happiness ಎನ್ನುವುದು ಬಾಹ್ಯ ಪ್ರಕ್ರಿಯೆಯಲ್ಲ..ಇದೊಂದು ಆಂತರಿಕ ಮಾನಸಿಕ ಸ್ಥಿತಿ.
ಐಹಿಕ ಭೋಗಗಳು ,ವಸ್ತುಗಳು,ಸೌಲಭ್ಯಗಳು ಪಂಚೇಂದ್ರಿಯಗಳನ್ನು ತಣಿಸಿ ಮನಸ್ಸನ್ನು ಮುದಗೊಳಿಸುತ್ತದೆ..
ಈ ಮನಮುದಗೊಳ್ಳುವ ಪ್ರಕ್ರಿಯೆ ಆದಷ್ಟು ಮನಸ್ಸಿನಲ್ಲೇ ಅಂಕುರಿಸಿದರೆ ಖುಷಿಯನ್ನು ನಾವೇ ಸೃಷ್ಟಿಸಿದಂತೆ..
ಯಾವಾಗಲೂ ನಮ್ಮ ಖುಷಿಯನ್ನು ನಾವೇ ಕಂಡುಕೊಳ್ಳಬೇಕು..ಸಾಧ್ಯವಾದಷ್ಟು ಸಣ್ಣ ಪುಟ್ಟ ವಿಷಯಗಳಲ್ಲಿ ಸಂತೋಷದ ಅಲೆಯ ಸೃಷ್ಟಿಸಿ ಖುಷಿ ಪಡಬೇಕು..
ಬದುಕು ಎಂದ ಮೇಲೆ ಏಳು ಬೀಳು ಕಷ್ಟ ಸುಖ ಸಾಮಾನ್ಯ.ಬೇಸರಿಸಿ ಮರುಗುವುದರಿಂದ ದುಃಖ ದೂರವಾಗದು.. ಹಾಗಿದ್ದ ಮೇಲೆ ಚಿಂತೆಯ ಕ್ರಾಂತಿ ಯಾಕೆ?
ಇಲ್ಲಿ ಇನ್ನೊಂದು ಪ್ರಶ್ನೆ ಉದ್ಭವಿಸಬಹುದು.. ಚಿಂತೆ ಇಲ್ಲದೆ ಚಿಂತನೆ ಹೇಗೆ ಸಾಧ್ಯ? ಯೋಚಿಸದೆ ಸಮಸ್ಯೆಯನ್ನು ಹೇಗೆ ಬಗೆಹರಿಸುವುದು..
ಯೋಚನೆಯೆನ್ನುವುದು ಗಂಭೀರವಾಗಿದ್ದು ಸಕಾರಾತ್ಮಕತೆಯಿಂದ ಕೂಡಿರಬೇಕು ಹೊರತು ಭಾವೋದ್ರಿಕ್ತವಾಗಿ ದುಃಖತೃಪ್ತವಾಗಿರಬಾರದು.
ಹಸನ್ಮುಖಿಯಾಗಿ ಸವಾಲುಗಳನ್ನು ಸ್ವೀಕರಿಸುತ್ತ ಮೊದಲು ನಮ್ಮನ್ನು ನಾವು ಪ್ರೀತಿಸುವುದರಿಂದ ಈ ಖುಷಿ ಸಿಗಬಹುದು.
No comments:
Post a Comment