ಹೌದು ಜೀವನದಲ್ಲಿ ಸುಖ- ದುಃಖಗಳು ಶಾಶ್ವತವಲ್ಲ..
ಇಲ್ಲಿ ಎಲ್ಲವೂ ಅನಿಶ್ಚಿತ. ಹೀಗಿರುವಾಗ ನಮ್ಮ ಮನಸ್ಸನ್ನು ನಾವೇ ಅಣಿಗೊಳಿಸಬೇಕು.ಬರುವ ಸಂತೋಷವನ್ನು ಆನಂದಿಸುವುದರಲ್ಲಿ ತಪ್ಪಿಲ್ಲ..ಅದರೆ ಅದನ್ನು ಸಿಂಪಲಾಗಿ ಸ್ವೀಕರಿಸುವುದರಿಂದ ಮನಸ್ಸು ಉನ್ಮಾನದಲ್ಲಿ ಹಿಗ್ಗುವುದಿಲ್ಲ.
ಮೊದಲು ಸುಖವನ್ನು ಸಾಮಾನ್ಯವಾಗಿ ಸ್ವೀಕರಿಸಲು ಕಲಿತರೆ ಸಾಕು..ಇದೆ ಮಾರ್ಗ ಮುಂದೆ ದುಃಖವನ್ನು ಕುಗ್ಗದೇ ಸ್ಥಿತ ಪ್ರಜ್ಞೆಯಿಂದ ಸ್ವೀಕರಿಸಲು ಸಹಾಯ ಮಾಡುವುದು.
ಯಾವ ಮನದೊಡೆಯ ತನ್ನ ಮನ ಒಡೆಯಲು ಬಿಡದೆ
ಮನಸ್ಸನ್ನು ತನ್ನ ಹಿಡಿತದಲ್ಲಿ ಹಿಡಿಯ ಬಯಸುತ್ತಾನೊ
ಅಂತವನು ಹಿಗ್ಗದೆ ಕುಗ್ಗದೆ ಸ್ಥಿತಪ್ರಜ್ಞೆಯಿಂದಿರುತ್ತಾನೆ.
No comments:
Post a Comment