Tuesday, 19 March 2024

ಸರ(ಹ)ಕಾರಿ ನೌಕರಿ

 

ನಿನ್ನೆಯಷ್ಟೆ ಬಂದ ವರದಿ ನನ್ನನ್ನು ತುಂಬ ದಿಗಿಲುಗೊಳಿಸಿತ್ತು.
ಈ ದಿನ ಕೈಗಳು ತಮ್ಮಷ್ಟಕ್ಕೆ ತಮ್ಮ ಕೆಲಸ ಮಾಡುತ್ತಿದ್ದರೂ ನನ್ನ ಮನವೇಕೊ ಗೊಂದಲದ ಬೀಡಾಗಿತ್ತು. ಹೇಗೆ ನಿಭಾಯಿಸಲಿ ಸರ್ಕಾರ ನನಗೆ ನೀಡಿದ ಕರ್ತವ್ಯವನ್ನು,

ಕರ್ತವ್ಯವೇ ದೇವರು ಅದನ್ನು ಶೃದ್ದಾಪೂರಕವಾಗಿ ಮಾಡಬೇಕು ಎನ್ನತ್ತಿದ್ದ ತಂದೆಯ ಮಾತುಗಳು ಈಗ ದೈರ್ಯ ತುಂಬುತ್ತಿಲ್ಲ.

ನಾನು ಅದೆಷ್ಟೊ ಕನಸು ಕಂಡವಳು, ಇಂತಹದೊಂದು ದಿನ ಯೋಚಿಸಿಯೇ ಇರಲಿಲ್ಲ.
ಸರಕಾರಿ ನೌಕರಿ ನಮ್ಮಂತವರ ಪಾಲಿಗಲ್ಲ, ಅದು ದುಡ್ಡಿದ್ದವರ ಆಸ್ತಿ ಅನ್ನೊ ತತ್ವವನ್ನೆ ನಂಬಿಕೊಂಡಿದ್ದ ಬಡತನದ ಕುಟುಂಬ ನಮ್ಮದು.
ರಿಕ್ಷಾ ಓಡಿಸುತ್ತಿದ್ದ ನಮ್ಮ ತಂದೆ ಹಗಲು ರಾತ್ರಿ ಎನ್ನದೆ ಬಾಡಿಗೆ ಮಾಡುತ್ತಿದ್ದರು.ಅವರಾಸೆ ಒಂದೆ ಆಗಿತ್ತು ಹೇಗಾದರು ಮಾಡಿ ನನ್ನ ಮಗಳನ್ನು ಕಲ್ಲೆಕಟರ್ ಮಾಡುತ್ತೇನೆ ಎನ್ನುತ್ತಿದ್ದರು. ಎಷ್ಟೊ ಸಾರಿ ನಾನು ನಕ್ಕು ಅದು ಕಲ್ಲೆಕಟರ್ ಅಲ್ಲ...ಕಲೆಕ್ಟರ್(district collector)
ಅನ್ನುತ್ತಿದ್ದೆ.

ನನ್ನ ತಂದೆಗೆ ನಾನಂದ್ರೆ ತುಂಬ ಅಭಿಮಾನ ಜೊತೆಗೆ ಹೆಮ್ಮೆ ಕೂಡ.ಈ ಇಚ್ಛಾಶಕ್ತಿಯೇ ನನ್ನ ಓದಿನೆಡೆಗೆ ತಳ್ಳಿತ್ತು.
ಅವರಾಸೆಯಂತೆ ಅದೆಷ್ಟೋ ಸರ್ಕಾರಿ ಪರೀಕ್ಷೆ ಬರೆದಿರುವ ನಾನು ಕೊನೆಗೆ ಅದರಾಸೆ ಬಿಟ್ಟು ಬಿಟ್ಟಿದ್ದೆ.

ನನ್ನ ಮಗಳಿಗೆ ಸರಕಾರಿ ಕೆಲಸ ಸಿಗುತ್ತೆ ತನ್ನ ತಮ್ಮಂದಿರನ್ನ ಓದಿಸ್ತಾಳೆ.ನಮ್ಮ ಸಂಸಾರವನ್ನು ಮೇಲೆತ್ತುತ್ತಾಳೆ ಎನ್ನುವ ಅವರ  ನಂಬಿಕೆಗೆ ಅತ್ತು ಬಿಟ್ಟಿದ್ದೆ.

ಕೊನೆಯ ಪ್ರಯತ್ನ ಎನ್ನುವಂತೆ ನಗರಾಭಿವೃದ್ಧಿ ಕಾರ್ಯಲಯದಲ್ಲಿ ಎರಡನೆ ದರ್ಜೆಯ ಕ್ಲರ್ಕ್ ಪೋಸ್ಟ್ ದೊರೆತ್ತದ್ದು ನನ್ನ ಪುಣ್ಯವೆ.
ಈ ಎರಡು ವರ್ಷದಲ್ಲಿ ನಮ್ಮ ಸಂಸಾರ ಸ್ವಲ್ಪ ಸುಧಾರಿಸಿತ್ತು.

ಮನೆಗೆ ತೆರಳಿದಾಗ ಆತಂಕ ಕಾಡುತ್ತಿತ್ತು, ತಿಂಡಿ ತಿನ್ನುವ ಮನಸ್ಸಿರಲಿಲ್ಲ, ಕೋಣೆ ಸೇರಿದ ನನ್ನ ಮನಸ್ಸು ಇನ್ನೂ ಭಾರವಾಗಿತ್ತು.

ಇತ್ತೀಚಿಗೆ  ನಗರದಲ್ಲಿ ಹೆಚ್ಚಿದ ಕೋವಿಡ್ ೧೯ ಪ್ರಕರಣದಿಂದ ಸರ್ಕಾರವಂತು ಹೈರಣವಾಗಿತ್ತು. ಸರ್ಕಾರಿ ನೌಕರರನ್ನು ಬಳಸಿಕೊಂಡು  ರೋಗ ನಿರ್ಮೂಲನೆಗೆ ಕಾರ್ಯತಂತ್ರ ರೂಪಿಸುತ್ತಿದೆ.

ಹೌದು ನಾವುಗಳು ಸೊಂಕಿತರ ಬೇಟಿ ಮಾಡಿ ಮಾಹಿತಿ ಕಲೆ ಹಾಕಬೇಕಿತ್ತು.
ನಾವೇನು ಡಾಕ್ಟರ್ಸ ಅಲ್ವಲ್ಲಾ..ನಾವು ಈ ಕೆಲಸವನ್ನೆ ಮಾಡಬೇಕೆಂದಿದ್ದರೆ ವೈದ್ಯ ವೃತ್ತಿ ಆರಿಸಿಕೊಳ್ಳಬಹುದಿತ್ತಲ್ವಾ..

ನನ್ನ ಹಣೆ ಬರಹ..ಯಾರೇನು ಮಾಡಿಯಾರು..
ನನ್ನಿಂದ ಮನೆಯವರಿಗೂ ತೊಂದರೆ..
ಈಗಷ್ಟೇ ಬಿ.ಕಾಂ ಸೇರಿದ ತಮ್ಮ, ಚಿಕ್ಕಿ ಅನ್ನುತ್ತಿದ್ದ ಮುದ್ದು ಪುಟ್ಟಿ. ವಯಸ್ಸಾದ ಅಪ್ಪ..ಅಮ್ಮ  ಹೀಗೆ ಒಬ್ಬೊಬ್ಬರು ಕಣ್ಣ ಮುಂದೆ ಬಂದು ಹೋದರು.
ಜೀವನಕ್ಕೆ ಆದಾಯವಾಗಿದ್ದ ಕೆಲಸ ಬಿಡುವಂತೆನು ಇರಲಿಲ್ಲ..
ಕೆಲಸ ಮಾಡಲು ಹೋಗಲು ಕರೋನ ಭಯ..ಈ ಗೊಂದಲದಲ್ಲಿ ನಾ ಹೇಗೆ ಕರ್ತವ್ಯ ನಿರ್ವಹಿಸಲು ಸಾಧ್ಯ
ಕೊನೆಗೊಂದು ನಿರ್ಧಾರಕ್ಕೆ ಬರಲೇ ಬೇಕಾಯಿತು.

ಕಣ್ಣಿರಿನ ಕೋಡಿಯಲ್ಲಿ ರಿಸೈನ್ ಲೆಟರ್ ಟೈಪ ಮಾಡಿದೆ.
ಈ ಕೆಲಸಕ್ಕಾಗಿ ಪಟ್ಟಿದ್ದ ಕಷ್ಟ ನೆನೆದು ದುಃಖ ಉಮ್ಮಳಿಸಿತು.ಅಲ್ಲೆ ಮರದ ಕುರ್ಚಿಗೆ ಒರಗಿದ್ದೆ..

ತಂದೆಯ ಕೈ ಕೆನ್ನೆಯ ಸವರಿದಾಗ  ಕಣ್ಣಂಚಿನ ನೀರನ್ನು ಒರೆಸಿಕೊಂಡು ಎಲ್ಲವ ಹೇಳಿಬಿಟ್ಟೆ..
ಅವರು ನಗುತ್ತಾ ಓದಿದವಳಾಗಿ ಇದಕ್ಕೆಲ್ಲ ಹೆದರೋದ..
ಇದಕ್ಕೆಲ್ಲ ಭಯವೇಕೆ.
ನಾವೆಲ್ಲ ಇಲ್ಲವೊ ನಿನ್ನ ಜೊತೆ ...ಎಂದು ದೈರ್ಯ ತುಂಬಿದರು.

ತಂದೆಯ ಸ್ನೇಹಿತರೊಬ್ಬರು ಹೇಳಿದ ಮಾತಿದು.. ನಾನು ಹೆದರುತ್ತಿದ್ದೆ ಮೊದಲು...ಈಗ ಅರಿವಾಗಿದೆ ..ನಮ್ಮ ಅವಶ್ಯಕತೆ ಸಮಾಜಕ್ಕಿದೆ..ಇಂತಹ  ಸನ್ನಿವೇಶದಲ್ಲಿ ಕಾರ್ಯಮಾಡುವುದು ಅಗತ್ಯವಾಗಿದೆ.ನಿನಂದು ಕೊಂಡಂತೆ ಭಯಪಡೊದು  ಏನು ಇಲ್ಲ. ಮುನ್ನೆಚ್ಚರಿಕೆ ..ಜಾಗೃತೆಯಿಂದ ಕೆಲಸ ಮಾಡು..ಎಲ್ಲದಕ್ಕೂ ದೈರ್ಯವಾಗಿರು.

ಆಗೋದ ಅಗಲಿ ಅಂತ ದೈರ್ಯಮಾಡಿ ಹೊರಟಿದ್ದೆ. ಹೌದು ಅವರು ಹೇಳಿದ ಮಾತು  ನಿಜ..ಮೊದಲ ದಿನ ತುಂಬ ಭಯ ಪಟ್ಟಿದ್ದೆ..ಆದರೆ ಈಗ ಹಾಗಿಲ್ಲ..ಎಲ್ಲವೂ ಟಿ.ವಿ. ನ್ಯೂಸ್ ಗಳಂತಿಲ್ಲ...

ನಾನು ಚಪ್ಪಾಳೆ ತಟ್ಟಿದ್ದೇನೆ. ಘಂಟೆ ಬಾರಿಸಿದ್ದೇನೆ
ನಾನು ಹೆಮ್ಮೆ ಪಟ್ಟಿದ್ದೇನೆ ಕೋವಿಡ್ ವಾರಿಯರ್ಸ್‌ಗೆ..ಅವರ ಕಾರ್ಯಕ್ಕೆ,
ಸ್ವತಃ ನಾವು ಆ ಕಾರ್ಯಕ್ಕೆ ಗುರುತಿಸಲ್ಪಟ್ಟಾಗ ಹೀಗೇಕೆ ಹಿಂಜರಿಕೆ.
ಭಯವೇಕೆ ನಾವು ಜಾಗೃತವಾಗಿ ಸಮಾಜದೊಂದಿಗೆ ಕೈ ಜೋಡಿಸೋಣ...

 


No comments: