Tuesday, 19 March 2024

ಮಾಡರ್ನ್ ಕವನ

 

ಅಂದು ಬಡತನವಿತ್ತು
ತುತ್ತು ಅನ್ನಕ್ಕೂ ಹಾಹಾಕಾರವಿತ್ತು.
ಅಗುಳ ಮೇಲೆ ದೃಷ್ಟಿ ಹೊರತು
ಅಂಗೈಲಿ ಹಿಡಿದಿರುವ ಚಿನ್ನದ ತಟ್ಟೆ ಮೇಲಲ್ಲಾ.

ಹಸಿದ ಆವೇಶದ ಭರದಲ್ಲಿ
ತುತ್ತು ನೆತ್ತಿಗೇರಿ
ಹಪಹಪಿಸುವ ಹೊಟ್ಟೆ
ನುಂಗಿ ನೀರು ಕುಡಿದಿತ್ತು.

ಹೊಟ್ಟೆ ತುಂಬಿದ ಮೇಲೂ
ಬಡತನವಿತ್ತು.
ಕಾರಿನ ಮೇಲೆ ಕುಳಿತು
ಭಿಕ್ಷೆ ಬೇಡುವಂತೆ.

ಹೊಟ್ಟೆ ತುಂಬಿದ ಹಾಗೆ
ರಟ್ಟೆ ತುಂಬಿತು.
ಅನ್ನದ ಮೇಲಿನ ದೃಷ್ಟಿ ಹೊನ್ನಿನ ಮೇಲೆ
ಕೈ ಕೈ ಮೇಲಾಯಿತು..


No comments: