ವಿಶ್ವವೇ ಸಾರುತ್ತಿರುವುದು ಸೌಹಾರ್ದತೆಯ ನೀತಿ
ಆದರೆ ಎಲ್ಲಿದೆ ಬಂಧುಗಳೆ ಶಾಂತಿ?
ಕೊಟ್ಟು ಸಲಹುವವರಾರು ಪ್ರೀತಿ
ಭಯ ಬುಗಿಲೆಬ್ಬಿಸಿ ಭಯೋತ್ಪಾದಕರಾಡುತ್ತಿದ್ದ
ಮಾತು ದೇಶದಲ್ಲಿ ಕ್ರಾಂತಿ
ಆರ್ಥ ಮಾಡಿಕೊಳ್ಳುವರಾರು
ಮುಗ್ಧ ಮನಸ್ಸುಗಳ ಭೀತಿ
ಹೃದಯ ಹೀನವಾಗಿ ತಾಂಡವಾಡುತ್ತಿದೆ ಅನೀತಿ
ಅಸ್ಥಿರತೆಯ ಶೋಕ ಸ್ತುತಿ
ಬುದ್ದಿ ವಿಕಾಸಿಸುತ್ತಿದ್ದಂತೆ
ಮನುಷ್ಯನಾಗುತ್ತಿರುವನೇ ಸ್ವಾರ್ಥಿ?
ಅದೆಷ್ಟೋ ನಾಶಕ್ಕಾಗಿಯೇ ಹುಟ್ಟಿಕೊಂಡ ಸಂಸ್ಥೆ
ಸುಮ್ಮನೆ ವ್ಯರ್ಥವಾಗುವ ಶಕ್ತಿ
ಆರ್ಥವಿಲ್ಲದ ಆತ್ಮಾಹುತಿ
ತಪ್ಪಲ್ಲವೇ ತಮ್ಮ ತನವ ಮರೆತ ರೀತಿ.
No comments:
Post a Comment