ನಮ್ಮೂರು ಬಲು ಸುಂದರ
ಅಂಟಿಕೊಂಡಿರುವುದು ಕಣ್ಮನ
ತೊಯಿಸುವ ಹಸುರಿನ ಹಂದರ
ಕಮರಿಯ ಕನರಕೆ ತೊನೆಯುವ ಕಾಡು
ಪ್ರಕೃತಿ ಚೆಲುವಿನ ಹಸುರಿನ ಗೂಡು
ಸರದಿಯ ಸಾಲಲಿ ನಿಂತ ಮೇಘದ ಹೊದಿಕೆಯ ಬೆಟ್ಟ
ಅದರ ಚೆಲುವ ನೋಡಿ ರವಿಯು ಕಂಗೆಟ್ಟ.
ಗಿಡ ಮರ ಬಳ್ಳಿ ಹಬ್ಬಿ ಸಾಂಕೇತಿಸುತಿದೆ ಇಲ್ಲಿನ ಜನ ಒಂದು
ಪುಷ್ಪ ಕಮಲವರಳಿ ಸಾರುತಿದೆ ಜನಕೆ ಜಯವೆಂದು
ನದಿಯ ಜುಳು ಜುಳು ನಾದ ಸಂಗೀತವ ಮೀರಿತ್ತು
ದುಂಬಿಗಳ ಕಲರದ ಝೇಂಕಾರ ಅದು ಏನೊ ಗಮ್ಮತ್ತು.
ಪಂಚಮದಿಂಚರದಲಿ ಕೋಗಿಲೆಯ ಸ್ವರ
ಅದ ಕೇಳಿ ಕರಗಿದೆ ಮನದ ಭಾರ..
ನನ್ನೂರು..ಕರಾವಳಿಯ ಕುಂದಾಪುರ... ತನ್ನದೆ ಸ್ವಾದಿಷ್ಟವಾದ ಭಾಷಾ ಪ್ರಪಂಚವನ್ನು ಹತ್ತಾರು ಹಳ್ಳಿಗಳಲ್ಲಿ ಪಸರಿಸಿದೆ.ಇಲ್ಲಿ ನೂರಾರು ದೇವಾಲಯಗಳಿದ್ದು.ವರ್ಷವಿಡೀ ಜಾತ್ರೆ ,ರಥೋತ್ಸವ ಜರುಗುತ್ತದೆ.
ಇಲ್ಲಿ ಅನೇಕ ವಿಶೇಷ ಸ್ಥಳಗಳನ್ನ ನೋಡಬಹುದು.
ಸಾಗರ ಸಮುದ್ರವನ್ನು ಸೇರುವ ಸಂಗಮ..ಹಾಗೆಯೇ
ಸಾಗರ ಸಮುದ್ರ ಜೊತೆ ಜೊತೆಯಲ್ಲಿದ್ದರು ಒಂದನ್ನೊಂದು ಸೇರದ ವಿಹಂಗಮ ನೋಟ...
ಸಾವಿರಾರು ಪಕ್ಷಿ ಸಂಕುಲ.. ಬಣ್ಣ ಬಣ್ಣದ ಪಾತರಗಿತ್ತಿ ಪ್ರಪಂಚ ನಮ್ಮನ್ನು ಮೂಕ ವಿಸ್ಮಯಗೊಳಿಸುತ್ತದೆ.
ಜಲಪಾತಗಳು, ಜಲಧಾರೆಗಳು,ಸಮುದ್ರದ ತೀರಗಳು.,ದೇಗುಲಗಳು ಹಾಗೂ ಕರಾವಳಿ ಖಾದ್ಯಗಳು ಪ್ರವಾಸಿಗರನ್ನು ತೃಪ್ತಿಗೊಳಿಸುದರಲ್ಲಿ ಸಂದೇಹವಿಲ್ಲ..
ಅವಕಾಶ ಮಾಡಿಕೊಂಡು ಬೇಟಿ ನೀಡಿ....
No comments:
Post a Comment