
ಪರೀಕ್ಷೆಗಳು ಎದುರಾದಗ ನಿರೀಕ್ಷೆಗಳು ಹುಸಿಯಾಗುವುದು ಸಹಜ.
ಮಾನಸಿಕ ಸದೃಢತೆ, ಧೈರ್ಯ, ಛಲ ಮನದಲ್ಲಿದ್ದರೆ
ಬದುಕಿನ ಸಮೀಕ್ಷೆ ಸರಿದೂಗುವುದು ಅಷ್ಟೇ ನಿಜ
63.
ಕರವೊಡ್ಡಿ ಕೊರಗಿ ಕೊರಗಿ ಕರೆದ ಕರೆಗೆ ಕರಗಲಾರದೆ ನಿನ್ನ ಕರುಳು.
ಕುರುಹು ತೋರಲು ತಡವೇಕೆ
ದೊರೆಗೆ ಧರೆಯ ದಾರಿ ದೂರವೇ?
64.
ಮನಸ್ಸಿಗೆ ಹೊಸ ನೆನಪಿನ ಗಂಟು ಅಂಟಿಕೊಳ್ಳುವ ಮುನ್ನ
ಹಳೆ ನೆನಪಿನ ಬುತ್ತಿಯು ಹುತ್ತದಂತೆ ಆವರಿಸಿರುತ್ತದೆ..
ಮರೆವು ಯಾವತ್ತೂ ಹಳೆಯದನ್ನು ಮರೆಸಿಲ್ಲ..ಅಥವಾ ಮಾಸುವಂತೆ ಮಾಡಿಲ್ಲ..
ಸತ್ಯವೇನೆಂದರೆ ಸದೃಢ ಮನಸ್ಸಿನ ನಾವೇ ಹಳೆಯದನ್ನು ನೆನೆಸಿಕೊಳ್ಳದೆ ಬದುಕುತ್ತಿರುವುದು.
65.
ಕ್ಷಮಿಸು ಗೆಳತಿ
ಬೇಸರವ ಕಾಡೈತಿ
ನಿನ್ನ ಮನವ ಕಲಕಿ..ನೋವು ಕೊಟ್ಟೆ..
ಮಾತಿನ ಮಲ್ಲೆಯ ಮೌನಕ್ಕೆ ನೂಕಿ ಬಿಟ್ಟೆ.
66.
ಪ್ರೀತಿ ಕದ್ದ ಒಲವೆ...
ಮುದ್ದು ಮುದ್ದು ಚೆಲುವೆ...
ನೀ ನಕ್ಕಾಗ ನನ್ನ ಮನದಲ್ಲಿ ನಲಿವೇ...
67.
ವಧುವಾಗದೇನೆ ಕನಸ ವಧೆ ಮಾಡಿದೆ..
ಸ್ವಲ್ಪ ಸಲಿಗೆ ನೀಡಿ ಮೃದುವಾಗು...ಮಧುವಾಗು..
ನಿನ್ನ ನಾನು ಆವರಿಸಲು.....
68.
ಎಲ್ಲ ಅರಿತ ಮೇಲೆ...ನೀ ನನ್ನ ತೊರೆದ ಮೇಲೆ..
ಮರೆತು ಹೋದೆ ನಾ.
ನಿನ್ನ ಮೌನದ ಜೊತೆ ಬೆರೆತು ಹೋದೆ ನಾ.
69.
ಅಂತರವೆನ್ನುವುದು ಆಂತರ್ಯ ತೆರದುಕೊಳ್ಳುವವರೆಗೆ ಮಾತ್ರ ದೂರ..
ಸ್ನೇಹ ಬೆಸೆದ ನಂತರ ಎಲ್ಲವೂ ಹತ್ತಿರ.
70.
ಬೆಳಿಗ್ಗೆ ಘಮ್ಮೆಂದು ಅರಳಿದ ಕುಸುಮವು
ಸಂಜೆವೇಳೆಗೆ ತನ್ನೆಲ್ಲ ಕಂಪನು ಬೀರಿ
ಬದುಕು ಸಾರ್ಥಕಗೊಳಿಸಿಕೊಂಡಿತು.
ಕೊನೆಗೆ ಆಸ್ವಾದಿಸುವ ಕಂಗಳಿಗೆ ನೋವು ನೀಡಿತು.
71.
ಖಾಲಿ ಖಾಲಿ ಜೀವನಕ್ಕೇಕೆ ಬೇಲಿ
ದೋಚಲು ಬಾಚಲು ಇಲ್ಲೇನಿದೆ....
72.
ನಿನ್ನ ಪ್ರೀತಿಯ ಸಾಗರದಲ್ಲಿ ಇಳಿದ ಮೇಲೆ.
ನಿದ್ದೆಯೇ ಬಾರದು ಮುದ್ದು ಕಣ್ಗಳಿಗೆ
ಕನಸೇ ಬೀಳದು ಮನಸ್ಸಿನ ಭಾವಗಳಿಗೆ..
73.
ಮನ ಮೆರೆಸಿದ ಚೆಲುವು
ಮೈ ಮರೆಸಿದ ಒಲವು
ತಿರುಗ ಬೇಕೆಂದ ಪ್ರತಿ ಸಲವು
ಬಯಕೆ ಹಲವು.
74.
ಹಸಿದ ಹಸುವು ಹಸಿವಾಯ್ತೆಂದು ಹಸಿರು ಹುಲ್ಲನಲ್ಲದೆ ಹಸಿಯ ಮಾಂಸ ಮುಟ್ಟದು..
ಹಾಗೆ ಹಸಿವ ಹೆತ್ತವರು ಬಿದುರು ಹೆಡಿಗೆಯಲ್ಲಿ ಕದಿರ ಹೆಕ್ಕುವರು ಹೊರತು ಹೇಸಿಗೆಯ ಕಸುಬಿನಲ್ಲಿ ಹಳಸಿದನ್ನವ ಉಣ್ಣರು...
75.
ಹಾರೋ ಹಕ್ಕಿಗೆ 🕊 ಹಾರೋ ಹಕ್ಕಿದೆ..
76.
ಆಸೆಯ ಹಂಚಿಕೊಂಡು
ಕಾಯುವ ಕಾತುರ ನನಗಿಲ್ಲ
ಭಾಷೆಯ ನೀಡಿದಂತೆ
ನೀ ಬಂದು ಸೇರುವೆಯಲ್ಲ
ಏಕಾಂತಕ್ಕಿಂದು
ಕೊನೆಯಿಡು ನನ್ನ ನಲ್ಲ..
77.
ಹೆಜ್ಜೆ ಹೆಜ್ಜೆಗೂ ನಿನ್ನ ಗೆಜ್ಜೆ ಕೇಳಿದಂತೆ
ಎದುರು ನಿಲ್ಲದ ನಿನ್ನ ಲಜ್ಜೆಯ ಕಂಪನ
ಹೆಚ್ಚು ಹುಚ್ಚು ಹಿಡಿಸದಿರು ಹುಡುಗಿ
ಕೊಚ್ಚಿ ಹೋಗುತಿರುವುದು ಮನಸ್ಸು
ನಿನ್ನ ಪ್ರೀತಿ ಪ್ರವಾಹದಲ್ಲಿ
78.
ಕಾರಣ ತಿಳಿಸದ ಕೋರಿಕೆ ಬೇಕಿಲ್ಲ.
ಮೋಡದ ಮರೆಯ ಹಾರೈಕೆಯ ಸ್ವಾಗತ ಸಾಕೀಗ
ಭಾರದ ಹೃದಯದ ಆರದ ನೋವಿಗೆ
ತಂಪೆರೆಯದ ಭಾವ ಲಹರಿ ಯಾಕೀಗ
79.
ನಿನ್ನ ಬಾಳಿಗೆ ಕಂದ ನಾನಮ್ಮ
ನಿನ್ನ ಜೋಲಿಗೆ ಚಂದ ನಾನಮ್ಮ
ಬಾಳು ಸಾಗುವುದು ಪ್ರತಿ ಕ್ಷಣ
ಜೋಲಿ ತೂಗುವೆ ಪ್ರತಿ ದಿನ
80.
ಬಾಡಿಗೆಯಾದರೇನು...ಭೋಗದ್ದಾದರೇನು.ಮನದ ಮುಂದೆ ಮನೆ ಶಾಶ್ವತವಲ್ಲ.
ಸಂಬಂಧಗಳು ಪ್ರೇಮದಲ್ಲಿ ಬಂಧಿಸಲಾಗದಿದ್ದರೇನಂತೆ
ಸ್ನೇಹದಲ್ಲಿ ಸಂಧಿಸಲಾಗದೇ?
81.
ಚಂದ ನೀನು ಚಂದಿರ ನೀನು ಅಂದದ ನಿನ್ನ ಮೊಗಕೆ
ಒಂದು ಬಿಂದು ಇಡಲೇ ನಾನು..
ಬಾಳ ದಾರಿಯಲಿ ಬಾನ ಕುಸುಮ ನೀ
ಬಹಳ ಬಳಿ ಬಂದು ಭಾದೆ ಕೊಡಲೇ ಏನು?
82.
ನಿನ್ನ ನಗುವಿನ ಮೊಗ ಸದಾ ನೋಡುವಾಸೆ..
ಅಲ್ಪವಾದರೂ ಪರವಾಗಿಲ್ಲ..ಸೆಲ್ಪಿ ತೆಗೆದಿಡು...
ಆ ನಗುವ ಸೆರೆಯಲ್ಲಿ ಬಂಧಿಸಿ ಬಿಡು...
83.
ನೆನಪಿನ ಕಾಯಿಲೆಗಳಿಗೆ ಮದ್ದು ಮಾಡಬೇಡಿ..
ಪದೆ ಪದೆ ಕಾಡಿ ನಿಮ್ಮ ಮುದ್ದು ಮಾಡಲು ಬಿಡಿ..
84.
ಮನಸ್ಸಿಗೆ...ಅಹಂಕಾರದ ಅಲಂಕಾರ ಮಾಡಿ...
ಕೇವಲ ಭಾವನೆಗಳಿಲ್ಲದ ಬಣ್ಣನೆಯ ಮಾತಾಡಿ
ಸಂಬಂಧಗಳ ಬೆಸೆಯಲು ಪ್ರಯತ್ನ ಪಡಬೇಡಿ...
85.
ಹೊಸ ವರುಷ ಪ್ರತಿ ನಿಮಿಷ ಹರುಷ ತರಲಿ ತರಲಿ..
ಪ್ರತಿ ವರುಷ ನೂರು ಕನಸು ನಮಗೆ ಇರಲಿ ಇರಲಿ..
ರಾಷ್ಟ್ರ ಪ್ರಗತಿಯ ಪಥದಲ್ಲಿ
ಜನ ನೆಮ್ಮದಿಯ ಗತಿಯಲ್ಲಿ
ಸಾಗುತಿರಲಿ...
86.
ವ್ಯಕ್ತಿಗಳು ಬದಲಾಗುತ್ತಿದ್ದಾರೆ ಎಂದರೆ ಅವರ ನಿರೀಕ್ಷೆಗಳು
ಹುಸಿಯಾಗುತ್ತಿವೆ ಎಂದರ್ಥ..
ಅವರಿಗೆ ಬೇಕಿರುವುದು ನಿಮ್ಮಿಂದ ಸಾಂತ್ವನವಷ್ಟೆ..
87.
ಹಂಬಲಿಸುವ ಹೃದಯಕ್ಕಾಗಿ ಮನದಾಳದ ಮೌನವನ್ನು ಸರಿಸಲು
ಬೆಂಬಲಿಸುವ ಮನಸ್ಸೆ ಮರೆಯಾಗಿದೆ....
88.
ನೀ ದೂರಿದ್ದರು ನನ್ನ ಮನ ನಿನ್ನ ಬಳಿ ಸುಳಿದಾಡಿದೆ....
ನೀ ದೂರಾದರೂ ನನಗರಿವಿಲ್ಲದೆ ನಿನ್ನ ನೆಪ ಮಾಡಿದೆ..
89.
ಮೊನ್ನೆ ತೆರದ ಹೃದಯಕೆ
ನಿನ್ನೆಯು ಮರೆತೆ ಕದ ಹಾಕಲು
ಎಂತ ಸಮಯವರಿತೆ ನೀ ಬಂದು ಕೂರಲು..
90.
ಇಂದೇಕೋ ಹೃದಯ ಸೋತಿದೆ
ಮೌನದಲ್ಲೂ ಕೇಳದ ಸಾವಿರ ಮಾತಿದೆ
ತೀರವೆ ಇರದ ದೂರ ಬಾಳಲಿ ಬೆರೆತಿದೆ.....
91.
ಮುಸುಕಿನ ಮುಂಜಾವಲ್ಲಿ ಇಳೆಗೆ ಬಿದ್ದ ಇಬ್ಬನಿ ಮುತ್ತಾಗುವುದೆಂದು ಕೊಂಡರೆ
ಭಾಸ್ಕರ ಬಾಷ್ಪೀಕರಿಸಿದನೇ?
92.
ಮೌನ ಮುರಿಯಲಿ
ಮಾತಿನ ಮರೆಯಲಿ
ಮೈತ್ರಿಯ ಕರೆಯಲಿ 👋👋
93.
ನಿನ್ನೆ ತೋರಿದೆ ಮೊಗವ
ಇಂದು ತೋರಿದೆ ನಗುವ
ನಿನ್ನ ನಗುವಿನ ಅಲೆ ಅಲೆಯಲ್ಲೂ
ತುಂಬಿರುವುದು ನನ್ನ ಜೀವ.🌹
94.
ಅವನು ಎಲ್ಲರಿಗಿಂತ ಮುಂದಿದ್ದ..
ತುಸು ಬೇಗನೆ ಸಾವಾರಿಸಿಕೊಂಡು ಮುನ್ನೆಡೆದ.... 😢
95.
ಆಹಾ ಬಾನಾಡಿ ನೋಡು ಅಲ್ಲಿ ಸಾವಿರ ಸಾವಿರ ನೋಟವಿದೆ
ಕಣ್ಣು ಕೊರೈಸುವ ಮಾಟವಿದೆ
ಅಂದಿಗೂ ಇಂದಿಗೂ ಲೆಕ್ಕಕ್ಕೆ ಸಿಗದ ಸಾವಿರ ಸಾವಿರ ತಾರೆ ಇದೆ..
96.
ಒಂದು ಸಣ್ಣ ಅನುಮಾನ ದೊಡ್ಡ ದುರಂತಕ್ಕೆ ಕಾರಣವಾಗುವುದು ಎಂಬ ಕಾರಣಕ್ಕಾಗಿ ಚಿಕ್ಕದೊಂದು ಸುಳ್ಳು ಹೇಳ ಹೊರಟಿರುವೆ...ಕ್ಷಮಿಸುವೆಯಾ?...
97.
ರಕತದಿ ಬರೆದೆನು ಇದ ನಾನು
ಬಿಕ್ಕುತಲೆ ಓದಿದೆ ಭಯವೇನು?
98.
ಅಂದು ಕಂಡಂತೆ ಎಂದು ಕಾಣುವಿ...?
ಮನದಲಿ ಅಂದುಕೊಂಡಂತೆ ಎಂದೂ ಕಾಣುವೆ
ನೀನಂದು ಕಂಡಂತೆ ಎಂದು ಕಾಣುವಿ?
ನನಗೆ ನೀ ಅಂದು ಕಂಡಂತೆ ಇಂದು ಕಾಣುವೆ..😂😂😇😇🤔
99.
ಬಾನು ಬಾಗಿರುವುದು ಭಾರದಿಂದಲ್ಲ..
ಭುವಿಯ ಬಾಂಧವ್ಯ ಬೆಸೆಯಲು..
100.
ನಿನ್ನ ಕೋಪದುರಿ
ನಾ ಬೆಂದು ಹೋಗವ ಪರಿ
ಯಾಕೆ ಬೇಕು, ನೀ ಹೇಳಿದ್ದೆ ಸರಿ.. 😀😀
101.
ಹೊತ್ತು ಸಾಗುವ ಮುನ್ನ ನೀ ಯೋಚಿಸು..
ನಿನ್ನ ಹೊತ್ತು ಸಾಗುವ ಮುನ್ನ ನೀ ಸಾಧಿಸು
102.
ಅದೃಷ್ಟ ಅರಸುವ ಸೊತ್ತಲ್ಲ...
ಅದ್ರಷ್ಟಕ್ಕೆ ದೊರೆಯುವ ಮುತ್ತು...
103.
ಅವಳ ಮರಳು ಮಾಡಿದ ಮಲ್ಲಿಗೆ
ತರುಣಿ ತುರಬನೇರತು ಮೆಲ್ಲಗೆ
ಅವಳು ಮುಡಿದುದಾದರೂ ಕಂಪು ಮಾತ್ರ ನಲ್ಲಗೆ...🌼
104.
ಹುಣ್ಣಿಮೆ ರಾತ್ರಿಯಲಿ
ಹೆಣ್ಣಿನ ಮನದಲ್ಲಿ
ಸಣ್ಣನೆ ನಗು ತರಿಸಿ
ಎಲ್ಲಾ ದೋಚಿದ್ದ
ಮನವೆಲ್ಲಾ ದೋಚಿದ್ದ
105.
ಬಣ್ಣ ಬಯಲಿನಲ್ಲಿ
ಸಣ್ಣ ಮಳೆಯಲಿ ನಿನ್ನ ನೆನಪೇ ಕಾಡುತಿರುವುದು..
ಭಾವ ಭಿತ್ತಿಯೊಳು
ತನುವ ನೆತ್ತರೊಳು ನೀನೇ ಹರಿಯುತ್ತಿರುವುದು