ನೀ ನನ್ನ ತೊರೆದರೂ ನಾ ನಿನ್ನ ಮರೆಯೆನು
ಪ್ರತಿ ಕ್ಷಣ ಪ್ರತಿ ದಿನ ನಿನ್ನ ಬಿಂಬ ಮೂಡಿದೆ ಮನದಲಿ
ಕಣ್ಣ ತುಂಬಿಕೊಳ್ಳಲು ನೀನಿಲ್ಲ ಜಗದಲಿ
ಜೋಪಾನ ಮಾಡೋ ಹೊತ್ತಿಗೆ
ಅದಲು ಬದಲಾಯಿತೆ ಹೃದಯ
ಹೊರಟಿರುವೆ ಎಲ್ಲಿಗೆ...ಇಷ್ಟೊಂದು ಆತುರ
ಯಾರ ಕರೆಯ ದಾವಂತಕೆ..
ನಾಳೆಯ ನಾ ಹೀಗೆ ಕಳೆಯುವೆ.
ನಿನ್ನೆಯ ನಿನ್ನ ನೆನಪಲಿ.
ಇಂದು ಮಾತ್ರ ಒಂದು ಕೋರಿಕೆ..
ನೆರವೇರಿಸೊ ಬಂಧು ಮಿತ್ರನೆ..
ಕಾಣುವ ಕಂಗಳೆಲ್ಲಾ ಮಂಕಾದವು
ನೀನಿಲ್ಲದೇ ಕಾಡುವ ಕನಸೆಲ್ಲಾ ದಂಗಾದವು
ಅನುರಾಗದ ಅಪರಾಧಿ ನಾ..
ಅನುಗಾಲದ ನಿನ್ನ ಪ್ರೀತಿ ಮುಂದೆ..
ಮೌನಿ ನೀನಾಗ ಬೇಡ
ಮೌನದಲೂ ಮಾತಾಡುವೆ ನಾನೀಗ.
ಧ್ಯಾನಿ ನೀನಾಗ ಬೇಡ
ನಿನ್ನ ಧ್ಯಾನದಲ್ಲಿ ನಾನಿರುವಾಗ.
ಮರು ಜನ್ಮಕ್ಕೂ ನೂರು ಜನ್ಮಕ್ಕೂ
ನಿನ್ನನ್ನೆ ಬಯಸುವೆ
ಈ ಜನ್ಮದ ಅಸಲೂ ಬಾಕಿ ಇದೆ.
ವಸೂಲಿ ಇನ್ನೂ ಇದೆ..
ಶೇಷ ಸಂಭಾಷಣೆ ನೆಡದಿದೆಯೀಗ
ಹೇಳ ಬೇಕಾದುದು ತುಂಬ ಇದೆ.
No comments:
Post a Comment