Sunday, 12 January 2020
ಸಂಯಮ ಮೀರಿದೆ
Sunday, 5 January 2020
ಅವನು ನನ್ನವ"ನಲ್ಲ"
ಲವ್ ಫೇಲ್ಯೂರ್ ಆದ ಹುಡುಗರೆಲ್ಲ ದೇವದಾಸ್ ಥರ ದಾಡಿ ಬಿಟ್ಟು ಎಣ್ಣೆ ಅಂಗಡಿಯಲ್ಲಿ ಕುಳಿತಿರುತ್ತಾರಾ?
ಹಾಗಾದರೆ ಹುಡುಗಿಯರು ಎಲ್ಲವನ್ನು ಮರೆತು ಬೇರೆ ಹುಡುಗನನ್ನು ಮದುವೆಯಾಗಿ ಹಾಯಾಗಿರುತ್ತಾರಾ?
ಹೆತ್ತ ತಂದೆ-ತಾಯಿಯರಿಗೆ ಮೋಸ ಮಾಡಲಾಗದೆ ನಾನೇ ನನಗೆ ಮಾಡಿಕೊಂಡ ಮೋಸ.
ಸ್ಮಿತಾ ಅವನ ಎಲ್ಲ ನಂಬರ್ ಗಳನ್ನು ಬ್ಲಾಕ್ ಮಾಡಿದ್ದಳು ಆದರೂ ವರ್ಷಕ್ಕೊಮ್ಮೆ ಬರುವ ಅವನ ವಿಶ್ ಗೆ ಅವಳು ವರ್ಷವಿಡೀ ಕಾಯುತ್ತಿದ್ದಳು.
ಕಾಲೇಜು ಜೀವನದಲ್ಲಿ ಇದೆಲ್ಲ ಸಾಮಾನ್ಯ. ಇದು ಯಾವುದು ನಾನು ನಿನ್ನ ಕೇಳುವುದಿಲ್ಲ. ಯಾವ ಘಟನೆಯನ್ನು ನೀನು ಹೇಳಬೇಕಾಗಿಯೂ ಇಲ್ಲ.
ಇವತ್ತಿನಿಂದ ನೀನು ನನ್ನ ಹೆಂಡತಿ ಮುಂದೆ ನನ್ ಜೊತೆ ಚೆನ್ನಾಗಿದ್ದರೆ ಸಾಕು."
ಒಬ್ಬನಂತೂ ಅವಳ ನಗುವಿನ ಮೋಡಿಗೆ ಮರುಳಾಗಿ ಸೆಲ್ಫೋನ್ ಗಿಫ್ಟ್ ನೀಡಿದ್ದ ಆದರೆ ಫ್ರೆಂಡ್ ಅಂತಲೇ ಸ್ವೀಕರಿಸಿದಳು ಸ್ಮಿತಾ.
ಅದೊಂಥರಾ ಸ್ಮೈಲ್.
ಹೆಚ್ಚಿನ ಹುಡುಗರು ಅವಳ ನಗುವಿಗೆ ಹುಚ್ಚರಾಗಿ ಬಿಡುತ್ತಿದ್ದರು.
ವಾರ್ಡನ್ ಪರ್ಮಿಷನ್ ನೊಂದಿಗೆ ಸ್ಮಿತಾ ಸೌಮ್ಯ ಹಾಗೂ ಪ್ರಕಾಶ್ ಹತ್ತಿರದಲ್ಲೇ ಇದ್ದ ಐಸ್ ಕ್ರೀಮ್ ಪಾರ್ಲರ್ ನಲ್ಲಿ ಐಸ್ ಕ್ರೀಮ್ ತಿಂದು ಪೇಟೆ ಸುತ್ತಿ ಹರಟೆ ಹೊಡೆದು ಹಾಸ್ಟಲ್ ಗೆ ಮರಳಿದರು.
ಅದೊಂದು ದಿನ ಧೈರ್ಯ ಮಾಡಿಕೊಂಡು ಸ್ಮಿತಾ ಪ್ರಕಾಶ್ ಗೆ ಮೆಸೇಜ್ ಮಾಡಿದಳು.
ಅವರಿಬ್ಬರ ಹಾಯ್.. ವಿನಿಮಯದ ನಂತರ ಐ ಲವ್ ಯು ಪ್ರಕಾಶ್ ಎಂಬ ಮೆಸೇಜನ್ನು ಸ್ಮಿತಾ ಸೆಂಡ್ ಮಾಡಿದಳು.
ಪ್ರಕಾಶ್ ನಿಂದ ಯಾವುದೇ ಉತ್ತರವಿರಲಿಲ್ಲ.
ಎರಡು ದಿನಗಳ ನಂತರ ಸ್ಮಿತಾ ಧೈರ್ಯದಿಂದ ತಾನಾಗಿಯೇ ಕಾಲ್ ಮಾಡಿದಳು. ಪ್ರಕಾಶ್ ಯಾಕೋ ಅಂಜುತ್ತ ಮಾತಾಡುವಂತಿತ್ತು.
ಒಂದು ಸಾರಿ ರಾತ್ರಿ 9 ಗಂಟೆಯಿಂದ ಬೆಳಗ್ಗೆ 5:00 ಗಂಟೆ ತನಕ ಮಾತನಾಡಿ ರೆಕಾರ್ಡ್ ಸೃಷ್ಟಿಸಿದ್ದರು.
ಸ್ಮಿತಾಪ್ರಕಾಶ್
ಅವನು ಅವಳ ಹೆಸರಿಗೆ ಅವನ ಹೆಸರನ್ನು ಸೇರಿಸಿ ಬಿಟ್ಟಿದ್ದ.
ಅವನು ಅವಳ ಹೆಸರಲ್ಲಿ ಆಶಾ ಮಹಲನ್ನೇ ಕಟ್ಟಿಸಿದ್ದ, ಹುಟ್ಟಲಿರುವ ಮಗುವಿಗೂ ಹೆಸರು ಇಟ್ಟಿದ್ದ.
ಬರುಬರುತ್ತಾ ಪ್ರಕಾಶನ ಬೇಡಿಕೆ ಹೆಚ್ಚುತ್ತಿತ್ತು.ಭೇಟಿಯಾಗೋಣ ಎನ್ನುತ್ತಿದ್ದ ಅವನ ಮಾತು ಅವಳಿಗೆ ಯಾಕೋ ಇತ್ತೀಚಿಗೆ ಕಿರಿಕಿರಿ ತರುತ್ತಿತ್ತು.
ಇತ್ತೀಚಿಗೆ ಎಕ್ಸಾಮ್ ಎಂಬ ನೆಪವೊಡ್ಡಿ ಅವನ ಫೋನ್ ರಿಸೀವ್ ಮಾಡೋದು ಕಮ್ಮಿ ಮಾಡಿದಳು.
ಪ್ರಕಾಶ್ ಅದೆಷ್ಟು ಬಾರಿ ಕಾಲ್ ಮಾಡಿದರೂ ರಿಂಗಾಗುತ್ತಿತ್ತು ಫೋನ್ ಕೊನೆಗೊಮ್ಮೆ ಸ್ವಿಚ್ ಆಫ್ ಎನ್ನುವ ವಾಣಿಯೊಂದಿಗೆ ನಿಷ್ಕ್ರಿಯೆ ಗೊಂಡಿತ್ತು.
ಆ ದಿನ ಅವನಿಗೆ ಇಡೀ ರಾತ್ರಿ ನಿದ್ದೆ ಬಂದಿರಲಿಲ್ಲ ತನ್ನ ಮುಂದಿನ ಭವಿಷ್ಯದ ಬಗ್ಗೆ ಚಿಂತಿಸಿ ಬಿಕ್ಕಿಬಿಕ್ಕಿ ಅಳುತ್ತಿದ್ದ.
ಉಕ್ಕಿ ಹರಿಯುತ್ತಿದ್ದ ಕಣ್ಣೀರನ್ನು ಅವನ ಕೈಬೆರಳುಗಳು ತಡೆಯದಾದವು.ಸಮಾಧಾನ ಮಾಡಲು ಅಲ್ಲಿ ಯಾರು ಇಲ್ಲ ಧ್ವನಿಯೇರಿಸಿ ಅಳತೊಡಗಿದನು.
ಸಿಮ್ ಆಕ್ಟಿವೇಟ್ ಆಗುತ್ತಿದ್ದಂತೆ ಒಂದರಮೇಲೊಂದು ಕರೆಗಳು.ಈಗ ಅವನಿಗೆ ಮನದಟ್ಟಾಯಿತು ನಾನೇನು ಒಂಟಿಯಲ್ಲ ಎಷ್ಟೊಂದು ಜನ ನನಗಾಗಿ ಇರುವವರು..
"ಮತ್ತೆ"
"ಹೌದು"
"ಫ್ರೆಂಡ್ಸ್ ಜೊತೆ"
"ಅಯ್ಯಾ ನನ್ನ ಕ್ಲಾಸ್ಮೇಟ್ ಹುಡುಗರು ಹುಡುಗಿಯರು ಜೊತೆಯಲ್ಲಿ ಹೋಗಿದ್ದೇವೆ "
"ಈ ಮಂತು ಕೋರ್ಸ್ ಮುಗಿಯಿತಲ್ಲ.. ಬಹಳ ಒತ್ತಾಯ ಮಾಡಿದರು"
ಈಗ ಮನಸ್ಸು ಕೊಂಚ ನಿರ್ಮಲವಾಯಿತು. ಮೊಗ್ಗಾಗಿದ್ದ ಪ್ರೀತಿ ಹೂವಾಗಿ ಅರಳಿತು.
ಪ್ರಕಾಶನ ಮೊಗದಲ್ಲಿ ಮೂಡಿದ ಮಂದಸ್ಮಿತಕ್ಕೆ ಸ್ಮಿತಾ ಭಾವನೆಯಾದಳು.
ಕೈಯಲ್ಲಿ ಕರ್ಪೂರ ಹೊತ್ತಿಸಿ ದೇವರ ಮುಂದೆ ನಾನೆಂದು ನಿನ್ನವಳು ಎಂಬ ಪ್ರತಿಜ್ಞೆ ಮಾಡಿದಳು.
"ಮೊದಲು ಸೌಮ್ಯಳ ಮದುವೆ ನಡೆಯಲಿ ನಂತರ ನಮ್ಮ ಮದುವೆ ಪ್ಲೀಸ್ ಎಸ್.ಪಿ..ಹೇಗಾದರೂ ಅಪ್ಪನ ಒಪ್ಪಿಸು" ಎಂದಿದ್ದ.
ಒಂದೆರಡು ಫೇಸ್ಬುಕ ಕಾಮೆಂಟಗಳನ್ನು ಪ್ರಕಾಶ್ ಸಹ ನೋಡಿದ್ದನು.ಅದಾದ ನಂತರ ಸೋಶಿಯಲ್ ಮೀಡಿಯಾದಲ್ಲಿ ಸ್ಮಿತಾಗೆ ನಿರ್ಬಂಧ ವಿಧಿಸಿದನು.
ತಂದೆಗೂ ಮಗಳದ್ದೇ ಚಿಂತೆ ಒಬ್ಬಳನ್ನೇ ಎಂದು ಹೊರಗೆ ಬಿಡುತ್ತಿರಲಿಲ್ಲ.
ಮೊಬೈಲ್ ಜಾಸ್ತಿ ಉಪಯೋಗಿಸುವಂತಿಲ್ಲ ಹೀಗೆ ಸ್ಮಿತಾ ಒಂದೊಂದೇ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಿದ್ದಳು.
ನಾನು ಅವಳನ್ನು ಪ್ರೀತಿಸುತ್ತಿದ್ದೇನೆ. ಅವಳು ನನ್ನನ್ನು ಅಷ್ಟೇ ಪ್ರೀತಿಸಬೇಕು. ಅವಳು ನನ್ನವಳು.ನನ್ನ ಬಿಟ್ಟು ಯಾರು ಅವಳನ್ನು ನೋಡಕೂಡದು. ಅವಳನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು ಹೀಗೆ ಯೋಚಿಸುತ್ತಿದ್ದನು.
ಪ್ರೀತಿ ಎಂದರೆ ಏನು?
ಅದು ಮೊದಮೊದಲು ಕೊಡುತ್ತಿದ್ದ ಖುಷಿ ಈಗೇಕೆ ಕೊಡುತ್ತಿಲ್ಲ?
ನನ್ನ ಆಯ್ಕೆ ತಪ್ಪೇ?
ನನ್ನೆಲ್ಲ ಆಸೆ-ಆಕಾಂಕ್ಷೆಗಳನ್ನು ಸ್ವಾತಂತ್ರ್ಯವನ್ನು ಕಳೆದುಕೊಂಡು ಬೇರೆಯವರಿಗಾಗಿ ಬದುಕುವುದು ಪ್ರೀತಿನಾ?
ಸ್ಮಿತಾಳಿಗೆ ದಿಕ್ಕೇ ತೋಚದಂತಾಯಿತು.
ಒಂದು ಸಂಜೆ ಯಾರಿಗೂ ಹೇಳದೆ ಮನೆ ಬಿಟ್ಟು ಬೆಂಗಳೂರಿಗೆ ಬಂದಳು.
ಪ್ರಕಾಶ್ ಅವಳಿಗೆ ಸಮಾಧಾನ ಮಾಡಿ ತಂದೆ ಜೊತೆ ಮಾತನಾಡುವುದಾಗಿ ತಿಳಿಸಿದನು.
ಪ್ರಕಾಶ್ ರಾತ್ರಿಯಿಡಿ ಯೋಚಿಸಿ ಒಂದು ನಿರ್ಧಾರಕ್ಕೆ ಬಂದಿದ್ದ. ಮರುದಿನ ಆಫೀಸಿಗೆ ರಿಸೈನ್ ಲೆಟರ್ ಹಾಕಿ ಪ್ರಕಾಶ ಅವಳ ಜೊತೆ ಊರಿಗೆ ಹೊರಟನು.
ಸ್ಮಿತಾ ಆವೇಶಭರಿತಳಾಗಿ ವೆಂಟಿಲೇಟರ್ ನಲ್ಲಿದ್ದ ತಂದೆಯ ಕಡೆಯ ಓಡಿದಳು. ಪ್ರಕಾಶ್ ಇದೆಲ್ಲಕ್ಕೂ ತಾನೇ ಕಾರಣ ಎಂಬಂತೆ ಹಿಂದೆಸರಿದನು.
ಸ್ಮಿತಾ ತಂದೆಯ ಮಾತಿನಂತೆ ಪ್ರಮೋದ್ ನನ್ನು ವರಿಸಲು ಸಿದ್ದಳಾಗಿದ್ದಳು.
"ನೀನೇ ಹೇಳೊ ಹಾಗೆ. ಅದೆಷ್ಟು ಹುಡುಗರ ಹಾಗೆ ನೀನು ನನಗೆ ಟೈಂಪಾಸ್"
ಅದೊಂದೇ ನುಡಿ ಸಾಕಿತ್ತು ಅವನ ಜೀವನದಲ್ಲಿ ಮುಂದುವರೆಯಲು.
ನಾನೆಲ್ಲಿ ಎಡವಿದೆ ಅವಳನ್ನು ಪಡೆದುಕೊಳ್ಳುವಲ್ಲಿ?
ಪ್ರತಿ ವ್ಯಕ್ತಿಯ ಜೀವನದಲ್ಲಿ ಮೊದಲ ಪ್ರೇಮ ಕಥೆ ದುಃಖಾಂತ್ಯ ವಾಗುವುದೇಕೆ?
ನಾನು ಪ್ರೇಮಿಯನ್ನು ಕಳೆದುಕೊಂಡಿರಬಹುದು ಆದರೆ ಪ್ರೀತಿಯನ್ನಲ್ಲ.
ಅವಳು ನನ್ನನ್ನು ಬ್ಲಾಕ್ ಮಾಡಿರಬಹುದು ಆದರೆ ಪ್ರೀತಿಯ ಸೆಳೆತವನ್ನಲ್ಲ.
ಎಂದಿನಂತೆ ವಿಶ್ ಮಾಡಿ ಸಿಮ್ ಕಟ್ ಮಾಡಿ ಎಸೆದ ಪ್ರಕಾಶ್.
ನಂಬರ್ ಸೇವ್ ಮಾಡಿಕೊಂಡವಳೆ ಫೋನ್ ಮಾಡಲು ಕಾಲ್ ಬಟನ್ ಪ್ರೆಸ್ ಮಾಡಿದಳು.
ಸ್ಮಿತಾ ಏನ್ ಮಾಡ್ತಿದ್ದೀಯಾ ಪಾರ್ಟಿಗೆ ರೆಡಿಯಾಗು ಎಂದ ಕೂಗಿಗೆ ಎಂಡ್ ಬಟನ್ ಅದುಮಿದಳು.
Monday, 23 December 2019
ಪಂಚಪದಿ-ಹೃದಯ
*೧*ವಿದಾಯಕೂ ಮುನ್ನ ಈ ಹೃದಯನ ಮಾತಾಡಿಸೇ ಓ ಮೌನಿ
*೨* ಹೆಚ್ಚೆನಾ ನಾ ಹೇಳಲಿ ಹುಚ್ಚು ಹೃದಯ ಚೂರು ಚೂರು,ನನ್ನೆದೆಯಲ್ಲಿ ನಿನ್ನದೆ ಪ್ರತಿಬಿಂಬ ನೂರಾರು
*೩* ಕದ ತೆರೆದ ಎದೆಯ ಮುಚ್ಚುವ ಮುನ್ನ ನೀ ಬಂದು ಕೂರು ಹೃದಯದಲಿ
*೪* ಪ್ರೀತಿ ಇರಿತಕ್ಕೆ ಸಿಕ್ಕಿ ಹೃದಯ ಭಾಗವಾಗಿದೆ. ಹೃತ್ಕುಕ್ಷಿಯ ತುಡಿತದಿ ಕಂಬನಿ ಮಿಡಿದಿದೆ ಅಕ್ಷಿ.
*೫* ನಲುಗಿಸಬೇಡ ನಿನ್ನ ನಲ್ಮೆಯ ಹೃದಯವ,ಪ್ರೀತಿ ಕುಸುಮ ಅರಳಿಸಿ ಪಸರಿಸು ಪರಿಮಳವಾ
🖌 ಸಂದೇಶ ಪೂಜಾರಿ ಗುಲ್ವಾಡಿ
Tuesday, 17 December 2019
ಜೀವನ ಪಯಣ
ನಿನ್ನ ನಗುವೆ ನಿನ್ನ ಮೊಗವೇ ನನ್ನ ಜಗವು.
ನಗುವ ನಿನ್ನ ಮೊಗವೇ ನನ್ನ ಜಗವು.
ಈ ನಗೆಯ ಕಡಲಲ್ಲಿ ನಾ ಬಾಳ್ವೆನು |ಪ|
ನಮ್ಮಿಬ್ಬರ ಪ್ರೀತಿಯು ಸಾಗರದಾಳ
ಈ ಸಾಗರದಾಳದಲ್ಲಿಳಿದು ಮುತ್ತುಗಳ ಹುಡುಕುವ ಬಾ ಗೆಳತಿ
ಕೆಲ ಹೊತ್ತುಗಳ ಕಳೆಯುವ ಬಾ.|೧|
ಅದೆಷ್ಟು ಸಂವತ್ಸರ ಕಳೆದರು ತೀರ ತಲುಪದಾದೆಯಾ..
ಹೇಗೆ ಕರೆಯಲಿ ನಾ. ಈ ವಿರಹದುರಿಯಲಿ...
ಬೇಸರಿಸಿ ಕರೆದರೂ ಬಯಕೆ ಮನ್ನಿಸಲಾರೆಯಾ.ಗೆಳತಿ.|೨|
ಸನಿಹಕೂ ಸರಸಕೂ ಸುಳಿಯದೆ ಹೋದೆ
ಸಮಯಕೂ ಅರಿವಿಗೂ ಬಾರದ ನಿನ್ನ ಪಯಾಣ
ಹಾಗೆ ಮರೆಯಲು ಹೇಗೆ ಸಾದ್ಯ
ನಿನ್ನ ಜೋತೆ ಸಾಗಿದ ದೂರ
ಕೊಂಚ ಕೊಂಚವೇ ಈ ಹೃದಯ ಭಾರ.|೩|
🖋 ಸಂದೇಶ ಪೂಜಾರಿ ಗುಲ್ವಾಡಿ
Saturday, 7 December 2019
ದೀವಿಗೆಯ ಬೆಳಕಲಿ
ದೀವಿಗೆಯ ಬೆಳಕಲಿ
ಯಾರೊ ದೀವಿಗೆಯ ಹಿಡಿದು ಬಂದರೋ
ಯಾರ ಹೃದಯವ ಬರಿದು ಮಾಡಲು.|ಪ|
ಬಂಧುಗಳ ತೊರೆದು ಬಂಧಿಯಾದೆ
ನಿನ್ನ ಬೆಚ್ಚನೆಯ ಬಂಧನದಲ್ಲಿ.
ಕನಸು ಕಂಡಂತೆ ಎಂದು ನಡೆಯಿತೆ
ಈ ಬಾಳ ಪಯಣದಲ್ಲಿ.
ಸುಡುವ ಒಡಲಿಗೆ ಸುಮದ ಕಂಪೇತಕೆ
ಸುರಿವ ಮಳೆ ಸಾಕಲ್ಲವೇ ತಂಪೇರೊಕೆ?
ಕತ್ತಲೆ ಬಾಳಲಿ ಬೆಳಕ ಕಂಡು
ಹತ್ತಿರ ಬಂದರೆ ಎತ್ತರ ಎತ್ತರ
ಬಲು ಎತ್ತರ ಚಂದ್ರ ಬಿಂಬ.
ನೆತ್ತರ ಬತ್ತಿಸಿ ಬೆಳಕ ತೋರಿಸಿ
ಬಿಸಿಯ ಮುಟ್ಟಿಸಿ ಬೆಳೆದು ಹೋದರೋ..
ಮೋಹದ ಸುಳಿಗೆ ಸಿಕ್ಕು ಪ್ರೀತಿ
ಸುಕ್ಕುಗಟ್ಟಿ ಹೋಯಿತೇ..
ಎಸ್.ಪಿ.ಗುಲ್ವಾಡಿ
Tuesday, 18 September 2018
ಮಣ್ಣಿನ ಗಣಪನೆ
ಮಣ್ಣಿನ ಗಣಪನೆ
ನಾ ನಿನ್ನ ಮಣ್ಣೆಂದು ಪೂಜಿಸಲಿಲ್ಲಾ.
ನನ್ನೆಲ್ಲಾ ಕಷ್ಟಕೆ ನೀ ನೀಡು ಸ್ಪಷ್ಟನೆ
ನಾ ನಿನ್ನ ಭಜಿಸಿದ್ದು ಸುಳ್ಳೆ..?
ಕೈ ಎತ್ತಿ ಮುಗಿದಿಲ್ಲ..ಗರಿಕೆಯ ತಂದಿಲ್ಲಾ
ಹರಿಕೆಯಂತು ನಾ ಹೊತ್ತಿಲ್ಲ..
ನಿನ್ನ ನಾಮ ಮನದಲ್ಲಿರುವುದು ಸುಳ್ಳೆ..
ಹಚ್ಚಿದ ಬೆಂಕಿಗೂ ದೀಪದ ಬೆಳಕಿಗೂ
ವ್ಯತ್ಯಾಸ ನಾ ಕಾಣೆ
ಕೈ ಹಿಡಿದರೆ ಸುಡದೆ?
ಸುಡದೇ ಎನ್ನ ಕಾಪಾಡಿಕೋ
ಐಶ್ವರ್ಯ ಬೇಡಿಲ್ಲ..ಬೇರೇನು ಬೇಕಿಲ್ಲಾ.ಅದೃಷ್ಟ ನಂಬಿಲ್ಲ.
ಅದೃಶ್ಯವಾಗಿರುವ
ನಿನ್ನ ಒಲಮೆ ಒಂದೇ ಸಾಕೆನಗೆ....
ಸಂದೇಶ ಪೂಜಾರಿ ಗುಲ್ವಾಡಿ
Friday, 24 August 2018
ಪ್ರೀತಿಸಿಯೇ ಬಿಟ್ಟಳು -ಕಾದಂಬರಿ
ಪ್ರೀತಿಸಿಯೇ ಬಿಟ್ಟಳು
ಮನುವಿನ ಸ್ಪರ್ಷಕ್ಕೆ ಮನಸ್ಸು ಕೊಂಚ ಗಲಿಬಿಲಿಯಾಯಿತು..ಇದ್ಯಾವುದನ್ನು ತೋರಿಸಿಕೊಳ್ಳದೆ ಸ್ವಲ್ಪ ದೂರ ಸರಿದು ನಿಂತಳು..
ಮಾತು ಬದಲಾಯಿಸಿದಳು "ಈ ಮಳೆ ಇವಾಗ್ಲೇ ಶುರು ನೋಡು"
ಸಿಲ್ವಿ ಹಾಸ್ಟೆಲ್ ಇರುವುದು ಇನ್ನೂ ಒಂದು ಕಿಲೋಮೀಟರ್ ದೂರ.
ಹೋಗೋಣ ಬಾ ಎಂದು ಕರೆದ ಅವನ ಮಾತಿಗೆ ಮರುಮಾತನಾಡದೆ ಜೊತೆ ನಡೆದಳು.
ಮಳೆ ಆರ್ಭಟಿಸುತ್ತಿದ್ದರೆ ಹಿಮದ ಗಾಳಿಗೆ ಚಳಿ ಚುಮುಚುಮು ಅನಿಸುತ್ತಿತ್ತು.
ಆಗೊಮ್ಮೆ ಈಗೊಮ್ಮೆ ಎಲ್ಲ ಕಡೆಯಿಂದ ನುಸುಳುತ್ತಿದ್ದ ಗಾಳಿ ಅವರನ್ನು ಮಳೆಯಿಂದ ತೋಯಿಸುತ್ತಿತ್ತು.
ಕೊಡೆ ನೆಪಮಾತ್ರ ಮಳೆಯಿಂದ ಅವರು ಅರ್ಧ ಒದ್ದೆಯಾಗಿ ಹೋಗಿದ್ದರು.ಮಳೆ ಇನ್ನೂ ಹೆಚ್ಚಾದಾಗ ಅಲ್ಲೇ ಹತ್ತಿರವಿದ್ದ ಮರದ ಬಳಿ ನಡೆದರು.
ಅವರ ವಯಸ್ಸು ಅಂತಹದು ಮನಸ್ಸಿನ ಭಾವನೆಗಳು ಗರಿಬಿಚ್ಚಿ ನರ್ತಿಸುತ್ತಿತ್ತು ಬಣ್ಣ ಬಣ್ಣದ ಕನಸುಗಳು ಮಿಂಚಿ ಮರೆಯಾಗುತ್ತಿತ್ತು.
ಬಯಕೆ ಬಿಚ್ಚಿಡದೆ ಹೋದರೂ ಅವನ ಬಿಸಿ ಉಸಿರು ತಾಗಿ ನಸು ಕೆಂಪಾದ ಅವಳು ಆ ಹಸಿ ಮಳೆಯಲ್ಲಿ ತುಸು ನಕ್ಕಳು.
ಕೊಂಚ ಆಹ್ಲಾದಕರವಾದ ಮನಕ್ಕೆ ಅವಳಿಂದ ಒಪ್ಪಿಗೆ ದೊರೆತಂತಾಯಿತು.
ಮನುವಿಗೆಕೊ ಹದಿನೈದು ನಿಮಿಷದ ದಾರಿ ಕೇವಲ ಮೂರು ನಿಮಿಷದಲ್ಲೆ ಮುಗಿದುಹೋಯಿತಲ್ಲ ಎನಿಸುತ್ತಿತ್ತು.
ಇದುವರೆಗೂ ಅವಳ ಆಕರ್ಷಣೆಯಲ್ಲಿ ಇದ್ದ ಮನುವಿಗೆ ನೈಜ ಪ್ರೇಮ ಆ ಜಡಿ ಮಳೆಯಲ್ಲಿ ಹುಟ್ಟಿತೆಂದರೆ ತಪ್ಪಾಗಲಾರದು.
ಜೊತೆಯಲ್ಲಿದ್ದಷ್ಟು ಹೊತ್ತು ಪ್ರಪಂಚವನ್ನೇ ಮರೆತಿದ್ದರು ಏನು ಮಾತನಾಡದ ಮೂಕರು. ಅಗಲಿಕೆ ಎಂದಾಗ ಹೇಳಿಕೊಂಡಷ್ಟು ಮುಗಿಯದ ಮಾತಿದೆ. ಹಾಸ್ಟೆಲ್ ತಲುಪಿದ ಸಿಲ್ವಿ ಒಂದೊಂದೆ ಮೆಟ್ಟಿಲೇರುತ್ತಾ ಕೈ ಬೀಸಿ ಅವನ ಬಿಳ್ಕೊಡುತ್ತಿದ್ದಳು.ಅವಳು ಮರೆಯಾಗುವವರಗೂ ಅವನು ನೋಡುತ್ತಿದ್ದ.ವಿರಾಹದ ನೋಟ ಅವರಿಬ್ಬರನ್ನು ಭಾವುಕರನ್ನಾಗಿಸಿತ್ತು.
ನಿದ್ದೆ ಬಾರದೆ ಹಾಸಿಗೆಯಲ್ಲಿ ಹೊರಳಾಡಿದಳು ..ಅವನ ನೆನಪೆ ಕಾಡುತ್ತಿತ್ತು.. ಹೇ ಹುಡುಗ ಯಾಕಿಷ್ಟು ದೂರ..
ಯಾಕೆ ಹೀಗೆ ಕಾಡುತ್ತಿರುವೆ..ನನ್ನ ಹೃದಯದ ತಳಮಳ ನಿನಗೆ ತಿಳಿಯದೆ..ಬಳಿ ಬಂದು ನನ್ನ ಸೇರಬಾರದೆ..ಹೀಗೆ ಪ್ರೀತಿ ಗುಂಗಲ್ಲಿ ಚಡಪಡಿಸುತ್ತಾ ಮಂದಿರಾ ಎದೆಯ ಮೇಲಿನ ಹಚ್ಚೆಯ ಸವರಿಕೊಂಡಳು..ಹಚ್ಚೆಯ ಶಾಯಿಂದ
ಮನುವಿನ ಹೆಸರು ಹಚ್ಚ ಹಸುರಾಗಿತ್ತು.
ಅವಳು ಅದೆಷ್ಟು ಬಾರಿ ಪ್ರಪೋಸ್ ಮಾಡಿದ್ದರೂ ಮನು ಮಾತ್ರ ತಲೆ ಕೆಡಿಸಿಕೊಂಡಿರಲಿಲ್ಲ. ನಸುನಕ್ಕು ಸುಮ್ಮನಾಗುತ್ತಿದ್ದ.
ಮಂದಿರಾ ಹೈ ಸೊಸೈಟಿಯ ದೊಡ್ಡ ಬ್ಯಾಗ್ರೌಂಡ್ ನ ಹುಡುಗಿ. ಬಯಸಿದ್ದೆಲ್ಲ ಕೊಂಡುಕೊಳ್ಳುವಷ್ಟು ಹಣ ಅವಳಲ್ಲಿತ್ತು.ಅದ್ಯಾಕೊ ಮನುವಿಗೆ ಮಾರು ಹೋಗಿದ್ದಳು.ಪ್ರೀತಿಯನ್ನು ಹಣದಿಂದ ಕೊಂಡುಕೊಳ್ಳಲಾಗದು ಎಂದರಿತಿರುವುದರಿಂದ ಮನುಗಾಗಿ ಅವನ ಹಿಂದೆ ಬಿದ್ದು ಗೋಳಾಡುತ್ತಿದ್ದಳು.
ಇನೈದು ದಿನ ಕಾಲೆಜಿಗೆ ರಜೆ ಇದೆ..ಅದೆ ಮಂದಿರಾನ ಗೊಂದಲಕ್ಕೆ ಕಾರಣ. ಹೇಗೆ ಮನುವನ್ನು ನೋಡಲಿ ..ಅವಳಿಗೆ ನಿದ್ದೆ ಬಂದಿಲ್ಲ..ಹಾಗೆ ಹಾಸ್ಟೆಲ್ ರೂಮ್ ನಿಂದ ಹೊರಬಂದಳು..ಯಾರೊ ಪೋನಿನಲ್ಲಿ ಮಾತಾಡುತ್ತಿದ್ದರು.
"ಪ್ಲೀಸ್ ಮನು ಮೀಟ್ ಅಗೊಕೆ ಅಗಲ್ಲ"
ಅರ್ಥ ಮಾಡ್ಕಳ್ಳೊ ಕಾಲೇಜಿನಲ್ಲಿ ಸಿಗ್ತಿಯಲ್ಲ ಏನಂತ ಅಲ್ಲೆ ಹೇಳೊ.."
"ಇಲ್ಲಾ ಪ್ಲೀಸ್ ನಿನ್ ಜೊತೆ ಪರ್ಸನಲಾಗಿ ಮಾತಡಬೇಕು."
"ಆಗಲ್ಲಾ ಏನಿವಾಗ"
"ಇಷ್ಟೇ ತಾನೆ"
ಯಾವುದು ಸ್ಪಷ್ಟವಾಗಿರಲಿಲ್ಲ..ಅಸ್ಪಷ್ಟ ಮಾತುಗಳು ಕೇಳಿ ಬರುತ್ತಿದ್ದ ಕಡೆ ನಡೆದಾಗ.ಅ ಕತ್ತಲಲ್ಲಿ ಏನು ಕಾಣಿಸದಾಯ್ತು.
ನನ್ನದು ಭ್ರಮಲೋಕ ಸದಾ ಮನು ಮನು ಮನು..
ನಾನು ಹುಚ್ಚಿಯಾಗಿದ್ದನಿ..
ಅವಳಿಗೆ ಅವಳೆ ಸಮಾಧಾನ ಮಾಡಿಕೊಂಡಳು.
"ಸನ್ನಿಧಿ ಗಾರ್ಡನ್" ವಿಶಾಲವಾದ ಪಾರ್ಕ.ವಿವಿಧ ಬಗೆಯ ಗಿಡ ಮರಗಳು ,ಬಗೆಬಗೆಯ ಹೂ ಗಿಡಗಳು..ತೂಗು ಉಯ್ಯಾಲೆಗಳು,ಕಲ್ಲು ಮಂಚಗಳು.ಹಕ್ಕಿ ಸಂಕುಲಗಳು.ನೀರಿನ ಕೊಳಗಳು,ಮೀನಿನ ಪಾಂಡ್ ಗಳು ಹೀಗೆ ಮಿನಿ ಲಾಲ್ ಭಾಗ್ ಅನ್ನವಂತೆ ಕಂಗೊಳಿಸಿತ್ತು.
ಇನ್ನೊಂದು ಕಡೆ ಗ್ರಂಥಾಲಯಗಳು.ಪುಟ್ಟದೊಂದು ದೇವಸ್ಥಾನ.ಅಲ್ಲೆ ಪಕ್ಕದಲಿ ಸ್ಮಾರಕ..ಚಿಕ್ಕದೊಂದು ಹರಿಯುವ ಝರಿ.
ಇಲ್ಲಿ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಬೇರೆಯಾರಿಗೂ ಪ್ರವೇಶವಿರಲಿಲ್ಲ.
ಐಡಿ ಕಾರ್ಡ್ ಗಳಿಂದ ಪ್ರವೇಶ ದ್ವಾರ ತೆರೆಯುತ್ತಿತ್ತು.
ತುಂಬ ಹೊತ್ತಿನಿಂದ ಅವನು ಕಾಯುತ್ತಿದ್ದ ಅವಳ ಅಗಮನವಿರಲಿ ಯಾರು ಕೂಡ ಅತ್ತ ಕಡೆ ಸುಳಿದಿಲ್ಲ.
ಸೌಂದರ್ಯ ರಾಶಿಯಲ್ಲಿ ಕುಳಿತ್ತದ್ದರೂ ಪ್ರಕೃತಿಯನ್ನು ಆಸ್ವಾಧಿಸುವ ಮನಸ್ಸಾಗಲಿ ಚೈತನ್ಯವಾಗಲಿ ಅವನಲ್ಲಿ ಇದ್ದಂತಿಲ್ಲ.ಇನ್ನೊಂದು ತಾಸು ಕಾಯಲು ಸಿದ್ದನಿದ್ದ.
ಅಬ್ಬಾ ಸ್ವರ್ಗದಿಂದ ದೇವತೆಯೇ ಇಳಿದು ಬಂದಂತೆ.ಒಂದು ಅರ್ಥವಾಗದ ಮನು ಅವಳತ್ತ ನೋಡತೊಡಗಿದ.
ಯಾಕಿಷ್ಟು ಅಲಂಕಾರ ಹಸೆಮಣೆ ಏರುವ ವಧುವಿನಂತೆ ಕಂಗೊಳಿಸುತ್ತಿದ್ದಳು. ಮನ ಮೋಹಕ ಚೆಲುವೆ ಹತ್ತಿರ ಬರುತ್ತಿದ್ದರೆ ಅವಳ ಕೈಗಳ ನೋಡಿ ಮನು ನಡುಗಲಾರಂಬಿಸಿದನು.
ಸಿಲ್ವಿ...
ಅವಳು ನಿರ್ಧಾರ ಮಾಡಿಕೊಂಡೆ ಬಂದಿದ್ದಳು.ಅಲೋಚನೆಯಂತೆ ಅವನನ್ನು ವರಿಸಲು ನಿರ್ಧಾರಿಸಿ ಸಿದ್ದಳಾಗೆ ಬಂದಿದ್ದಳು.ಕೈಯಲ್ಲಿ ಮಾಂಗಲ್ಯ ಹಿಡಿದೆ ಬಂದಿದ್ದಳು.
ಮನುವಿಗೆ ಮಾತನಾಡಲು ಅವಕಾಶವೇ ಇರಲಿಲ್ಲ.ಅವನ ಕೈ ಹಿಡಿದು ಹತ್ತಿರದ ದೇವಸ್ಥಾನಕ್ಕೆ ಕರೆದೊಯ್ದಳು. ಗುಡಿಯಲ್ಲಿ ಮೊದಲ ಬಾರಿಗೆ ಅವಳೆ ದೀಪ ಹಚ್ಚಿದಳು.
ನಿನಗೆ ನನ್ನಲ್ಲಿ ಪ್ರೀತಿ ಇರುವುದು ಸತ್ಯವೆಂದರೆ ಈ ಮಾಂಗಲ್ಯವನ್ನು ದೇವರ ಎದುರಿಗೆ ಕಟ್ಟು ಇಲ್ಲವಾದರೆ
ನನ್ನ ಶವಕ್ಕೆ ಕಾಲುಂಗುರ ತೊಡಿಸು.
ಮಾತನಾಡಲು ಏನು ಉಳಿದಿಲ್ಲ ಅವಳಿಗೆ ತಾಳಿ ಕಟ್ಟಿ ಹಣೆಗೆ ಕಂಕುಮವಿಟ್ಟ..ದೀಪದ ಸುತ್ತ ಸಪ್ತಪದಿ ತುಳಿದರು..
ಎಲ್ಲವೂ ಅಚಾನಕ್ಕಾಗಿ ನಡೆದು ಹೋಯಿತು. ಮನು-ಸಿಲ್ವಿ ಗಂಡ ಹೆಂಡತಿಯರಾದರು..ಅಂದಿನ ರಾತ್ರಿ ದೇವರ ಸನ್ನಿದಿಯಲ್ಲಿ ಕಳೆದರು.
ಎಲ್ಲವೂ ಅಚಾನಕ್ಕಾಗಿ ನಡೆದು ಹೋಯಿತು. ಮನು-ಸಿಲ್ವಿ ಗಂಡ ಹೆಂಡತಿಯರಾದರು..ಅಂದಿನ ರಾತ್ರಿ ದೇವರ ಸನ್ನಿಧಿಯಲ್ಲಿ ಕಳೆದರು..
"ಋಣಾನುಬಂಧ ರೂಪೇಣ ಪಶು ಪತ್ನಿ ಸುತಾಲಯ.."
ಯಾರು ಬರೆದರೋ ಈ ವಾಕ್ಯವನ್ನು ದೇವ ಭಾಷೆಯಲ್ಲಿ..
ಎತ್ತಣ ಎತ್ತಣದ ಸಂಬಂಧವೊ ಅವರಿಬ್ಬರನ್ನು ಒಂದುಗೂಡಿಸಿದ್ದು.. ಯಾರ ಒಪ್ಪಿಗೆಯ ಮೇರೆಗೆ ಅವರ ಪಯಣ.. ಯಾರು ಬಲ್ಲರು?..
ಹರಿಯುವ ಝರಿಯಲ್ಲಿ ಮುಖ ತೊಳೆದು ಅವನೆದುರು ನಿಂತಿರವಳು..ತ್ವಚೆಯ ಬಣ್ಣ ರಂಗೇರಿ ಕಾಂತಿಯಿಂದ ಕಂಗೊಳಿಸುತ್ತಿತು...ಅದ್ಯಾವ ಕಾರಣ ನಾ ಹೇಳಲಾರೆ.ಮುಂಜಾನೆಯ ಸೂರ್ಯರಶ್ಮಿಯ ಹೊಂಗಿರಣಕ್ಕೊ ಇಲ್ಲಾ ಹೆಣ್ಣೆದೆ ಹಿಗ್ಗಿದ ಆನಂದಕ್ಕೊ.
ಇನ್ನೇನು ಒಂದು ತಿಂಗಳಷ್ಟೇ ಕಾಲೇಜು ಜೀವನ. ಆ ಒಂದು ತಿಂಗಳು ಕಳೆಯುವದು ಸಿಲ್ವಿಗೆ ತಂಬ ಕಷ್ಟವಾಯ್ತು.
ತನ್ನ ಗುಟ್ಟನ್ನು ಯಾರಲ್ಲು ಹೇಳಿಕೊಳ್ಳುವಂತಿರಲಿಲ್ಲ. ಸಾಲದ್ದಕ್ಕೆ ತಾಳಿ ಯಾರ ಕಣ್ಣಿಗೂ ಬೀಳವ ಹಾಗಿರಲಿಲ್ಲ.
ರಜಾ ಮುಗಿದರೂ ಎರಡು ದಿನ ಕಾಲೇಜಿಗೆ ಸಿಲ್ವಿಯ ಪಾದ ಸ್ಪರ್ಶವಿಲ್ಲ.. ಮನು ಮಂಕಾಗಿದ್ದ ಅವಳ ನೋಡದಿರುವುದು ಅವನಿಂದ ಸಾಧ್ಯವಿರಲಿಲ್ಲ. ಪೋನ್ ಮಾಡಿದಾಗ ಇಂದು ಬರುವುದಾಗಿ ತಿಳಿಸಿದ್ದಳು.
ಅಬ್ಬಾ ಮಾಡರ್ನ್ ಗೌರಮ್ಮ..ಕತ್ತಿನವರೆಗೂ ದಿರಿಸು ಧರಿಸಿದ್ದಳು. ಎಲ್ಲರಿಗೂ ಸಿಲ್ವಿಯ ಅವತಾರ ನೋಡಿ ಅಶ್ಚರ್ಯ, ಮನುವಿಗೆ ನನ್ನ ಚೆಲ್ವಿ ಇವಳೇನಾ ಅನಿಸಿತ್ತು.
ಮನು ಮಾತಾಡಲಿಲ್ಲ ,ಒಂದು ತಿಂಗಳು ಕಾಲೇಜಿನಲ್ಲಿ ಮಾತು ಕತೆ ಬೇಡ ಎಂದಿದ್ದಳು.
ಹನಿ ಹನಿ ಇಂಚರಕ್ಕೆ ತುಂತುರು ಮಳೆಯಲ್ಲಿ ನಾಟ್ಯವಾಡಿದೆ ಕಾಮನಬಿಲ್ಲು ಎಲ್ಲೋ ಮರೆಯಲ್ಲಿ. ಮನು ಕ್ಲಾಸಿನಲ್ಲಿ ಇದ್ದರೂ ಅವನ ಮನಸ್ಸು ಸಿಲ್ವಿಯೊಂದಿಗೆ ಡುಯೆಟ್ ಹಾಡುತ್ತಿತ್ತು.ಕ್ಲಾಸ್ ಮುಗಿದಿದ್ದರೂ ಅವನೊಬ್ಬನೇ ಅವನ ಗುಂಗಲ್ಲೆ ಕುಳಿತಿರುತ್ತಿದ್ದ ಅವನನ್ನು ಎಚ್ಚರಿಸಿದ್ದು ಅವಳ ಸ್ಪರ್ಶ.
ಹೆಗಲ ಮೇಲಿದ್ದ ಅವಳ ಕೈಯನ್ನು ನಿಧಾನವಾಗಿ ಪಕ್ಕಕ್ಕಿರಿಸಿ ಹಾಯ್ ಮಂದಿರಾ ನೀನು ಬಂದಿದ್ದು ಗೊತ್ತಾಗ್ಲಿಲ್ಲ ಸಾರಿ...
ಈಗೀಗ ಅವನಿಗೆ ಹಿಂಸೆ ಅನಿಸುತ್ತಿತ್ತು ಬೇಕೆಂತಲೇ ಮೈಮೇಲೆ ಬೀಳುತ್ತಿದ್ದ ಅವಳನ್ನು ಸಮಾಧಾನಿಸುವುದು ಅವನಿಂದ ಆಗುತ್ತಿರಲಿಲ್ಲ.
ಯಾಕೋ ಸೈಕೋತರ ಆಡ್ತೀಯಾ.
ನನ್ನ ಜೊತೆ ಸರಿಯಾಗಿ ಯಾಕೆ ಮಾತಾಡುತ್ತಿಲ್ಲ ಇನ್ನು ಕಾಲೇಜು ಕೆಲವೇ ದಿವಸ ಎಂದು ಅವನನ್ನು ತಬ್ಬಿಕೊಳ್ಳಲು ಮುಂದಾದಳು.
ಮನು ಕೊಂಚ ಹಿಂದೆಸರಿದ ಕ್ಲಾಸಿನಲ್ಲಿ ಅವರಿಬ್ಬರನ್ನು ಹೊರತುಪಡಿಸಿ ಬೇರೆ ಯಾರೂ ಇರಲಿಲ್ಲ.
ಇಂದೇಕೋ ಮಂದಿರಾ ತುಂಬಾ ಭಾವಪರವಶಳಾಗಿದ್ದಳು ಅವನನ್ನು ಗಟ್ಟಿಯಾಗಿ ತಬ್ಬಿಕೊಂಡಳು.ಮನು ಬಿಡಿಸಿಕೊಳ್ಳಲು ತಡಕಾಡಿದ..ಅವಳ ಬಂಧನ ಇನ್ನೂ ಗಾಢವಾಯಿತು ಅವನನ್ನು ಚುಂಬಿಸಲು ಯತ್ನಿಸಿದಳು ಅವಳನ್ನು ದೂರತಳ್ಳಿ ಕೋಪದಲ್ಲಿ ಕೆನ್ನೆಗೆ ಬಾರಿಸಿದ.
"ನೋಡು ನನಗೆ ನನ್ನದೇ ಆದ ಜೀವನವಿದೆ ಮೋಜು-ಮಸ್ತಿ ಮಾಡಲು ತುಂಬಾ ಜನರ ಸಿಗುತ್ತಾರೆ ಹೋಗು" ಎಂದು ಬಿರ ಬಿರನೆ ಹೊರಟು ಬಿಟ್ಟ.
"ಮನು ನಾನು ಅಪರಾಧಿ ಎಂಬ ಭಾವ ನನ್ನನ್ನು ಕಾಡುತ್ತಿದೆ ಇಲ್ಲಿರಲು ನನಗೆ ಸಾಧ್ಯವಾಗುತ್ತಿಲ್ಲ ಹೆತ್ತವರ ನಿರೀಕ್ಷೆಯನ್ನು ಹುಸಿ ಮಾಡಿರುವೆ.ಪ್ಲೀಸ್ ನನ್ನನ್ನು ಕ್ಷಮಿಸಿಬಿಡು. ನಿನ್ನ ಅಸಹಾಯಕತೆಯನ್ನು ನನ್ನಿಂದ ಸಹಿಸಲಾಗುತ್ತಿಲ್ಲ.
ಈ ಒಂದು ತಿಂಗಳು ನಮ್ಮಿಬ್ಬರ ಜೀವನದಲ್ಲಿ ಅಮೂಲ್ಯವಾದ ದಿನಗಳು.
ಹೌದು ನೀನು ನಿನ್ನ ಗುರಿ ಮುಟ್ಟಲು..ನಾನು ನನ್ನ ಹೆತ್ತವರೊಂದಿಗೆ ಕಡೆಯ ದಿನಗಳನ್ನು ಕಳೆಯಲು.
ಮೌನದ ತೇರಿಗೆ ನೆನಪುಗಳೇ ರಾಯಭಾರಿ..
ಕಾಯುವೇ ಗೆಳೆಯ ನೀ ಬಂದು ಕರೆಯುವ ದಾರಿಯನು..
ಕೊಂಚ ಮನಸ್ಸು ಮಾಡು..ನನ್ನಿ ನಿರ್ಧಾರಕ್ಕೆ ಬೆಂಬಲಿಸು.ಇಂದು ಸಂಜೆ ಊರಿಗೆ ಪ್ರಯಾಣಿಸುತ್ತಿರುವೇ..
ಇಂತಿ ನಿನ್ನವಳು ಸಿಲ್ವಿ..."
"ಈ ಸಂಜೆ ನನ್ನ ಬದುಕನ್ನು ನಿರ್ಧರಿಸಿದರೆ ಅದರ ನಿರ್ಣಾಯಕ ನೀನೆ...
ಭಾನು ಬಾಗಿರುವುದು ಭಾರದಿಂದಲ್ಲ. ಭುವಿಯ ಬಾಂಧವ್ಯ ಬೆಸೆಯಲು..
ಮನು ನಾನು ನಿನ್ನ ತುಂಬಾ ಪ್ರೀತಿಸ್ತೀನಿ ನಿನ್ನ ಬಿಟ್ಟು ಒಂದು ಕ್ಷಣನು ನನ್ನಿಂದ ಇರೋಕಾಗಲ್ಲ ನೀನು ಹೊಡೆದಿರುವುದು ನನಗೆ ಬೇಜಾರಿಲ್ಲ. ಆದರೆ ನೀನಾಡಿದ ಮಾತು ನನ್ನನ್ನು ತುಂಬಾ ಕಾಡುತ್ತಿದೆ.
ನನಗೆ ತಂದೆ ತಾಯಿ ಯಾವುದಕ್ಕೂ ಇಲ್ಲ ಎಂದವರಲ್ಲ. ನಾನು ಕೇಳಿದ್ದೆಲ್ಲವೂ ನನಗೆ ಸಿಕ್ಕಿದೆ ಆದರೆ ಅವರಿಗೇನು ಗೊತ್ತು ನಾನು ಬಯಸಿದ ಪ್ರೀತಿ ಕೊಡಲು ಅವರು ಮರೆತರು.
ಆ ಪ್ರೀತಿಯನ್ನು ನಿನ್ನಲ್ಲಿ ಕಂಡೆ ನಿನ್ನ ಬಿಟ್ಟು ನನಗೆ ಬದುಕಲು ಸಾಧ್ಯವಿಲ್ಲ.
ನಂಗೊತ್ತು ಒಬ್ಬರನ್ನೊಬ್ಬರು ಪ್ರೀತಿಸಿದರೆ ಮಾತ್ರ ಜೀವನ. ಅಂತಹ ಜೀವನ ನನಗಿಲ್ಲ,
ಆದರೂ ಸಣ್ಣದೊಂದು ಆಸೆ, ಒಂದು ಅವಕಾಶ ನೀನು ನೀಡುವುದಾದರೆ ನಾನು ಜೀವಂತವಾಗಿರುವೆ ಇಲ್ಲದಿದ್ದರೆ ನಾನು ನನ್ನ ಬದುಕನ್ನು ಅಂತ್ಯಗೊಳಿಸಲು ಸಿದ್ದಳಿರುವೆ.
ಸಂಜೆ ಒಂಭತ್ತರ ತನಕ ನೀಲಾವರಿ ಬೆಟ್ಟದಲ್ಲಿ ನಿನಗಾಗಿ ಕೈಯಲ್ಲಿ ಜೀವ ಹಿಡಿದು ಕಾದಿರುವೆ..
ಇಂತಿ ನಿನ್ನ ಪ್ರೀತಿಯ ಮಂದಿರಾ"
ಏಕ ಕಾಲದಲ್ಲಿ ಬಂದ ಎರಡು ಮೆಸೇಜ್ ಗಳು ಮನುವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದವು..
ಸ್ವಲ್ಪ ಯಾಮಾರಿದರೂ ಪರಿಸ್ಥಿತಿ ಕೈ ಮೀರಿ ಹೋಗುವುದು.ಎರಡೂ ಸನ್ನಿವೇಶವನ್ನು ಬಹು ಜಾಗರೂಕತೆಯಿಂದ ನಿಭಾಯಿಸಬೇಕೆಂಬುದು ಮನುವಿಗೆ ತಿಳಿದಿತ್ತು.
ಮನದಲ್ಲಿ ಏನೋ ಲೆಕ್ಕಾಚಾರ ಹಾಕಿದವನು ಗಿರಿಧಾಮ ಪಕ್ಕದ ನೀಲಾವರಿ ಬೆಟ್ಟದತ್ತ ಹೊರಟನು....
ನಿರ್ಜನವಾದ ಆ ರಾತ್ರಿಯಲ್ಲಿ ಹುಣ್ಣಿಮೆಯು ಹಾಲು ಬೆಳಕು ಸೂಸಿತ್ತು. ಅಲ್ಲಿ ಯಾರು ಇದ್ದಂತಿರಲಿಲ್ಲ,ಕಡಿದಾದ ಬೆಟ್ಟ ಒಂದು ಕಡೆಗೆ ಬಾಗಿತ್ತು.ಕಮರಿಯ ಆಳ ಸುಮಾರು ೧೨೦ ರಿಂದ ೧೫೦ ಅಡಿ ಇರಬಹುದು.
ಮಂದಿರಾ ಅಲ್ಲೆಲ್ಲು ಕಾಣದ ಕಾರಣ ಪಕ್ಕದಲ್ಲೆ ಇದ್ದ ಮರವೇರಿ ಸುತ್ತಲೂ ಕಣ್ಣು ಹಾಯಿಸಿದ.
ಕೃಷ್ಣ ಸುಂದರಿ ವಸ್ತ್ರಲಂಕಾರದಲ್ಲಿ ಕಂಗೊಳಿಸುತ್ತಿದ್ದಳು.ಇವಳು ಸಹ ಮಧುವಣಗಿತ್ತಿ ತರಹ ಅಲಂಕಾರ ಮಾಡಿ ಕೊಂಡಿರುವಳು.
ಮನು ಮರದಿಂದಿಳಿದು ನೇರವಾಗಿ ಅವಳತ್ತ ಹೆಜ್ಜೆ ಹಾಕಿದ.
ಅಶ್ಚರ್ಯವೆನ್ನವಂತೆ ಅಲ್ಲಿ ಯಾರಿರಲಿಲ್ಲ. ಭಯದಲ್ಲಿ ಅವನ ಎದೆ ಹೊಡೆದು ಕೊಳ್ಳುತ್ತಿತ್ತು ಮತ್ತೆ ಮಂದಿರಾ ....ಮಂದಿರಾ...ಎನ್ನುತ್ತ ಬೆಟ್ಟದ ತುದಿ ಏರಿ ಕಮರಿಯ ಕಡೆ ಇಣುಕಿದ....
"ನೀನು ಬಂದೇ ಬರ್ತಿಯಾ ಅಂತ ಗೊತ್ತು ಕಾಣೋ"
ಹಿಂದಿನಿಂದ ತಬ್ಬಿಕೊಂಡಳು ಮಂದಿರಾ... ಮನುವಿಗೆ ಹೋದ ಜೀವ ಬಂದಂತಾಯಿತು...
ಅವನು ಅವಳನ್ನು ವಿರೋಧಿಸಲಿಲ್ಲ... ಅವಳ ಮನಸ್ಸೊ ಇಚ್ಚೆಯಂತೆ ಅವನನ್ನು ಮುದ್ದಿಸಿದಳು.
ಮನು ಕಲ್ಲು ಬಂಡೆಯಂತೆ ನಿಂತಿದ್ದ..ಅವನ ಕಣ್ಣುಗಳಿಂದ ಉದುರಿದ ಬಾಷ್ಪ ಮಂದಿರಾನ ಕೆನ್ನೆ ಸವರಿತು.
ಏನಾಯಿತು ಮನು ಯಾಕೆ ಅಳುತ್ತಿದ್ದಿ?
ಮನು ಅವಳ ಕೈ ಹಿಡಿದು ಸ್ವಲ್ಪ ದೂರ ನಡೆದ..
ಅವರಿಬ್ಬರೂ ಅಲ್ಲೆ ಕಲ್ಲಿನ ಮೇಲೆ ಕುಳಿತರು..
ಮನು ಮಾತಾಡತೊಡಗಿದ.
ಮಂದಿರಾ ...ನನ್ನ ಎಷ್ಟು ಪ್ರೀತಿಸ್ತಿಯಾ?
ಮಂದಿರಾ: ತಂಬಾನೇ....ಮನು ನಿನ್ನ ಬಿಟ್ಟಿರೋಕೆ ಸಾಧ್ಯವಿಲ್ಲ ಕಾಣೋ
ಮನು: ನಾನು ಸಹ ಅವಳನ್ನ ಬಿಟ್ಟು ನಿನ್ ಜೋತೆ ಹೇಗಿರಲಿ..
ನಿಂಗೆ ಒಂದ ದಿನನೂ ನಂಗೂ ಒಂದು ಮನಸ್ಸಿದೆ ಅಂತ ಅನಿಸಲಿಲ್ಲವೇ?
ಮಂದಿರಾ: ಯಾಕೆ ನೀನು ಯಾರನ್ನಾದರೂ ಪ್ರೀತಿಸ್ತಿದ್ದಿಯಾ?
ಮನು: ಹೌದು..
ಮಂದಿರಾ: ಹಾಗಾದ್ರೆ ನನಗು ನಿನಗು ಏನು ಸಂಬಂಧ ಮತ್ಯಾಕೆ ಈ ನಡು ರಾತ್ರಿಯಲ್ಲಿ ಬಂದೆ?
ಮನು: ನಾನು ನಿನ್ನ ಭಾವನೆಗಳಿಗೆ ಬೆಲೆ ಕೊಟ್ಟು ಬಂದೆ..ತಪ್ಪೆ? ಹಾಗಾದರೆ ಪ್ರೀತಿಗಿರುವುದು ಒಂದೇ ಮುಖನಾ?
ಮಂದಿರಾ: ನಿನ್ನ ಪ್ರೀತಿಗೆ ಹತ್ತು ಹಲವು ಮುಖವಿರಬಹುದು. ಅದರೆ ನನ್ನ ಪ್ರೀತಿಗೆ ಒಂದೇ ಮುಖ..ನೀನಂದು ಕೊಂಡಂತೆ ನಾನೇನು ಹೇಡಿಯಲ್ಲ.. ಅದರೂ ನಾನು ನನ್ನ ಮನಸ್ಸಿನ ಹತೋಟೆ ಕಳೆದುಕೊಂಡಿದ್ದು ಸುಳ್ಳಲ್ಲ. ಒಮ್ಮೊಮ್ಮೆ ನೀನಿಲ್ಲದ ಈ ಜಗತ್ತು ಬರಿ ಶೂನ್ಯ ಅನಿಸಿಬಿಡುತ್ತೆ. ನಿನ್ನಷ್ಟು ಮಾನಸಿಕ ಸ್ಥೈರ್ಯ ನನ್ನಲಿಲ್ಲ..ಪ್ಲೀಸ್ ಅಳು ಬರುತ್ತೆ ನನ್ನ ಬಿಟ್ಟು ಹೋಗಬೇಡ...
ಮನು: ಇಲ್ಲ ಪುಟ್ಟ..ನಾನೆಂದು ನಿನ್ನ ಸ್ನೇಹಿತನೆ..ಆದರೆ ನೀನಂದು ಕೊಂಡಂತೆ ಪ್ರೇಮಿಯ ಸ್ಥಾನ ಆಲಂಕರಿಸಲಾರೆ.
ಇನ್ನಾದರೂ ನಿನ್ನ ಹುಚ್ಚಾಟವನ್ನು ಬಿಡಬಹುದು ತಾನೇ?
ಮಂದಿರಾ: ಹಾ...ಈ ಹುಚ್ಚು ಹುಡುಗಿ ನಿನ್ನ ಮರೆತು ಬಿಡುತ್ತಾಳೆ..ಹೆಣ್ಣು ಈ ಸಮಾಜದಲ್ಲಿ ಏನು ಬಯಸಿದರೂ ತಪ್ಪೆ.ಅವಳಿಗೆ ಏನು ಸಿಗುತ್ತದೋ ಅದರಲ್ಲಿ ತೃಪ್ತಿ ಕಾಣಬೇಕು.. ಅಲ್ಲವೇ..
ಅವರಿಬ್ಬರ ತರ್ಕ ಅಂತ್ಯವಿಲ್ಲದ್ದು. ಮೌನಿಯಾದ ಮನು ಆಕಾಶದ ಕಡೆ ಮಖಮಾಡಿ ಯೋಚಿಸುತ್ತಿದ್ದರೆ ಮಂದಿರಾ ಅವನ ಹೆಗಲಿಗೊರಗಿ ಕುಳಿತ್ತಿದ್ದಳು.
ಹುಣ್ಣಿಮೆಯ ಬೆಳದಿಂಗಳಲ್ಲಿ ನಕ್ಷತ್ರಗಳು ಕಣ್ಣಮುಚ್ಚಾಲೆ ಆಡುತ್ತಿದ್ದರೆ ಅದರಲ್ಲೊಂದು ನಕ್ಷತ್ರ ಕಾಲು ಜಾರಿ ಭುವಿಯತ್ತ ಓಡೋಡಿ ಬರುತ್ತಿತ್ತು.
ಮನು ಮಂದಿರಾನ ಸಮಧಾನಿಸತೊಡಗಿದ...ಏಳು ..ನಾವಿಲ್ಲಿರುವುದು ಸರಿಯಲ್ಲ..ಯಾರಾದರೂ ನೋಡಿದರೂ ಚೆನ್ನಾಗಿರಲ್ಲ..
ಬಾ...ಹೋಗೋಣ ಎಂದು ಕೈ ಹಿಡಿದುಕೊಂಡ..
ಮಂದಿರಾಗೆ ಬೇರೆ ದಾರಿ ಇರಲಿಲ್ಲ ಅವನೊಂದಿಗೆ ನಡೆದಳು.ಅವಳನ್ನು ಹಾಸ್ಟೆಲ್ ಗೆ ಬಿಟ್ಟು ಮತ್ತೆ ಸ್ವಲ್ಪ ಸಮಧಾನ ಹೇಳಿ ಅಲ್ಲಿಂದ ಹೊರಟ.
ರಾತ್ರಿ ೨ ಘಂಟೆ ಇರಬಹುದು ,.ಗುಸು ಗುಸು ಪಿಸು ಮಾತು ಕೇಳಿ ಮನು ಗಕ್ಕನೆ ನಿಂತ..ನೀಲಾವರಿ ಬೆಟ್ಟದಿಂದ ಹಿಡಿದು ಗಿರಿಧಾಮದವರೆಗೆ ಯಾವುದೇ ಜನವಸತಿ ಇರಲಿಲ್ಲ..
ಆದರೂ ಐದಾರು ಜನರ ಗುಂಪೊಂದು ಬೆಂಕಿ ಹಾಕಿಕೊಂಡು ಮಾತಾಡುತ್ತಿದ್ದರು. ಕೈಯಲ್ಲಿದ್ದ ನಾಡ ಕೋವಿಗಳು ಅವರನ್ನು ಬೇಟೆಗಾರರೆಂದು ಉಹಿಸಲು ಅಸಾಧ್ಯವಾಗಲಿಲ್ಲ.
ಮನುವನ್ನು ತಡೆದು ಹೀಗೆಲ್ಲ ತಿರುಗಾಡಬೇಡ..ಬೇಗ ಮನೆ ಸೇರಿಕೊ..ನಾವು ನಕ್ಸಲೇಟ್ ಯಾರಿಗೂ ನಮ್ಮ ಬಗ್ಗೆ ಹೇಳಬೇಡ ಎಂದು ಸೂಚಿಸಿದರು.. ತರಾತುರಿಯಲ್ಲಿ ಮನೋಹರ ಹಾಸ್ಟೆಲ್ ಸೇರಿಕೊಂಡ.
ಮುಂದಿನ ಒಂದಿಪ್ಪತ್ತು ದಿನಗಳು ಎಲ್ಲಾ ಮಾಮೂಲಿನಂತೆ ಇದ್ದವು.ಎಲ್ಲರೂ ಅವರವರ ಎಗ್ಸಾಂನಲ್ಲಿ ಬ್ಯುಸಿ..ಸಿಲ್ವಿಯ ಸುಳಿವು ಸುಳಿದಿರಲಿಲ್ಲ..
ಮನೋಹರ ತುಂಬಾ ಖುಷಿಯಾಗಿದ್ದ..ಇವತ್ತು ಅವನ ಕೊನೆಯ ಪರೀಕ್ಷೆ,ಇನ್ನೆನು ನಾಳೆ ಅವಳು ಬಂದು ಸೇರುವಳು..
ಕಡೆಯ ಪರೀಕ್ಷೆ ಮುಗಿಸಿದ್ದ ಮನು ನಾಪತ್ತೆಯಾಗಿದ್ದ.
ಸಿಲ್ವಿಯಲ್ಲಾದ ಬದಲಾವಣೆ ಅವಳ ಚಿಕ್ಕಮ್ಮನನ್ನು ಅನುಮಾನಕ್ಕಿಡುಮಾಡಿತ್ತು..ಪರೀಕ್ಷೆ ಪೋಸ್ಟಪೋನ್ ಅಗಿತ್ತೆಂದು ಸುಳ್ಳು ಹೇಳಿದ್ದಳು.ಅವರು ಅವಳ ಬ್ಯಾಗ್ ಪರಿಶೀಲಿಸಿದಾಗ ಕರಮಣಿ ಸರ ಅವರನ್ನು ಬೆಚ್ಚಿ ಬೀಳಿಸಿತ್ತು.
ಇತ್ತ ಸಿಲ್ವಿ ದೈಹಿಕವಾಗಿ ಬದಲಾಗಿದ್ದಳು.ವಿಪರೀತ ಸುಸ್ತು ,ತಲೆ ಸುತ್ತು ಏನೇನೋ ಸೂಚನೆ ನೀಡುತ್ತಿತ್ತು.
ಇನ್ನು ಮುಚ್ಚಿಡಲು ಭಯವಾದಗ ಚಿಕ್ಕಮ್ಮನೊಂದಿಗೆ ಎಲ್ಲಾ ಹೇಳಿ ಕೊಂಡಿದ್ದಳು.
ಅವರು ಯಾರಿಗೂ ತಿಳಿಯದಂತೆ ಸಿಲ್ವಿಯೊಂದಿಗೆ ಮನುವಿನ ಮೀಟ್ ಮಾಡಲು ಹೊರಟರು.
ಅದರೆ ಇಲ್ಲಿನ ಚಿತ್ರಣ ಸಂಪೂರ್ಣ ಬದಲಾಗಿತ್ತು.. ಮನು ಸಿಲ್ವಿಗೆ ಕೈಕೊಟ್ಟು ತಲೆಮರೆಸಿಕೊಂಡಿರುವನು ಎಂಬ ಸುದ್ದಿ ಎಲ್ಲೆಡೆ ಹಬ್ಬಿತ್ತು. ಯಾರು ಹಬ್ಬಿಸಿರುವರು ಎನ್ನುವುದಕ್ಕೆ ಆಧಾರವಿಲ್ಲ.. ಮನುವಿನ ಗೈರು ಅದಕ್ಕೆ ಪುಷ್ಟಿ ನೀಡುತ್ತಿತ್ತು.
ಯಾವುದೇ ಸುಳಿ ಸಿಗದ ಅವರು ಅಳುತ್ತ ಹಿಂದಿರುಗಿದರು.
ಸಿಲ್ವಿಯ ಅಳುವಿನ ರೋಧನ ತಾಯಿಗೆ ಸಹಿಸಲಾಗಲಿಲ್ಲ.ಹೀಗೆ ಮನುವಿನ ಹುಡುಕಾಟದಲ್ಲಿ ಒಂದು ವಾರ ಕಳೆದಿದ್ದರು. ಸಂದರ್ಭಕ್ಕನುಗುಣವಾಗಿ ಅವರ ಸಮಯ ಪ್ರಜ್ಞೆ ಕೆಲಸಮಾಡಿತು.ಸಿಲ್ವಿಯ ಜೀವನ ಹಾಳಾಗುವುದು ಅವರಿಗಿಷ್ಟವಿರಲಿಲ್ಲ.
ಜಾನ್ ಅವರ ದೂರ ಸಂಬಂಧಿ ತನ್ನದೆ ಸ್ವಂತ ಬ್ಯುಸಿನೆಸ್ ಮಾಡಿಕೊಂಡಿದ್ದ..ಅವಸರವಸರದಲ್ಲಿ ಮದುವೆಗೆ ಸಿದ್ದತೆ ಮಾಡಿಸಿದರು.
ಆತ್ಮಹತ್ಯೆಯ ಯೋಚನೆ ತಲೆಯಲ್ಲಿ ಸುಳಿದು ಸುಳಿದು ಮಾಯವಾಗುತ್ತಿತ್ತು.ಮನು ಮಾಡಿದ ಮೋಸದಿಂದ ಮನಸ್ಸು ಘಾಸಿಯಾಗಿತ್ತಾದರೂ...ಇನ್ನೊಂದು ಜೀವವನ್ನು ಸಾಯಿಸಲು ಅವಳಿಗೇನು ಹಕ್ಕಿದೆ?
ವಿಜೃಂಭಣೆಯ ಆಚರಣೆಯಲ್ಲಿ ಮುಗಿದ ಮದುವೆ ಅಂತೋನಿ ಕುಟುಂಬಕ್ಕೆ ಉಲ್ಲಾಸ ನೀಡಿದರೆ ಸಿಲ್ವಿಗೆ
ನುಂಗಲಾರದ ಬಿಸಿ ತುಪ್ಪ.ಒಳಗೊಳಗೆ ನೊಂದಳು,ಒಡಲೊಳಗೆ ಅತ್ತಳು.
ಹೆಣ್ಣಿನ ಜೀವನ ಕನ್ನಡಿಯಿದ್ದಂತೆ ಅದಕ್ಕೊಂದು ಪ್ರೇಮ್ ಇದ್ದರೇನೆ ಚಂದ..ಇಲ್ಲಾ ಇಲ್ಲಾ ಅದೊಂದು ಸುಂದರ ಭಾವಚಿತ್ರ ಯಾವ ಪ್ರೇಮ್ ಹಾಕಿದರೂ ಹೊಂದಿಕೊಂಡು ಬಿಡುತ್ತೆ..ಒಮ್ಮೆ ಹೊಂದಿಕೊಂಡರೆ...ಆ ಚೌಕಟ್ಟೆ ಅವಳಿಗೆ ರಕ್ಷಣೆ..ಅವಳು ಯಾವತ್ತೂ ಆ ಚೌಕಟ್ಟನ್ನು ಮೀರಿ ಹೊರಬರಲು ಮನಸ್ಸು ಮಾಡಳು..
ಅವಳಗೀಗ ಏಳುವರೆ ತಿಂಗಳು ಲೆಕ್ಕಚಾರ ಏನೇ ಇರಲಿ...ಮುದ್ದಾದ ಮಗು..ಎಲ್ಲರ ನಗುವಿಗೆ ಕಾರಣ..ಅತಿ ಸಂಭ್ರಮ ಪಟ್ಟವರ ಪಟ್ಟಿಯಲ್ಲಿ ಜಾನ್ ಮೊದಲನೆಯವ..ಚಿಕ್ಕಮ್ಮ ಅರಿತೆ ಬಾಣಂತನ ಮಾಡಿದರು.
ಛಲ ಬಿಡದ ಸಿಲ್ವಿ ಇಂಜಿನಿಯರಿಂಗ್ ನ ಕೊನೆಯ ಸೆಮಿಸ್ಟರ್ ಮುಗಿಸಿದ್ದಳು.. ಮಾರ್ಕ್ಸ್ ಕಾರ್ಡಗಾಗಿ ಕಾಲೇಜಿಗೆ ಬಂದಿದ್ದವಳಿಗೆ ಇದಿರಾದವನು ಮನೋಹರ್.
ತನ್ನ ಕಣ್ಣನ್ನು ತಾನೆ ನಂಬಲಾಗಲಿಲ್ಲ.
ಜನ್ಮ ಜನ್ಮಾಂತರದ ಬಾಂಧವ್ಯ ಸಾರಿ ಹೇಳುತ್ತಿತ್ತು.ಕೊರಳಲ್ಲಿರುವ ತಾಳಿ..
ಹತ್ತಿರ ಬಂದ ಮನುವಿನ ಮಧ್ಯ ತನ್ನ ಬ್ಯಾಗ್ ಹಿಡಿದು ಅಂತರ ಕಾಯ್ದುಕೊಂಡಳು.ರೋಷದಿಂದ ಅವಳ ರಕ್ತ ಕುದಿಯುತ್ತಿತ್ತು. ಕೈ ಹಿಡಿದ ಮನುವನ್ನೊಮ್ಮೆ ದಿಟ್ಟಿಸಿ ನೋಡಿದಳು, ಅದೇ ಮುಗ್ದ ಹುಡುಗ ನನ್ನವನು...ಯಾಕೊ ಅವಳ ಕೋಪ ಹೆಚ್ಚು ಹೊತ್ತು ನಿಲ್ಲಲಿಲ್ಲ....ಅವಳನ್ನು ಕಾಫಿ ಶಾಪ್ ಗೆ ಕರೆದು ಕಾರಣ ಕೇಳದಿದ್ದರೂ ಎಲ್ಲವನ್ನು ಹೇಳತೊಡಗಿದ..
ಅಂದು ನನ್ನ ಕೊನೆಯ ಪರೀಕ್ಷೆ.. ಎಷ್ಟು ಖಷಿಯಾಗಿದ್ದೆ..ನಿನ್ನ ನೋಡಲು ತುದಿಗಾಲಲ್ಲಿ ನಿಂತಿದ್ದೆ.ಬೆಳ್ಳಂಬೆಳೆಗೆ ೪:೩೦ ರ ಬಸ್ಸಗೆ ತುಸು ಬೇಗನೆ ಬಸ್ ಸ್ಟ್ಯಾಂಡ್ ಗೆ ಬಂದಿದ್ದೆ.
ಯಾವದೋ ಗುಂಪೊಂದು ನನ್ನ ಕಿಡ್ನಪ್ ಮಾಡಿತ್ತು.ಎಚ್ಚರವಾದಗ ದಟ್ಟ ಕಾಡಿನಲ್ಲಿ ಸುಮಾರು ನೂರಕ್ಕೂ ಹೆಚ್ಚು ಮಂದಿ ಢಕಾಯಿತರ ಮಧ್ಯ ನಾನಿದ್ದೆ..
ನಾನೆ ಮಾಡಿಕೊಂಡ ಎಡವಟ್ಟು ಅದರಲ್ಲಿ ಐದಾರು ಜನ ಪರಿಚಿತರು...ನೀವು ನಕ್ಸಲೇಟ್ ಅಲ್ಲವೇ ಎಂದು ಕೇಳಿದ್ದೆ..
ಸುಮಾರು ಹತ್ತು ದಿನಗಳ ಕಾಲ ನನ್ನನ್ನು ಕೂಡಿ ಹಾಕಿದ್ದರು..
ಮತ್ತೆಲ್ಲಿಗೋ ನನ್ನ ಸಾಗಿಸಿದರು.. ಗುಜರಾತ್ ನ ಸ್ಥಳಿಯ ಕೋರ್ಟ್ ನನಗೆ ೧೪ ತಿಂಗಳ ಶಿಕ್ಷೆ ವಿಧಿಸಿತ್ತು.ಕಾರಣ ಕೇಳಿದ್ದಕ್ಕೆ ನಾನೊಬ್ಬ ನಕ್ಸಲೇಟ್..
ಜಾಮೀನಿಗಾಗಿ ನನ್ನ ಅಪ್ಪ ಅಮ್ಮ ತಮ್ಮ ಅಲ್ಲಿಯ ತನಕ ಬಂದಿದ್ದರೂ ಯಾವುದೇ ಉಪಯೋಗವಾಗಲಿಲ್ಲ.
ಪರಿಸ್ಥಿತಿ ನೋಡು ಒಮ್ಮೊಮ್ಮೆ ನಮ್ಮ ತಪ್ಪು ಸರಿ ಯಾವುದು ಪರಿಗಣನೆಗೆ ಬರಲ್ಲ.
ಮಂದಿರಾ ಹೇಳಿದಳು ನೀನು ಪುನಃ ಪರೀಕ್ಷೆ ಬರೆದೆ ಅಂತ.
ಅಬ್ಬಾ ದೇವರು ದೊಡ್ಡವನು.ನನಗೆ ಎಷ್ಟೇ ನೋವು ಕೊಟ್ಟರು.. ನಿನ್ನನ್ನು ದೂರ ಮಾಡಲಿಲ್ಲ...
ನೀನು ಹೇಗಿದ್ದಿ ಸಿಲ್ವಿ..ತುಂಬ ನೋವು ಕೊಟ್ಟು ಬಿಟ್ಟೆ ಅಲ್ವಾ...
ಸಿಲ್ವಿ ನಗುತ್ತ ತನ್ನ ಬಗ್ಗೆ ಒಂದಿಂಚು ಮಾಹಿತಿ ಬಿಟ್ಟು ಕೊಡದೆ
"ಮನು..ಯಾರು ನನ್ನಿಂದ ನಿನ್ನನ್ನು ದೂರ ಮಾಡಲಾರರು..
ಈ ಒಂದುವರೆ ವರ್ಷದಲ್ಲಿ ನಿನಗಾಗಿ ಹಂಬಲಿಸದೆ ಇರುವ ದಿನವಿಲ್ಲ.. ನಮ್ಮಿಬ್ಬರ ಕಷ್ಟ ಮುಗಿಯಿತು...ಇನ್ನು ಸುಖದ ದಿನಗಳು..ನಮ್ಮ ಮನೆಯಲ್ಲು ಒಪ್ಪಿದ್ದಾರೆ. ಇನ್ನು ಹತ್ತು ದಿನಗಳು ಇಲ್ಲೆ ಮೀಟ್ ಮಾಡೋಣ..ನಾನು ಎಲ್ಲಾ ಸಿದ್ದತೆ ಮಾಡಿಕೊಳ್ಳುವೆ..ಅಲ್ಲಿ ತನಕ ನನಗೆ ಪೋನ್ ಮಾಡು ಎಂದು ಪೋನ್ ನಂಬರ್ ನೀಡಿದ್ದಳು..
ಅವರಿಬ್ಬರ ಊರು ಸುಮಾರು ೨೦ ಕಿ ಮಿ ಅಕ್ಕ ಪಕ್ಕದಲ್ಲಿತ್ತು..ಇಬ್ನರೂ ಒಂದೇ ಬಸ್ಸನಲಿ ಕೈ.ಕೈ ಹಿಡಿದು ಊರಿಗೆ ಬಂದಿದ್ದರು..
ಸಿಲ್ವಿ ತುಂಬ ಜಾಗರೂಕತೆಯಿಂದ ಸನ್ನಿವೇಶವನ್ನು ನಿಭಾಯಿಸಿದಳು. ಅವಳಿಗೆ ಎಲ್ಲವೂ ಅರಿವಾಗಿತ್ತು.ಇಲ್ಲಿ ಮನುವಿನ ಯಾವ ತಪ್ಪು ಇಲ್ಲ.. ಅವಳ ಜೀವನದ ಇಂಚಿಂಚು ಘಟನೆ ಅವನಿಗೆ ಹೇಳುವ ಮನಸ್ಸು ಮಾಡಲಿಲ್ಲ..ಹೇಳಿದರೂ ಏನು ಪ್ರಯೋಜನ..ನನ್ನ ಹಣೆಯಲ್ಲಿ ಬರೆದಿರುವುದೆ ಇಷ್ಟು . ಎಲ್ಲವನ್ನ ಹೇಳಿ ಅವನ ಜೀವನವಿಡಿ ಕೊರಗುವಂತೆ ಮಾಡುವುದಕ್ಕಿಂತ ನಾನು ಮೋಸಗಾರ್ತಿ ಆಗುವುದೇ ಲೇಸು...ನನ್ನ ದ್ವೇಷಿಸಿಯಾದರೂ ಅವನ ಜೀವನ ರೂಪುಗೊಳ್ಳಲಿ.. ಮನಸ್ಸು ಮನುವನ್ನೆ ಬಯಸುತ್ತಿದ್ದರೂ ,,ಜೀವನದಲ್ಲಿ ಅವನು ಎಂದೋ ಮುಗಿದು ಹೋದ ಅಧ್ಯಾಯ..
ಪ್ರತಿದಿನ ಮನುವಿನೊಂದಿಗೆ ಮುದ್ದು ಮುದ್ದಾಗಿ ಮಾತನಾಡುತ್ತಿದ್ದಳು...ಇಂದು ಮೊಬೈಲ್ ಸ್ವಿಚ್ಚಡ್ ಆಪ್..
ಮನುವಿಗೆ ಒಂದು ತೋಚಲಿಲ್ಲ..ಅವಳು ನಿಗದಿಪಡಿಸಿದ ಸ್ಥಳದಲ್ಲೂ ಅವಳಿಲ್ಲ..ಅಂತೂ ಹುಡುಕಾಡಿ ಅವಳ ಮನೆಗೆ ಹೋದ ಮನುವಿಗೆ ಅವಳ ಚಿಕ್ಕಮ್ಮನ ಮಾತು ಕೇಳಿ ಸಿಡಿಲು ಬಡಿದಂತಾಯ್ತು..
"ಸಿಲ್ವಿಗೆ ಮೊನ್ನೆಯಷ್ಟೆ ಮದುವೆಯಾಯ್ತ... ಹುಡುಗ ಫ್ರಾನ್ಸ್ನಲ್ಲಿ ಬ್ಯುಸಿನೆಸ್ ಮ್ಯಾನ್..ಮದುವೆಯಾಗಿ ವಿದೇಶಕ್ಕೆ ತೆರಳಿದರು". ನಂಬದಾದ ನನಗೆ ಸಾಕ್ಷಿ ಸಮೇತ ಪೋಟೊ ಮುಂದಿಟ್ಟರು..
ಇದೇನು ಒಂದಕ್ಕೊಂದು ಹೋಲಿಕೆಯಾಗುತ್ತಿಲ್ಲ..ನಿನ್ನೆಯವರೆಗೂ ನನ್ನ ಜೊತೆ ಮುದ್ದು ಮುದ್ದಾಗಿ ಮಾತಾಡಿಕೊಂಡಿದ್ದಳು..
ಅವಳಿಗೆ ಇನ್ನೊಂದು ಮದುವೇನಾ?
ಅವಳು ನನ್ನನ್ನು ತಿರಸ್ಕರಿಸುವವಳಾಗಿದ್ದರೆ ಮೊನ್ನೆ ಮೊನ್ನೆ ವರೆಗೂ ತಾಳಿಯನ್ನೆಕೆ ಇಟ್ಟುಕೊಂಡಿದ್ದಳು.
ಹೌದು..ಕೆಲವೊಂದು ಪ್ರಶ್ನೆ ಪ್ರಶ್ನೆಯಾಗಿದ್ದರೆ ಚಂದ.ಒಂದಂತು ಸತ್ಯ ಅವಳಿಗೆ ನನ್ನ ಅವಶ್ಯಕತೆಯಿಲ್ಲ.ಇದ್ದಿದ್ದರೆ ನನ್ನೊಂದಿಗೆ ಇರುತ್ತಿದ್ದಳು.
ಎಲ್ಲಾ ಖುಷಿಯಾಗಿರಬೇಕಿದ್ದರೆ ನಾನೊಬ್ಬ ದುಃಖಿಯಗಿ ಅಳುವುದು ಎಷ್ಟು ಸರಿ ..
ನಾನು ನನ್ನ ಜವಬ್ದಾರಿ ಮರೆಯುವ ಹಾಗಿಲ್ಲ..ಮನೆ ಪರಿಸ್ಥಿತಿನ ಸ್ವಲ್ಪ ಸುಧಾರಿಸಬೇಕು.ಅಪ್ಪ ಅಮ್ಮನ ಚೆನ್ನಾಗಿ ನೋಡಿಕೊಳ್ಳಬೇಕು.. ಅಮೇಲೆ ನನ್ನ ಜೀವನ ...
ಕೈ ತಪ್ಪಿ ಹೋದ ಕ್ಯಾಂಪಸ್ ಸೆಲೆಕ್ಷನ್..ಕೈಕೊಟ್ಟ ಮಡದಿ..ಎಲ್ಲವನ್ನು ಮರೆತು ಹೊಸ ಜೀವನಕ್ಕೆ ಕಾಲಿಟ್ಟಿದ್ದ ಮನು..
ಬೆಂಗಳೂರಿನಂತ ಮಹಾನಗರದಲ್ಲಿ ಕೆಲಸಕ್ಕೇನು ಬರವಿರಲಿಲ್ಲ.. ಓದಿಗೆ ತಕ್ಕ ಕೆಲಸವೂ ಸಿಕ್ಕಿತು.. ಮೊದಲೆಲ್ಲ ಮನುವಿಗೆ ಸಿಲ್ವಿ ಕನಸಾಗಿ ಕಾಡುತ್ತಿದ್ದಳು..ಬರು ಬರುತ್ತ ಕನಸು ಮಸುಕಾಗಿತ್ತು..ಅದರೆ ಎಂದೂ ಅವಳನ್ನ ಮರೆತವನಲ್ಲ..ಅದಕ್ಕೆ ಇನ್ನು ಮದುವೆಯಾಗದಿರುವುದೆ ಸಾಕ್ಷಿ.. ಈ ಆರು ವರ್ಷದಲ್ಲಿ ಅವಳು ಅವನಿಂದ ತುಂಬ ದೂರ ಹೋಗಿದ್ದಳು..ಇಂದೇಕೊ ಅವಳ ನೆನಪು ಬಹಳ ಕಾಡಿ ಕುಸಿದು ಕುಳಿತ..
ಹೌದು ಅವಳೇ.. ನಾನು ತಿರುಗಿ ನೋಡಿದ್ದು..ಅವಳು ನೋಡಿದ್ದಾಳೆ..
ಛೆ...ಬೇರೆಯಾರದರು...
ಇಲ್ಲಾ ..ಅವಳ ನೋಟ ನನ್ನ ಅಣುಕಿಸುತ್ತಿತ್ತು.
ಮೈ ಜುಮ್ ಅನ್ನುವಂತಾಯಿತು..ಅವಳು ಇದೇ ಊರಲ್ಲಿದ್ದಾಳೆ...
ಪ್ರೀತಿಸಿದ ಹುಡುಗಿ ಮೋಸ ಮಾಡಬಹುದು.
ಆದರೆ ಕೈ ಹಿಡಿದವಳು ಮೋಸ ಮಾಡುವಳೇ..
ಶಾಂತವಾಗಿದ್ದ ಮನುವಿನ ಬಾಳಲ್ಲಿ ಮತ್ತೆ ಸಿಲ್ವಿ ಬಿರುಗಾಳಿ ಎಬ್ಬಿಸಿದಳು..ನಾನೇಕೆ ಆಟೊ ನಿಲ್ಲಿಸಿಲ್ಲ.. ಅಂದರೆ...ಅವಳ ಪಕ್ಕದಲ್ಲಿದ್ದವನು...ಜಾನ್...ಜಾನ್ ಜಾಕಸ್ ಪೆರ್ನಾಂಡಿಸ್...
ಅಯ್ಯೊ...ಒಂದಕ್ಕೊಂದು ತಾಳೆಯಾಗುತ್ತಿದೆ..ಹೌದು ಅವಳೆ ನನ್ನ ಸಿಲ್ವಿ..
ಹೌದು ಅವರು ನಮ್ಮ ಕಂಪನಿಗೆ ಎಂ ಎಸ್ ಸ್ಟೀಲ್ ರಾಡ್ಗಳ ಸಪ್ಲೈರ್ ಜಾನ್...
ಅವರ ಮನೆ ವಿಳಾಸ ಕಲೆ ಹಾಕಲು ಅವನಿಗೇನು ಕಷ್ಟವಾಗಲಿಲ್ಲ..ನೇರವಾಗಿ ಮನೆಗೆ ಹೋಗಲು ಅವನಿಗದು ಸರಿ ಅನಿಸುತ್ತಿರಲಿಲ್ಲ..
ಜಾನ್ ಇಲ್ಲದ ಸಮಯದಲ್ಲಿ ಅವಳನ್ನು ಬೇಟಿ ಮಾಡಬೇಕು.ತುಂಬ ಸಲ ಹಿಂಬಾಲಿಸಿದ್ದ,ಕೊನೆಗೊಂದು ದಿನ ಅವಕಾಶ ತಾನಾಗಿಯೇ ಒದಗಿ ಬಂತು.
ನನಗೊತ್ತಿತ್ತು ನೀನು ಬಂದೆ ಬರುತ್ತಿಯಂತ ಆದರೆ ಇಷ್ಟು ಬೇಗ ನಿನ್ನ ಆಗಮನ ಉಹಿಸಿರಲಿಲ್ಲ..
ಆಕಸ್ಮಿಕವಾಗಿ ಸಿಕ್ಕ ಅಪ್ಪುಗೆಗೆ ಮನು ಬೆಚ್ಚಿ ಬಿದ್ದ....
ಸರಿ ತಪ್ಪುಗಳನ್ನು ಸೃಷ್ಟಿಸಿದವರಾರು..ಯಾವುದು ಸರಿ ಯಾವದು ತಪ್ಪು .. ಅತ್ಮವಂಚನೆ ಮಾಡಿಕೊಂಡು ಎಲ್ಲರ ಮೆಚ್ಚುಗೆಗಾಗಿ ಬದುಕುವುದು ಎಷ್ಟು ಸರಿ... ಆಕ್ಚವಲೀ ಅದೇ ಸರಿ.....
ನಾವು ಸಮಾಜಕ್ಕಾಗಿ ಬದುಕಬೇಕು.ಅತ್ಮವಂಚನೆಯಾದರೂ ಸರಿಯೇ ಮಾಡಿದ ತಪ್ಪನ್ನು ತಿದ್ದಿ ಬದುಕಬೇಕು.
ಮನು ರಿಯಾಲಿ ಸಾರಿ....ನಿನಗೆ ನನ್ನನ್ನ ಸಾಯಿಸಿಬಿಡುವಷ್ಟು ಕೋಪ ಇದೆಯಲ್ವಾ...
ಜೀವನ ನಾವಂದುಕೊಂಡಷ್ಟು ಸುಲಭವಲ್ಲ..ಅಂದು ನನ್ನ ಪರಿಸ್ಥಿತಿಯಲ್ಲಿ ನೀನಿದ್ದರೂ ಇದನ್ನೆ ಮಾಡುತ್ತಿದ್ದೆ...
ಯಾರು ಅರಿಯದ ಯಾರಲ್ಲೂ ಹೇಳಿಕೊಳ್ಳಲಾಗದ ಒಂದು ನಿಗೂಢ ಸತ್ಯ ಇಂದಿಗೂ ನನ್ನ ಜೀವ ಹಿಂಡುತಿದೆ..
ನಿನಂದುಕೊಂಡಂತೆ ನಾನು ನಿನಗೊಸ್ಕರ ನಿನ್ನ ಪ್ರೀತಿಗೊಸ್ಕರ ಒಂದುವರೆ ವರ್ಷ ಕಾದಿಲ್ಲಾ...ಒಂದು ವೇಳೆ ಕಾದಿದ್ದರೇ ಇದೆ ಸಮಾಜ ನನ್ನ ಚೀ... ತೂ ..ಅಂತ ಉಗಿಯುತ್ತಿತ್ತು..ಕಾರಣ ಸ್ಟಿಪನ್ ಗೆ ತಂದೆ ನೀನು...
ಈಗ ಹೇಳು ಸಮಾಜದ ಬಾಯಿಮುಚ್ಚಿ ನನಗೆ ಜೀವನ ಕೊಟ್ಟ ಜಾನ್ ಗೆ ಮೋಸ ಮಾಡಿ ನಿನ್ನ ಜೊತೆ ಬರಬೇಕಿತ್ತೆ?
ಅಥವಾ ಸತ್ಯ ಹೇಳಿದ್ದಿದ್ದರೆ ಆಗಿನ ಪರಿಸ್ಥಿತಿಯಲ್ಲಿ ನೀನು ಏನು ಮಾಡುತ್ತಿದ್ದೆ..?
ಇಂದಿಗೂ ನಿನ್ನ ಪ್ರೀತಿಸುವೆ...ಹಾಗಂತ ನಿನ್ನನ್ನು ಪಡೆಯಬೇಕೆಂಬ ಸ್ವಾರ್ಥ ನನ್ನಲಿಲ್ಲ..ತ್ಯಾಗ ಎನ್ನುವುದು ಈ ಪ್ರೀತಿಯ ಇನ್ನೊಂದು ಮುಖ.
ನಾವಂದು ಕೊಂಡಂತೆ ಜಗತ್ತನ್ನು ನಿಯಂತ್ರಿಸಲು ಸಾಧ್ಯವಿಲ್ಲ. ನಾವು ಒಬ್ಬರನ್ನು ಪ್ರೀತಿಸಿದರೆ ...ಅವರ ಪ್ರೀತಿ ಇನ್ನೊಬ್ಬರ ಮೇಲಿರುತ್ತೆ..ಹೀಗೆ ಯಾರೋ ಯಾರನ್ನೊ ಯಾವದೋ ಕಾರಣಕ್ಕೊ ಇಷ್ಟಪಡುತ್ತಾರೆ.
ವಿಪರ್ಯಾಸವೆಂದರೆ ನಾವಿಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸಿಯೂ ಹೀಗಿದ್ದಿವಿ ನೋಡು.
ಅವಳ ಮಾತಿನ ಮುಂದೆ ಮನುವಿಗಿದ್ದ ಪ್ರಶ್ನಾವಳಿಗಳು ಕುಸಿದು ಬಿದ್ದವು. ಏನು ಮಾತನಾಡಬೇಕು ಅನ್ನುವುದೆ ಅವನಿಗೆ ತೋಚಲಿಲ್ಲ..
ನನ್ನ ಜೀವನದಲ್ಲಿ ಅಂತದೇನು ವ್ಯತ್ಯಾಸವಿಲ್ಲ..ಕಳೆದು ಕೊಳ್ಳಲು ಕೊಂಡುಕೊಂಡಿದ್ದೇನು ಇಲ್ಲ.
ನಿನ್ನ ಜೀವನ ಚೆನ್ನಾಗಿದೆ, ಇದು ಹೀಗೆ ಇರಲಿ..ನಾನು ಇಲ್ಲೆ ಹೆಚ್ಚು ಹೊತ್ತಿದ್ದರೆ,ಸರಿಯಲ್ಲ...
ಅವಳ ಮರು ಮಾತಿಗೆ ಕಾಯದೆ ಬಿರಬಿರನೆ ಹೊರನೆಡೆದ.
ಸ್ಟಿಪನ್ ತುಂಟ ನಗು ಅಂಗಳದಲ್ಲಿ ಕೊಂಚ ಹೊತ್ತು ಅವನ ನಿಲ್ಲಿಸಿತ್ತು.
ಅದಾವಗಲೇ ಸ್ಕೂಲ್ ಮುಗಿಸಿ ಬಂದ ಸ್ಟಿಪನ್ ಅಂಕಲ್ ಎನ್ನ ತೊಡಗಿದರಿಂದ ಮನು ಅಲ್ಲೆ ನಿಂತಿದ್ದ.
ಮಗುವಿನ ಮುಖ ದಿಟ್ಟಿಸಲಾಗದೆ...ಕೈ ಬೀಸಿ ಟಾಟಾ ಮಾಡುತ್ತ ಹೊರ ನೆಡೆದ.
ಹೌದು ಎಲ್ಲಾ ಪ್ರಶ್ನೆಗಳಿಗು ಉತ್ತರ ಸಿಕ್ಕಿದ್ದರೂ ನನ್ನ ಬದುಕು ಪ್ರಶ್ನೆಯಾಗಿಯೇ ಉಳಿದಿದೆ. ನಾನೆ ನನ್ನ ಬಗ್ಗೆ ಯೋಚಿಸದ ಮೇಲೆ ಇನ್ಯಾರು ಚಿಂತಿಸುವರು.
***
ಇಷ್ಟು ದಿನವಿಲ್ಲದ ಯೋಚನೆ ಈಗ ಸಿಲ್ವಿಯ ಮನಸ್ಸು ಆವರಿಸಿಕೊಂಡಿತ್ತು
ಹೌದು ಅವನನ್ನು ಮದುವೆಗೆ ಒಪ್ಪಿಸಲು ಸಾಧ್ಯವೇ?
ಸಾಧ್ಯವಾಗಿರುತ್ತಿದ್ದರೆ...
ನನ್ನಿಂದ ಮನುವಿಗೆ ಅನ್ಯಾಯ ಆಗಿರಬಹುದು...ನಾನೆ ಏನಾದರೂ ಮಾಡಿ ಅವನ ಜೀವನ ಸರಿಪಡಿಸಬೇಕು. ಅವನು ಒಂಟಿತನದಿಂದಲೇ ಅದೆಷ್ಟು ನೋವನ್ನು ಅನುಭವಿಸುತ್ತಿದ್ದಾನೆ.
ಈ ಕೆಲಸವನ್ನು ನಾನು ಹೇಗೆ ಮಾಡಲಿ .. ಅವನನ್ನು ಹೇಗೆ ಮತ್ತೆ ಸಂಪರ್ಕಿಸಲಿ...
ಅದೇನು ಕಷ್ಟದ ಕೆಲಸವಲ್ಲ..ಯಾರದರೂ ಕಾಲೇಜಿ ಗೆಳರಯರನ್ನು ಸಂಪರ್ಕಿಸಿದ್ದೆ ಆದಲ್ಲಿ ಅವನ ಪೋನ್ ನಂಬರ್ ನ್ನು ಪಡೆಯಬಹುದಾಗಿತ್ತು..
ಹಳೆಯ ಡೈರಿಯಲ್ಲಿ ಸುಮಾರು ನಂಬರಗಳಿದ್ದವು,ಆದರೆ ಯಾವುದರ ಮುಂದು ಖುದ್ದಾಗಿ ಹೆಸರು ನಮೂದಿಸಿಲ್ಲ..
ಅದರಲ್ಲಿ ಸುಮಾರು ಮಂದಿ ೧೦೦ ಮೆಸೆಜ್ಗಳಿಗಾಗಿ ಸಿಮ್ ತಗೊಂಡವರು.ವ್ಯಾಲಿಡಿಟಿ ಮುಗಿತ್ತಿದ್ದಂತೆ ಎಸೆದವರೆ ಜಾಸ್ತಿ...
ಹಾ ಹಾ ರಿಂಗಾಗುತ್ತಿದೆ ..ಆದರೆ ಯಾರು ರಿಸಿವ್ ಮಾಡಿರಲಿಲ್ಲ...ಎರಡು ಮೂರು ಪ್ರಯತ್ನಗಳ ನಂತರ ಅಡುಗೆ ಕೆಲಸಕ್ಕೆ ಒಳನಡೆದಳು.
ಯಾವುದೋ ಅನೌನ ಕರೆ ಬಂದಿರುವುದು ನೋಡಿ ಸಿಲ್ವಿ ರಿ ಡಯಲ್ ಮಾಡಿದರೆ..ಅತ್ತ ಕಡೆಯಿಂದ
ಹು ಇಸ್ ದಿಸ್..?
ಹಾಯ್ ನಾನು ಸಿಲ್ವಿ ನೀವು..
ಯಾವ ಸಿಲ್ವಿ..?
ಅವಳು ಉತ್ತರಿಸುವ ಮೊದಲೆ..
ಒವ್ ನೀನಾ... ನಾನು ಲಾವಣ್ಯ ಕಣೆ...ಹೇಗಿದ್ದಿ...
ಇವಗಾ ಅದೇನು ಇಷ್ಟು ವರ್ಷದ ನಂತರ ನಮ್ಮ ನೆನಪು..
ಪರಸ್ಪರ ಕುಶಲೋಪಚಾರ ಮಗಿಸಿ ಸಿಲ್ವಿ ತನಗೆ ಬೇಕಾದ ಮಾಹಿತಿ ಕಲೆ ಹಾಕಿದಳು.
ಈ ನಡುವೆ ಹೆಚ್ಚು ಚರ್ಚೆ ಯಾಗಿದ್ದು ಮಂದಿರಾ ಬಗ್ಗೆ..
ಯಾಕೋ ಲಾವಣ್ಯಳ ಮಾತು ನಂಬಬೇಕೊ ಬೇಡವೊ ಒಂದು ಅರ್ಥವಾಗಲಿಲ್ಲ.
ಕಾಲೇಜಿನಲ್ಲಿರುವಾಗಲೇ ಮನು ಮತ್ತು ಮಂದಿರಾ ಪ್ರೀತಿಸಿರಲು ಸಾಧ್ಯವೇ?
ಅವರಿಬ್ಬರೂ ಅವಗಾವಗ ನೈಟೌಟ ಹೊಗ್ತಿರ್ತರಂತೆ....
ಚೇ ಈ ಲಾವಣ್ಯಳ ಮಾತು ಹೇಗೆ ನಂಬಲಿ..
ನಾನು ಸಹ ಅದೆ ಕಾಲೇಜಲ್ವಾ ...
ಅಬ್ಬಾ ಈ ಹುಡ್ಗಿರೆಲ್ಲಾ ಹೀಗೆ ಎಷ್ಟೊಂದ ಕಥೆ ಕಟ್ತರಪ್ಪ..
ಅದೇನೆ ಇರಲಿ..ಒಂದ್ಸಲ ಯಾಕೆ ಮನು ಹಾಗೂ ಮಂದಿರಾ ಜೊತೆ ಮಾತಡಬಾರ್ದು.
ಸಿಲ್ವಿ ಸುಮ್ಮನೆ ಮಂದಿರಾ ಜೊತೆ ಮಾತಾಡಿದಳು,
ಮನುವಿಗೆ ಇನ್ನು ಮದುವೆಯಾಗಿಲ್ಲ ಎಂದಾಗ ಅವಳು ಮನುವನ್ನು ಇಷ್ಟ ಪಟ್ಟಿದ್ದನ್ನು
ಅವನಿಗೆ ಪ್ರಪೋಸ್ ಮಾಡಿದ್ದನ್ನು
ಅವನು ಯಾರನ್ನೊ ಇಷ್ಟ ಪಟ್ಟಿದ್ದನ್ನು..ಎಳೆ ಎಳೆಯಾಗಿ ಬಿಚ್ಚಿಟ್ಟಳು.
ಸಿಲ್ವಿಗೆ ಈಗಾಗಲೇ ಎಲ್ಲಾ ಅರ್ಥವಾಗಿದ್ದು, ತಾನು ಯಾಕೊ ಸರಿಯಾದ ದಾರಿಯಲ್ಲಿ ಹೊಗ್ತಿರವುದು ಅರಿವಾಯ್ತು.
ಅದರೆ ಮನುವನ್ನು ಒಪ್ಪಿಸುವುದು ಅದೇನು ಸುಲಭದ ಮಾತಾಗಿರಲಿಲ್ಲ.
ಅವಳಿಗೆ ತೋಚಿದ್ದು ಒಂದೇ ಮಾರ್ಗ..ಇದನ್ನು ಬಿಟ್ಟರೆ ನನಗೇನು ತೋಚಲ್ಲ. ಸಾರಿ ಮನು..
ಮನದಲ್ಲಿ ಮುಂದಿನ ಯೋಚನೆ ರೆಡಿಯಾಗಿತ್ತು.ಎಲ್ಲಾ ಅವಳಂದುಕೊಂಡಂತೆ ನಡೆದರೆ ಮುಂದಿನ ತಿಂಗಳು ಮನು ಮಂದಿರನಾ ಮದುವೆ.
ಇದ್ದಕಿದ್ದಂತೆ ಅವಳ ಅಲೋಚನೆಗಳನ್ನೆಲ್ಲಾ ಹಿಂದಿಕ್ಕಿದ್ದು ಆ ವಾಟ್ಸಪ್ ಮೆಸೆಜ್. ಓದಿದವಳ ಮೊಗದಲಿ ಗೆಲುವಿನ ಮಿಂಚೊಂದು ಮೂಡಿ ಮರೆಯಾಯಿತು.
ಹಾಯ್ ಸಿಲ್ವಿ ಮುಂದಿನ ತಿಂಗಳು ನನ್ನ ಮದುವೆ ತಪ್ಪದೆ ಬರಬೇಕು.ಮೊದಲ ಇನ್ವಿಟೇಷನ್ ನಿನಗಾಗಿ..
ಚಿ | ಮನೋಹರ
ಚಿ |ಸೌ | ಮೈತ್ರಿ
ಬೇಡ ಬೇಡವೆಂದರೂ ಕಾಡಿ ಬೇಡಿ ಪ್ರೀತಿಸಿಯೇ ಬಿಟ್ಟಳು ಮೈತ್ರಿ
ಹೇಗೋ ಅಂತು ಮನುವಿಗೆ ಮದುವೆಯಾದರೆ ಅವಳಿಗೆ ಸಾಕಿತ್ತು.ತಾನಾಗಿ ರಿಸ್ಕ್ ತಕೊಂಡು ಮಾಡಬೇಕಾದ ಕೆಲಸ ಯಾವುದೇ ರಿಸ್ಕ್ ಇಲ್ಲದೆ ನೆರವೇರುತಿರುವುದು ಖುಷಿಕೊಟ್ಟ ವಿಚಾರ.
ಮಂದಿರಾ ಮತ್ತೊಮ್ಮೆ ಮನುವಿಗೆ ಪ್ರಪೋಸ್ ಮಾಡಿದ್ದಳು.ಅದು ಆರು ವರ್ಷದ ನಂತರ..
ಸಿಲ್ವಿ ಹೇಳಿದ ಮೇಲೆನೆ ಅವಳಿಗೆ ಗೊತ್ತಾಗಿದ್ದು ಮನುವಿಗಿನ್ನು ಮದುವೆಯಾಗಿಲ್ಲ ಅಂತ.
ಮನುವಿಗೂ ಅಶ್ಚರ್ಯವಾಗಿತ್ತು ಮಂದಿರಾ ಕಾಲ್ ಮಾಡಿದ್ದನ್ನು ನೋಡಿ.ಇದೆಲ್ಲ ಸಿಲ್ವಿಯ ಬೇಟಿಯ ಪರಿಣಾಮವೆಂಬುವುದು ಸಾಬಿತಾಗಿತ್ತು.
ಮನು ತನ್ನನ್ನೆ ತಾನು ಪ್ರಶ್ನಿಸಿಕೊಂಡಿದ್ದ.ಸಿಲ್ವಿಯನ್ನು ಬಿಟ್ಟು ಬೇರೆ ಯಾರನ್ನು ಮದುವೆಯಾಗುವುದು ಅವನಿಗಾಗದ ಮಾತು.
ತನ್ನ ಮನಸ್ಸಿಗೆ ಮೋಸ ಮಾಡಿಕೊಂಡು ಪ್ರತಿನಿತ್ಯ ನೋವು ಅನುಭವಿಸುವುದಕ್ಕಿಂತ ಹೀಗೆ ಇದ್ದು ಬಿಡುವುದು ಎಷ್ಟೊ ವಾಸಿ.
ನಾವು ಅದೆಷ್ಟೋ ಯೋಚಿಸಿದರೂ ಕೆಲವೊಂದು ವಿಷಯಗಳಿಗೆ, ಭಾವನೆಗಳಿಗೆ ಸುಖಾಂತ್ಯ ನೀಡಲು ಸಾಧ್ಯವಿಲ್ಲ. ತಾತ್ಕಲಿಕವಾಗಿ ಶಮನ ಮಾಡಿದ ಸಮಸ್ಯೆಗಳು ಮತ್ತೆ ಕವಲೊಡೆದು ಆಗಾಗ ನಮ್ಮನ್ನು ಕಾಡುವುದೇ ಹೆಚ್ಚು.
ಹೀಗಿದ್ದರೂ ನಮ್ಮೆಲ್ಲ ಸಮಸ್ಯೆಗಳಿಗೆ ನಮ್ಮದೆ ಆದ ಪರಿಹಾರ ಮಾರ್ಗವಿರುವುದು ಖಂಡಿತ.ಇಲ್ಲಿ ನಾವು ಮನೋ ವೈಫಲ್ಯತೆಗೆ ಒಳಗಾಗಬಾರದಷ್ಟೆ.
ಕಟುವಾಗಿದ್ದರೂ ತೆಗೆದುಕೊಂಡ ನಿರ್ಧಾರಕ್ಕನುಗುಣವಾಗಿ ಬದುಕುವುದು ಲೇಸು. ನೋವನ್ನು ಎಲ್ಲರಿಗೂ ಹಂಚುವುದಕ್ಕಿಂತ ನಮ್ಮೊಳಗೆ ಶಮನ ಮಾಡುವುದು ಒಳ್ಳೆಯದು.
ಒಂದರ್ಥದಲ್ಲಿ ಮನು ಹಾಗೆ ಮಾಡಿದ್ದ..ಮಂದಿರಾನ ಮಾತಿಗೆ "ಸಾರಿ ...ಮಂದಿರಾ ಬೇಜರಾಗಬೇಡ ನಾನು ಮೊದಲೆ ಹೇಳಿದಿನಲ್ಲ .ಪ್ರೀತಿಸುತ್ತಿರುವ ವಿಷಯ...ಅವಳೇ ಮೈತ್ರಿ..ಮುಂದಿನ ತಿಂಗಳಲ್ಲಿ ಮದುವೆ ಕಾಣೆ...ಇಲ್ಲಿ ತನಕ ಅವಳ ಸ್ಟಡೀಸ್ ಗಾಗಿ ಕಾದಿದ್ದೆ..ಲಾಷ್ಟ ಮಂತ್ ಮಾತುಕತೆ ಮುಗಿತು, ಸಿಂಪಲ್ಲಾಗಿ ಊರಲ್ಲಿ..."
ಅವಳು ಸಪೋರ್ಟಿವ್ ಅಗಿ ಒವ್ ಕಂಗ್ರಾಜುಲೇಷನ್ ಎಂದಿದ್ದಳು.
ಮೊದಲೆಲ್ಲ ಈ ಪ್ರಪಂಚ ಸ್ವಾರ್ಥದಲ್ಲಿ ಮುಳುಗಿ ಹೋಗಿದೆ ಎನ್ನುತ್ತಿದ್ದ ಮನುವಿಗೆ ಈಗೀಗ ಯೋಗಿಗಳು, ತ್ಯಾಗಿಗಳು ಕಾಣಿಸತೊಡಗಿದರು.
ಅದರಲ್ಲೂ ತನ್ನ ಜೀವನದ ಬಗ್ಗೆ ಮುತುವರ್ಜಿವಹಿಸಿದ ಸಿಲ್ವಿ ಮಹಾ ತ್ಯಾಗಿಯಂತೆ ಕಂಡಳು.
ಹೌದು ಅವಳ ಖುಷಿಗಾದರೂ ನಾನು ಮದುವೆಯಾಗಬೇಕು..ಕೇವಲ ಅವಳಿಗೋಸ್ಕರ ಮದುವೆಯಾಗಲು ಮನು ಸಿದ್ದನಾದ. ಅದ್ಯರೋ ಮೈತ್ರಿ
ನಗು ನಗುತ್ತಲೆ ಹೆಸರನ್ನು ಟೈಪಿಸಿದ್ದ ಮನುವಿನೊಳಗೆ ಅದೇನೊ ರೋಧನೆ.
ಮೊದಲ ಪ್ರೀತಿಯನ್ನು ಮರೆಯುವದು ಅಷ್ಟು ಸುಲಭವಲ್ಲ..ಎದೆಯಾಳಕೆ ಚುಚ್ಚಿದ ಮುಳ್ಳಿನಂತೆ ಅವಾಗವಗ ವೇದನೆಯಾಗುವುದು
ಸಿಲ್ವಿ ..ಮದುವೆ ಇನ್ವಿಟೇಷನ್ ಕಂಡು ಸತ್ಯವೆಂದೇ ನಂಬಿದ್ದಳು.ಮನದ ಮೂಲೆಯಲ್ಲಿ ಅನುರಾಗದ ಅಲೆಯೊಂದಿಗೆ ಮನುವಿನ ನೆನಪು ಚೂರುಪಾರು ಹಾದು ಹೋದರು.. ವಾಸ್ತವದ ಮೊಗದಲಿ ಅದು ನಗಣ್ಯ..
ಇಂದು ಎಲ್ಲವನ್ನು ಮರೆತು ನೆಮ್ಮದಿಯಾಗಿದ್ದಾಳೆ..
ಸಿಲ್ವಿ ಬೆಂಗಳೂರಿನಲ್ಲೇ ಇರುವುದರಿಂದ
ಅಕಸ್ಮಾತ್ತಾಗಿಯು ಬೇಟಿಯಾಗಬಾರದೆಂಬ ನಿರ್ಧಾರ ಹಾಗೂ ಜಾನ್ ಅವರ ಕಂಪನಿ ವೆಂಡರ್ ಆಗಿರುವುದರಿಂದ
ಮನೋಹರ ಕಂಪನಿ ಕೆಲಸಕ್ಕೆ ರಿಸೈನ್ ನೀಡಿ ಊರಿಗೆ ಹೊರಟಿರುವನು.
ಊರಲ್ಲಿರುವ ಹತ್ತು ಎಕರೆ ಜಾಗದಲಿ ಅಪ್ಪ ಅಮ್ಮ ಹಾಗೂ ತಮ್ಮ ಜೀವನ್ ಜೊತೆ ಕೃಷಿ ಕಾರ್ಯದಲ್ಲಿ ಕೈಜೋಡಿಸುವುದು ಮುಂದಿನ ಪ್ಲಾನ್ ಆಗಿತ್ತು.
ನಿನ್ನೆಯ ಪ್ರಯಣ ತಂದೊಡ್ಡಿದ ಆಯಾಸದಿಂದ ಬೆಳಿಗ್ಗೆ ಒಂಬತ್ತಕ್ಕೆ ಎದ್ದು ಹಲ್ಲುಜ್ಜುತ್ತಿದ್ದ ಮನು ಅವಳನ್ನೆ ನೋಡುತ್ತಿದ್ದ.. ಎಲ್ಲೊ ನೋಡಿದ ನೆನಪಾಗಿ ತಾಯಿಯ ಮುಖ ನೋಡಿದಾಗ...
ಅವಳಾ ...ಪಕ್ಕದ ಮನೆ ಕಮಲಳ ಮಗಳು ಮೈತ್ರಿ ಹಾಲು ಕೊಟ್ಟು ಹೋಗಲು ಬಂದಿದ್ದಳು ಎಂದರು.
ಮುಗಿಯಿತು.
ನಿಮ್ಮ ಅನಿಸಿಕೆಗಳಿಗೆ ಸ್ವಾಗತ...🙏
ಆರ್ಯಹಿ
ಹಾಯ್ ಮಮ್ಮಿ..
ನಿನ್ನ ಕಂಡಾಗಲೆಲ್ಲಾ ಅದೇನೊ ಖುಷಿ..ಇಂದಿಗೆ ೩೯ ದಿನಗಳು ಕಳೆದವು.ಇಷ್ಟು ದಿನ ಬೇಕಾಯಿತು ನಂಗೆ ನಿನ್ನ ಬಗ್ಗೆ ಯೋಚಿಸಲು.. ದಿನದ ೨೪ ಘಂಟೆನು ನನ್ನೆ ನೊಡ್ತಾ ಇರ್ತಿಯಲ್ಲ ಅದೇನ್ ಪ್ರೀತಿ ನನ್ನ ಮೇಲೆ ನಿಂಗೆ.
ಎನ್ ಮಾಡ್ಲಿ ನನ್ನ ಮನಸ್ಸಿನ ಭಾವನೆಯನ್ನ ಹೇಗೆ ವ್ಯಕ್ತಪಡಿಸಲಿ,ನಂಗಿರೋದ ಒಂದೇ ಮಾರ್ಗ ಅದೆ.. ಅಳೊದೊಂದೆ.
ನಾನ್ ನಿಂಗೆ ಮುದ್ದಾಗಿ ಕಾಣಿಸ್ತಾ ಇದ್ದಿನಿ ಅಲ್ವಾ ಅಮ್ಮ..
ನಂಗೆ ಸ್ನಾನ ಮಾಡ್ಸಿ,ಮೆಕಪ್ ಮಾಡೊದು ಅಜ್ಜಿನೆ ಅದ್ರುನೂ...ಚಂದ ನೋಡಿ ಖುಷಿ ಪಡೊದು ನೀನೆ ಅಂತ ಗೊತ್ತು ನಂಗೆ..
ಇವಾಗ ನಾನು ತುಂಬಾ ದೂರದ ತನಕ ನೋಡಬಹುದು.. ತಲೆನ ಮಾತ್ರ ಎತ್ತೊಕೆ ಆಗ್ತ ಇಲ್ಲ..ಅಂದಹಾಗೆ ನನ್ನ ದಿಂಬದ ಮೇಲೆ ಮಲಗಿಸಬೇಡ ಅಮ್ಮ.ಯಾಕೆಂದರೆ ನನ್ನ ಪೇಸ್ ಕ್ಯೂಟ್ ಅಗಬೇಕು ತಾನೆ?.
ನಾನು ನಿಂಗೆ ಮೊದಲಿನ ಹಾಗೆ ಜಾಸ್ತಿ ತೊಂದರೆ ಕೊಡಲ್ಲ.ಈಗೀಗ ಜಾಸ್ತಿ ನಿದ್ರೆ ಮಾಡ್ತಿನಿ.ಅಮ್ಮ ನಂಗೆ ಮಿರರ್ ನೋಡಬೇಕು ಅನಿಸ್ತಿದೆ.
ಅಬ್ಬಾ ಕಾಮನ ಬಿಲ್ಲಿನಂತೆ ಬರೆದಿರವೆ ನನ್ನ ಹುಬ್ಬನ್ನ..ಗಲ್ಲಕ್ಕೆ ಕಾಡಿಗೆಯ ದೃಷ್ಟಿ ಬೊಟ್ಟು.
ನಂಗೆ ಮಾತ್ರ ಯಾಕೆ ಪೌಡರ್ನ ಹಾಗೆ ಮುಖದಲ್ಲಿ ಬಿಟ್ಟಬಿಡ್ತಿಯಾ. ಆದ್ರೂ ನಾನ್ ತುಂಬ ಸ್ಮಾರ್ಟ್ ಅಲ್ವಾ?
ಮೊನ್ನೆ ಕಿವಿ ಚುಚ್ಚಿದ್ರಲ್ಲ ತುಂಬ ನೋವಾಗಿತ್ತು. ಅಜ್ಜ ಮಾಡಿದ ಔಷಧಿ ಅದೇ ಮೆಣಸ್ಸನ್ನ ಬೀಜ ತೆಗೆದು ತೆಂಗಿನ ಎಣ್ಣೆಯಲ್ಲಿ ಕುದಿಸಿ ಹಾಕಿದ್ದರಲ್ಲ,ಇವತ್ತು ನೋವೆ ಇಲ್ಲ.
ಅಮ್ಮ ಡ್ಯಾಡಿಗೆ ಒಂದು ಮೆಸೆಜ್ ಮಾಡು ನಾನ್ ನಾಳೆ ಅವರನ್ನ ನೋಡಬೇಕು.
ಅಮ್ಮ ನಿದ್ದೆ ಬರ್ತಿದೆ..ಒಂದ ಮುತ್ ಕೊಡು ಮಲಗ್ತಿನಿ.
ರಾತ್ರಿ ಪೂರ್ತಿ ನಿದ್ದೆ ಮಾಡಬೇಕು ಅನ್ಕೊಂಡೆ..ಹಸಿವು ಮದ್ಯ ಮದ್ಯ ಎಚ್ಚರಿಸ್ತಿತ್ತು.ನಿನ್ನನ್ನು ಕೂಡ ಎಚ್ಚರಿಸಿದ್ದೆ..ನೀ ನೀಡುವ ಅಮೃತ ..ಅದೊಂದೆ ನನ್ನ ಆಹಾರ ಇವಾಗ..
ಅಂದ ಹಾಗೆ ಡ್ಯಾಡಿ ಯಾವಗ ಬರ್ತಾರೆ? ನಾಳೆನಾ ..ಅವರಿಗೂ ರಜಾ ತಾನೆ. ಹುಂ ಬರ್ಲಿ..ನಂಗೇನ್ ಸರ್ಪ್ರೈಸ್ ಕೊಡ್ತಾರೆ ನೋಡ್ತಿನಿ..
ಇವತ್ ಯಾಕೊ ಮಲಗಿದಲ್ಲಿ ಮಲ್ಕೊಳ್ಳೋಕೆ ಇಷ್ಟ ಆಗ್ತಾ ಇಲ್ಲಾ.. ನನ್ನ ಎತ್ಕೊಂಡು ಮನೆಯಂಗಳ ತೋರ್ಸತಿಯಾ..
ಒಂದ್ ಕಂಡಿಷನ್ ಮಧ್ಯಾಹ್ನ ೧೧ ರಿಂದ ಸಂಜೆ ೩ ಗಂಟೆ ತನಕ ನಾನ್ ಬರಲ್ಲಾ..ಆವಗಿನ ಬಿಸಿಲನ್ ನಂಗೆ ಸಹಿಸೋಕೆ ಅಗಲ್ಲ.
ಅಮ್ಮ..ಹ್ಯಾಂಡಲ್ ವಿತ್ ಕೇರ್.ನಿಂಗೆ ನಾನು ಮೊದಲ ಮಗಳಲ್ವಾ ಹಾಗಾಗಿ..ಹುಸಾರು..
ನಾನು ನಿಂಗೆ ಮೊದಲಿನ ಹಾಗೆ ಜಾಸ್ತಿ ತೊಂದರೆ ಕೊಡಲ್ಲ.ಈಗೀಗ ಜಾಸ್ತಿ ನಿದ್ರೆ ಮಾಡ್ತಿನಿ.ಅಮ್ಮ ನಂಗೆ ಮಿರರ್ ನೋಡಬೇಕು ಅನಿಸ್ತಿದೆ.
ಅಬ್ಬಾ ಕಾಮನ ಬಿಲ್ಲಿನಂತೆ ಬರೆದಿರವೆ ನನ್ನ ಹುಬ್ಬನ್ನ..ಗಲ್ಲಕ್ಕೆ ಕಾಡಿಗೆಯ ದೃಷ್ಟಿ ಬೊಟ್ಟು.
ನಂಗೆ ಮಾತ್ರ ಯಾಕೆ ಪೌಡರ್ನ ಹಾಗೆ ಮುಖದಲ್ಲಿ ಬಿಟ್ಟಬಿಡ್ತಿಯಾ. ಆದ್ರೂ ನಾನ್ ತುಂಬ ಸ್ಮಾರ್ಟ್ ಅಲ್ವಾ?
ಮೊನ್ನೆ ಕಿವಿ ಚುಚ್ಚಿದ್ರಲ್ಲ ತುಂಬ ನೋವಾಗಿತ್ತು. ಅಜ್ಜ ಮಾಡಿದ ಔಷಧಿ ಅದೇ ಮೆಣಸ್ಸನ್ನ ಬೀಜ ತೆಗೆದು ತೆಂಗಿನ ಎಣ್ಣೆಯಲ್ಲಿ ಕುದಿಸಿ ಹಾಕಿದ್ದರಲ್ಲ,ಇವತ್ತು ನೋವೆ ಇಲ್ಲ.
ಅಮ್ಮ ಡ್ಯಾಡಿಗೆ ಒಂದು ಮೆಸೆಜ್ ಮಾಡು ನಾನ್ ನಾಳೆ ಅವರನ್ನ ನೋಡಬೇಕು.
ಅಮ್ಮ ನಿದ್ದೆ ಬರ್ತಿದೆ..ಒಂದ ಮುತ್ ಕೊಡು ಮಲಗ್ತಿನಿ.
ರಾತ್ರಿ ಪೂರ್ತಿ ನಿದ್ದೆ ಮಾಡಬೇಕು ಅನ್ಕೊಂಡೆ..ಹಸಿವು ಮದ್ಯ ಮದ್ಯ ಎಚ್ಚರಿಸ್ತಿತ್ತು.ನಿನ್ನನ್ನು ಕೂಡ ಎಚ್ಚರಿಸಿದ್ದೆ..ನೀ ನೀಡುವ ಅಮೃತ ..ಅದೊಂದೆ ನನ್ನ ಆಹಾರ ಇವಾಗ..
ಅಂದ ಹಾಗೆ ಡ್ಯಾಡಿ ಯಾವಗ ಬರ್ತಾರೆ? ನಾಳೆನಾ ..ಅವರಿಗೂ ರಜಾ ತಾನೆ. ಹುಂ ಬರ್ಲಿ..ನಂಗೇನ್ ಸರ್ಪ್ರೈಸ್ ಕೊಡ್ತಾರೆ ನೋಡ್ತಿನಿ..
ಇವತ್ ಯಾಕೊ ಮಲಗಿದಲ್ಲಿ ಮಲ್ಕೊಳ್ಳೋಕೆ ಇಷ್ಟ ಆಗ್ತಾ ಇಲ್ಲಾ.. ನನ್ನ ಎತ್ಕೊಂಡು ಮನೆಯಂಗಳ ತೋರ್ಸತಿಯಾ..
ಒಂದ್ ಕಂಡಿಷನ್ ಮಧ್ಯಾಹ್ನ ೧೧ ರಿಂದ ಸಂಜೆ ೩ ಗಂಟೆ ತನಕ ನಾನ್ ಬರಲ್ಲಾ..ಆವಗಿನ ಬಿಸಿಲನ್ ನಂಗೆ ಸಹಿಸೋಕೆ ಅಗಲ್ಲ.
ಅಮ್ಮ..ಹ್ಯಾಂಡಲ್ ವಿತ್ ಕೇರ್.ನಿಂಗೆ ನಾನು ಮೊದಲ ಮಗಳಲ್ವಾ ಹಾಗಾಗಿ..ಹುಸಾರು..
ಅಮ್ಮಾ.... ನಾನೆಲ್ಲಿದ್ದಿನಿ ..ಅಬ್ಬಾ ತಲೆ ತಿರಗ್ತಿದೆ..ಭೂಮಿ ಅಲುಗಾಡ್ತಿದೆ...ಅಮ್ಮಾ...
ಭಯದಲ್ಲಿದ್ದ ನನ್ನ ಪಪ್ಪ ಎತ್ಕೊಂಡಾಗಲೇ ಗೊತ್ತಾಗಿದ್ದು. ಪಪ್ಪ ನನ್ನ ನೋಡಲು ರಾತ್ರಿನೆ ಬಂದಿದ್ರು.
ಅವರ ಕುರಚಲು ಗಡ್ಡ ನನ್ನ ಹೊಟ್ಟೆಗೆ ತಗುಲಿ ಕಚಕುಳಿಯಿಡುತ್ತಿತ್ತು.
ಒಂದಷ್ಟು ಹೊತ್ತು ಮುದ್ದಾಡಿ ನನ್ನ ಅಳು ತಣ್ಣಗಾಗುತ್ತಿದ್ದಂತೆ ಕೆಳಗೆ ಮಲಗಿಸಿದರು.
ಅಬ್ಬಾ ಮತ್ತಾದೆ ಕಂಪನ..ಗಾಳಿಯಲ್ಲಿ ತೇಲಿದಂತೆ..
ಈ ಬಾರಿ ಡ್ಯಾಡಿ ಅವರ ಮುಖವನ್ನು ನನ್ನ ಹತ್ತಿರ ತಂದು ವೊಲ್ ..ವೋಲ್... ಓ...ಎನ್ನುತ್ತಿದ್ದರು..
ಆ ದೈರ್ಯ ತುಂಬುವ ಕೈ ನನ್ನ ಕೆನ್ನೆ ಸವರಿದಾಗ ಭಯ ತನ್ನಿಂದ ತಾನೆ ಮಾಯವಾಗಿತ್ತು.
ಅವರ ಇನ್ನೊಂದು ಕೈ ತೊಟ್ಟಿಲ ತೂಗುತ್ತಿತ್ತು.
ಮೊದಲ ಬಾರಿ ತೊಟ್ಟಿಲೇರಿದಾಗ ಹಾಗನಿಸಿತು. ಪಪ್ಪಾ ನಂಗೆ ಸರ್ ಪ್ರೈಸ್ ಗಿಪ್ಟ್ ನೀಡಿದ್ದರು. ನೆಮ್ಮದಿಯ ನಿದ್ದೆ ಆವರಿಸಿತು.
ರಾತ್ರಿ ಎರಡೆರಡು ಬಾರಿ ಬೇಕಂತಲೆ ಅತ್ತೆ..ಆಮೇಲ್ ತಾನೆ ಅಮ್ಮ ಪಕ್ಕದಲ್ಲಿ ಮಲಗಿಸಿಕೊಂಡಿದ್ದು. ನೈಸ್ ಐಡಿಯಾ..ನಾ?
ಇವತ್ತು ನಂಗೆ ಅಜ್ಜಿ ತಂದ ಡ್ರೆಸ್ ಹಾಕು. ನಂಗಿಷ್ಟ ಅದು.ತಂಬಾ ಮೃದು,ಹತ್ತಿ ಬಟ್ಟೆ, ಎರಡೇ ಲಾಡಿ..ಸೋ ಸಿಂಪಲ್.
ಇಷ್ಟ ದಿನ ನಾನು ಚಿಕ್ಕ ಚಿಕ್ಕ ಸ್ಮೈಲ್ ಮಾಡತ್ತಿದ್ದೆ.ಇವತ್ ನೋಡು ಎಷ್ಟ್ ಜೋರಾಗಿ ನಗತ್ ಇದ್ದಿನಿ..
ಹೇ ಹೇ...ಇದು ನನ್ನ ಮೊದಲ ಟೂತ್ ಲೆಸ್ ಸ್ಮೈಲ್.
ಅಮ್ಮ ನೀನ್ ನನ್ನ ಬಟ್ಟೆಯಲ್ಲಿ ಸುತ್ತಿ ಮಲಗಿಸ್ತಿಯಲ್ಲಾ.
ನಿಜವಾಗಲೂ ನಂಗೆ ಅಳು ಬರುತ್ತೆ..ಪ್ಲೀಸ್ ಕೈಗಳನ್ನಾದ್ರು ಹೊರಗಿಟ್ಟು ಸುತ್ತು.
ಅಮ್ಮ ಈ ವಾರ ತುಂಬ ಎಗ್ಸೈಟಿಂಗ್ ನಾನು ಬಹಳ ಕಲಿಯೊದಿದೆ..ನನ್ನ ಜೊತೆ ನೀನು ಮಗುವಾಗ್ತಿಯಲ್ವಾ?..
ಎನ್ ಗೊತ್ತಾ ಇವತ್ತು ನಾನು ಎರಡ ಸಲ ಉಲ್ಟಾ ಹಾಕಲು ಟ್ರೈ ಮಾಡಿದೆ..ಸೋ ಫೈಲುರ್..
ಅಮ್ಮ ಹಾಡು ಗುನುಗುತ್ತ ನನ್ನ ಡ್ರೆಸ್ ಅಪ್ ಮಾಡುತ್ತಿದ್ಲು.
ಅಪ್ಪ ಅಲ್ರೆಡಿ ರೆಡಿಯಾಗಿದ್ರು.
ನಂಗೆ ಹೊಸ ಡ್ರೆಸ್,ಕೈಬಳೆ,ಕಾಲ್ಗೆಜ್ಜೆ,ಕಾಲುಚೀಲ ...ಹ್ಯಾಟು.. ಸೇಮ್ ಬೇಬಿ ಶ್ಯಾಮಲಿ ತರಾನೆ ರೆಡಿ ಮಾಡಿದ್ರು. ಕೊನೆಯಲ್ಲಿ ಒಂದು ದೃಷ್ಟಿ ಬೊಟ್ಟು..
ಹಾಂ ಇಂದು ಮೊದಲ ಫ್ಯಾಮಿಲಿ ಟ್ರಿಪ್. ಅಪ್ಪನ ಕಾರ್ ನಲ್ಲಿ ಅಮ್ಮನ ಜೊತೆ ಹಿಂದಿನ ಸೀಟ್ನಲ್ಲಿ ಕುತ್ಕೊಂಡು..ಅಲ್ಲಾ..ಅಲ್ಲಾ ಮಲ್ಕೊಂಡು ಹೊಗ್ತಾ ಇದ್ರೆ..ವಾವ್ ಸೂಪರ್...
ಇದೇನು ಆಸ್ಪತ್ರೆ.. ಫ್ಯಾಮಿಲಿ ಟ್ರಿಪ್ ಅಲ್ಲಾ..ಫ್ಯಾಮಿಲಿ ಡಾಕ್ಟರ್ ಹತ್ರ ಬಂದಿದ್ದರು.
ಡಾಕ್ಟರ್ ಅಂಕಲ್ ನಂಗೆ DTPa-Hib-IPV-HepB, 13vPCV, and rotavirus ಇಂಜೆಕ್ಷನ್ ಕೊಟ್ಟರು.
ಒಂದ ಸಲ ನನ್ನ ಅಳುವಿನ ಚೀರಾಟಕ್ಕೆ ಆಸ್ಪತ್ರೆ ಫುಲ್ ಸೈಲೆಂಟ.
ಎರಡ ದಿನ ನನ್ನ ಹಾರಾಟ ಏನು ನಡಿಯಲಿಲ್ಲ.ಉಲ್ಟಾ ಹಾಕೋಕು ಟ್ರೈ ಮಾಡಲೆ ಇಲ್ಲ.
ಈಗ ನಾನು ಕೈಗಳನ್ನ ಜೋರಾಗಿ ಬಡಿತಿನಿ,ಕುತ್ತಿಗೆಯನ್ನ ಎತ್ತತೀನಿ..ನನ್ನ ಅಟದ ಗೊಂಬೆನ ಹಿಡಿಯೋಕೆ ಹೋಗ್ತಿನಿ..
ಅಜ್ಜಿ ತಾತನ ಪರಿಚಯ ಹಿಡಿತಿನಿ..ಅಮ್ಮ ಹಾಕೊ ಮೂಸಿಕ್ ನ ಆಲಿಸ್ತೀನಿ...ನಾನು ಡಾನ್ಸರ್ ಆಗಬೇಕು.
ಇನ್ನೂ ಎನೇನೊ ಆಸೆ...ಪಪ್ಪನ ನೋಡಿದಾಗ ಇಂಜಿನಿಯರ್ ಆಗಬೇಕು..ನಿನ್ನನ್ನ ನೋಡಿದಾಗ ಟೀಚರ್ ಆಗಬೇಕು..ಅಂಕಲ್ ನೋಡಿದಾಗ ಡಾಕ್ಟರ್ ಆಗಬೇಕು..
ಹಾಂ..ನಾನ್ ಎಲ್ಲಾ ಆಗಬೇಕು..ಎಲ್ಲರಿಗೂ.ಎಲ್ಲಾ ನಾನೆ ಆಗಬೇಕು.ಎಲ್ಲಾ ನನ್ನೆ ಮುದ್ದಿಸಬೇಕು.
ಡ್ಯಾಡಿ ಇವತ್ತೊಂದ ದಿನ ರಜೆ ಹಾಕಿ.ಪ್ಲೀಸ್...ಅನಬೇಕನಿಸಿದ್ರು ಸುಮ್ಮನಾದೆ.
ಮನೆಯಲ್ಲಿ ಏನೆ ಫಂಕ್ಷನ್ ಇದ್ರೂನು ಅವರು ಕೆಲಸಕ್ಕೆ ಹೊರಡುವಾಗ ಯಾರು ಅವರನ್ನ ತಡೆಯುತ್ತಿರಲಿಲ್ಲವಂತೆ, ಒಂದು ವೇಳೆ ತಡೆದರೂ ಕೇಳುತ್ತಿರಲಿಲ್ಲವಂತೆ..ಹಾಗೆ ಸುಮ್ಮನಾದೆ..
ಇವತ್ತು ನೋಡಿದ್ರೆ ಅದೆಲ್ಲಾ ಸುಳ್ಳು ಅನಿಸುತ್ತೆ..ನನ್ನ ಬಿಟ್ಟ ಹೋಗಲು ಮನಸ್ಸೆ ಇಲ್ಲ..ಅವರ ಕಣ್ಣುಗಳನ್ನ ನೋಡ್ತಿದ್ರೆ..ಪಪ್ಪ...ಪಾಪ ಅನಿಸುತ್ತಿತ್ತು.ಅವರ ಗಾಂಭಿರ್ಯ ಮರೆತಂತಿತ್ತು. ಒಂದು ಬಾರಿ ಅಮ್ಮನ ಬಿಟ್ಟು ಪಪ್ಪನ ಜೋತೆ ಹೋಗೋಣ ಎನಿಸಿತು.
ಐ ಮಿಸ್ ಯು ಪಪ್ಪಾ...
ಓ ಡ್ಯಾಡ...ಓ ಡ್ಯಾಡ
ನಿನ್ನ ಕಣ್ಣ ಕಂಬನಿಯ ಸುರಿಸ ಬೇಡ
ನನ್ನ ..ಅಮ್ಮನ ಎಂದೂ ಮರೆಯಬೇಡ..
ಓ ಡ್ಯಾಡ...ಓ ಡ್ಯಾಡ
ಟೆಕ್ನಾಲಜಿ ತುಂಬ ಮುಂದಿದೆಯಪ್ಪ..
ಹೋದ ತಕ್ಷಣ ಮರಿಯದೆ ಮಾಡು ವೀಡಿಯೊ ಕಾಲಪ್ಪ..
ಹ್ಯಾಪಿ ನಿವ್ ಇಯಾರ್....ಹಮ್ ಇವಾಗ ಯಾಕೆ ಹೇಳ್ತಿನಿ ಅಂತಾನಾ...ಬಿಜಿ ಕಣ್ರೀ ತುಂಬಾ ಬ್ಯುಸಿ..ನನ್ನ ಕೆಲಸ ಮಾಡೋಕೆ ನಂಗೆ ಟೈಮೆ ಇಲ್ಲ, ನನ್ನೆಲ್ಲಾ ಕೆಲಸವನ್ನು ಅಮ್ಮನೇ ಮಾಡುವುದು.
ಮೊನ್ನೆ ಡಿಸೆಂಬರ ೩೧.. ಆವಾಗಷ್ಟೆ ಮಲಗಿದ್ದೆ. ಅಮ್ಮತೊಟ್ಟಿಲನ್ನ ತೂಗಿ ತೂಗಿ ಕಷ್ಟಪಟ್ಟು ಮಲಗಿಸಿದ್ದಳು.
ಸುಮಾರು ರಾತ್ರಿ ೧೨ ಘಂಟೆ ಇರಬಹುದು.ಇದ್ದಕಿದ್ದಂತೆ ಗುಂಡಿನ ಸುರಿಮಳೆನೆ ಗೈದರು ನೆರಮನೆಯವರು. ನಾನು ಹೆದರಿ ಬೆಚ್ಚಿಬಿದ್ದು ಅಳತೊಡಗಿದೆ.ಎನ್ ಜನರಪ್ಪ ಹೊಸ ವರ್ಷ ಆಚರಿಸುವುದು ಹೀಗೆನಾ?.
ಈಗೀಗ ನಾನು ನಗುವುದ ನೋಡಿ ಅಮ್ಮ ತುಂಬ ಸಂತೋಷವಾಗಿದ್ದಾಳೆ.ಅವಳಿಗೆ ಈ ಕಲ್ಪನೆ ಹಿಂದೆ ಇದ್ದಿತೋ ಇಲ್ಲವೋ..
ಗೆಜ್ಜೆ ಸದ್ದು ಚೆನ್ನಾಗಿದೆ..ಕಾಲಿಂದ ಕಿಕ್ ಮಾಡಿ ಮಾಡಿ ಕೇಳಿಸಿಕೊಂಡೆ.
ಪದೇ ಪದೇ ಆಳುತ್ತಿದ್ದ ನಾನು ಈಗ ತುಂಬ ಹೊತ್ತು ಆಟವಾಡುವದ ಕಲಿತಿರುವೆ..ಇದರಿಂದ ಅಮ್ಮನಿಗೂ ಸ್ವಲ್ಪ ಬಿಡುವು.
ಈಗಂತೂ ನನಗೊಬ್ಬಳಿಗೆ ಮಲಗಿರಲು ಸಾಧ್ಯವೇ ಇಲ್ಲ..ಪಕ್ಕದಲ್ಲಿ ಯಾರಾದರೂ ಇಲ್ಲ ಅಂತ ತಿಳಿದರೆ ಅತ್ತಾದರೂ ಕರೆಸಿಕೊಳ್ಳುವೆ...
ಬೆಳ್ಳಂಬೆಳಗೆ ಎಣ್ಣೆಯ ಅಭ್ಯಂಜನ, ಅಜ್ಜಿ ಮಾಡಿಸುತ್ತಿದ್ದ ಯೋಗಾಸನ, ಬಿಸಿನೀರಿನ ಸ್ನಾನ ...ಅಬ್ಬಾ ಎಂತ ಹಿತ ನೀಡುವುದು.
ಅವಾಗಲೇ ಮಂಪರು ಮತ್ತೇರಿ ಬರುವುದು. ನಿದ್ದೆಯಿಂದ ಏಳುವುದೆ ತಡ ಹೊತ್ತು ಹೊತ್ತಿನ ಊಟ..ಹೆತ್ತಮ್ಮನ ಮುತ್ತು..ನಿತ್ಯ ದೊರೆಯುತಿರೆ.. . ನಾನೆ ಭಾಗ್ಯಶಾಲಿ..ಇದಕ್ಕೆ ತಾನೆ ಅತ್ತು ಕರೆಯುವುದು ಕಮ್ಮಿಮಾಡಿದ್ದು.
ಅಬ್ಬಾ ...ನನ್ನ ನಗು ಎಷ್ಟು ಪೊಪುಲರ್ ಆಗ್ತಿದೆ..ಎಲ್ಲರೂ ನೋಡಿ ಕಮೆಂಟ್ ಮಾಡಿದವರೇ..ನನ್ನ ಖುಷಿಯಲ್ಲಿ ಎಲ್ಲರೂ ಖುಷಿಪಡೋರು....
ಅಮ್ಮ ಥ್ಯಾಂಕ್ಸ ನನ್ನದು ಒಂದು ಟಿಕ್ ಟ್ಯಾಕ ಮಾಡಿ ಎಲ್ಲರಿಗೂ ಪರಿಚಯಿಸಿದ್ದಕ್ಕೆ..
ಅದೇನೋ ಗೊತ್ತಿಲ್ಲಾ ನಾನಂತು ಹ್ಯಾಪಿ..ಸದಾ ಮುಗುಳ್ ನಗು ಸೂಸೋದೆ ನನ್ನ ಹವ್ಯಾಸವಾಗಿ ಬಿಟ್ಟಿದೆ.
ಇದು ಎಲ್ಲರಿಗೂ ಇಷ್ಟವಂತೆ.
ಮೊನ್ನೆ ಅಮ್ಮ ಡ್ಯಾಡಿ ಹತ್ರ ಮಾತಾಡುವುದನ್ ನಾನು ಕದ್ದು ಕೇಳಿಸಿಕೊಂಡೆ..ನಿಮ್ಮ ಮಗಳು ನಿದ್ದೆಯಲ್ಲು ನಗ್ತ ಇರ್ತಾಳೆ...
ನಂಗೆ ನಿದ್ದೆ ಬಂದಾಗ ನನ್ನ ಕನಸಲ್ಲಿ ದೇವರು ಬರ್ತಾರೆ..ದೇವರು ನನ್ನ ಜೋತೆ ಆಟ ಆಡ್ತಾ ಅಂಗಾಲಿಗೆ ಕಿರುಬೆರಳಿಂದ ಕಚಕುಳಿ ಇಟ್ಟಾಗ ನಗು ಬರುತ್ತೆ.
ನಾನು ಇವಾಗ ತುಂಬ ಆಕ್ಟೀವ್ ಆಗಿದ್ದಿನಿ..ಎಲ್ಲರ ಧ್ವನಿಯನ್ನು ಗುರುತಿಸುವೆ..ಯಾವುದಾದರು ಮೂಲೆಯಿಂದ ಧ್ವನಿ ಬಂದರೂ ತಿರುಗಿ ನೋಡುವಷ್ಟು ಪರಿಣಿತಳು.
ಚಿಕ್ಕ ಆಟಿಕೆ ಕೊಟ್ಟರೆ ಗಟ್ಟಿಯಾಗಿ ಹಿಡಿಯುವ ಬಲನು ಬಂದಿದೆ...
ಯಾರು ಬಯ್ಯಬೇಡಿ ನಾನೊಂದು ಕೆಟ್ಟ ಹವ್ಯಾಸವನ್ನು ಬೆಳಸಿಕೊಂಡು ಬಿಟ್ಟಿದಿನಿ..ಇದು ನಂಗೆ ತುಂಬ ಹಿಂದಿನ ಅಭ್ಯಾಸ..
ಬೆರಳು ಚೀಪೊದು...
ಕಾಲಿ ಬೆರಳಲ್ಲಾ...ಒಮ್ಮೊಮ್ಮೆ ಇಡಿ ಕೈಯನ್ನೆ ..ಯಾಕೆ ಎರಡು ಕೈಗಳನ್ನು ಬಾಯೊಳಗೆ ಹಾಕಿದುಂಟು..
ಈ ಅಮ್ಮ ತುಂಬ ಜೋರು..ಎಲ್ಲರೂ ಕಾಲು ಚೀಲ ಹಾಕುವರು..ನನ್ನಮ್ಮ ನಂಗೆ ಕೈ ಚೀಲಗಳನ್ನು ಹಾಕಿ ಬೆರಳನ್ನು ಭದ್ರ ಮಾಡಿದ್ದಾರೆ..
ಅಮ್ಮ ಜೋರದ್ದಷ್ಟೆ ಪಾಪ..ನನ್ನ ವಿಭಿನ್ನ ಅಳುವಿಗೂ ಒಂದೊಂದು ಅರ್ಥ ಅರಿತವಳು..
ಹಸಿವಿನ ಅಳುವಿಗೆ ಹಾಲುಣಿಸುವಳು.ದುಃಖದ ಅಳುವಿಗೆ ಮುತ್ತಿಕ್ಕಿ ಮಾತಾಡಿಸುವಳು. ಸಾಂಗತ್ಯ ಬಯಸಿ ಅತ್ತಾಗ ಎತ್ತಿ ಎದೆಗಪ್ಪಿಕೊಳ್ಳುವಳು.ನಿದ್ದೆಯ ಮಂಪರು ಹತ್ತಿ ಅತ್ತಾಗ ತೊಟ್ಟಿಲ್ಲಿಟ್ಟು ಜೋಗುಳ ಹಾಡುವಳು.ಈ ಮಮತೆಯ ಮಹಾತಾಯಿ ಮಡಿಲಲ್ಲಿ ಮಗು ನಾನು,ಅವಳ ನಗು ನಾನು..
ಇತ್ತಿಚೆಗೆ ತುಂಬ ದಿನದಿಂದ ನಂಗೆ ಏನ್ ಹೇಳಬೇಕೊ ಅರ್ಥನೆ ಆಗ್ತಿಲ್ಲ. ಯಾಕೊ ತುಂಬ ಬೇಜಾರು..ನಾನು ಡಿಜಿಟಲ್ ಬೇಬಿ ಆಗ್ತಿದಿನಿ ಅನಿಸ್ತಿದೆ..
ಅದ್ಯಾಕೊ ಡ್ಯಾಡಿ ಮಮ್ಮಿ ನನ್ನ ಎಲ್ಲೊ ಬಚ್ಚಿಟ್ಟಿದ್ದಾರೆ.
ಈಗೀಗ ನನ್ನ ಪ್ರಪಂಚ ಎರಡೇ ರೂಮು..
ತಿಂಗಳಿಗಿಂತ ಹಿಂದೆ ಬೀಸುತ್ತಿದ್ದ ಗಾಳಿ ಇಲ್ಲಿ ಯಾಕಿಲ್ಲ...
ಗಾಳಿಗೆ ಆಡ್ತಿದ್ದ ಹಸಿರೆಲೆ ನೋಡೊಕಾಗ್ತಿಲ್ಲ..
ರಾಜ-ರಾಣಿನ ಬಿಟ್ಟು ಇಲ್ಲಿ ಬೇರೆ ಯಾರಿಲ್ಲ..
ಯಾರು ಮುಟ್ಟೊರಿಲ್ಲ..ಅಟ್ಟಕ್ಕೆ ಎತ್ತಿಕೊಂಡು ಹೋಗೊರಿಲ್ಲ..
ಇದೆಂತ ಊರು...ಲೆಕ್ಕಕ್ಕೆ ಕೋಟಿ ಜನರು..
ನೋಟಕ್ಕೆ ಒಬ್ಬರೂ ಸಿಕ್ಕರು..
ಸದ್ಯ ಈಗೀಗ ಅಜಸ್ಟ್ ಆಗ್ತಿದಿನಿ..ಮೂಟೆ ಕಟ್ಟಿಟ್ಟಿದ್ದ ಒಂದೊಂದೆ ಆಟಿಕೆಗಳನ್ನ ಬದಲಾಯಿಸ್ತಾ ಇರ್ತಾರೆ.
ಯಾಕಂದ್ರೆ ನಾನು ಸಹ ವೆರೈಟಿ ಕೇಳ್ತಿರ್ತಿನಿ.
ಮೊದಲು ಬೋರಲು ಹಾಕುವುದ ಕಲಿತೆ....ಮುಂದಕ್ಕೆ ತೆವಳುದನ್ನ ಸ್ಕಿಪ್ ಮಾಡಿ...ನೇರವಾಗಿ ವಜ್ರಾಸನದಲ್ಲಿ ಕುಳಿತುಕೊಳ್ಳಲು ಪ್ರಾರಂಭಿಸಿರುವೆ.
ಈ ಮಮ್ಮಿಯಂತು ಈಗಾಗಲೆ ಸಿಲೆಬಸ್ ಸ್ಟಾರ್ಟ ಮಾಡಿದ್ದಾರೆ..
ಜಾನಿ ಜಾನಿ ಯಸ್ ಪಪ್ಪಾ..
ಟ್ವಿಂಕಲ್ ಟ್ವಿಂಕಲ್.... ಅಬ್ಬಾಬ್ಬಾ ಏನೇನೋ....
ಆದ್ರೆ ನಂಗಿಷ್ಟವಾದ್ದು....ಚಬ್ಬಿ ಚೀಕ್ಸ...ಡಿಂಪಲ್ ಚಿನ್...
ಡ್ಯಾಡಿ ಕಿವಿನ ಹಿಡಿಯೊದು,ಕೂದಲೆಳೆಯುವುದು ನಂಗಿಷ್ಟ..ರಾತ್ರಿ ನಿದ್ದೆ ಬರೊವರೆಗೂ ಮುದ್ದು ಮಾಡಿ ಮಲಗಿಸ್ತಾರೆ..ಅಮ್ಮನ ಕಾಡಿ ಕಾಡಿ ನನಗಾಗಿ ಹಾಡ ಹೇಳಿಸ್ತಾರೆ..ಪಾಪಾ ಡ್ಯಾಡಿಗೆ ಹಾಡೊಕೆ ಬರಲ್ಲ...😂
ಹಾಡೊಕೆ ಬರದಿದ್ರೆ ಏನಂತೆ..ಬರಿತಾರೆ...ಮೊನ್ನೆ ಮೊನ್ನೆ ನನಗಾಗಿ ಬರೆದಿರುವುದು.
ದೇವರೆ ಇಲ್ಲದ ಬದುಕಿನಲಿ
ನೀನೆ ಜೊತೆಯಾದೆ.
ನಗುವು ಕಾಣದ ಹೃದಯದಲಿ
ಮಗುವು ನೀನಾದೆ.ನನ್ನ ನಗುವು ನೀನಾದೆ.
ಬಾಳೆ ಒಲವಿನ ಹೊಂದಿಕೆ
ಪ್ರೀತಿ ಅದರಲಿ ನಂಬಿಕೆ
ನನದೆ ಪ್ರೀತಿಯ ಪ್ರತಿಬಿಂಬ
ತಬ್ಬುತ ಮರೆತೆನು ಜಗವನ್ನೆ.
ಮುಗ್ದ ನಗುವಲ್ಲಿ....
ತೊದಲು ಮಾತನ್ನು
ಉಲಿಯುತ ನಲಿಯುತ ಹಾಗೆ ಬಾರೋ ಕಂದ.
ಆದ್ರೆ ಎನ್ ಮಾಡ್ಲಿ... ಅ.....ಆ...ಏ....ಬಿಟ್ಟು ಏನು ಬರಲ್ಲ..
ಡ್ಯಾಡಿ ಆಸೆಗೆ ಮಾತನಾಡಲು ಪ್ರಯತ್ನ ಪಡ್ತಿನಿ..
ಇನ್ನೂ ಪ್ರಯತ್ನ ಮಾಡ್ತಾನೆ ಇದಿನಿ...
ಮುಂದಿನ ವಾರ ನಾನು ನಡಿಬೇಕು..ಓಡಾಡಬೇಕು...ಹೊರಗಡೆ ಏನೆನಿದೆ ಅಂತ ನೋಡಬೇಕು..ನಿಮಗೆ ಗೊತ್ತಾ ಆಲ್ರೆಡಿ ಆರ್ಡರ್ ಮಾಡಿದ್ದಿನಿ...ಪಿಂಕ್ ಶೂ..👠👠
ಲೈಟ್ ಬ್ರೌನ್..ಗೌನ್....👗
ಫಾಸ್ಟ ಫಾಸ್ಟ ..ಪಾಸ್ಟ್.. ಇವಾಗಿನ್ ಜನರೇಷ್ ನ ಹಾಗೆ ಅಲ್ಲವಾ...ಹಾಗಾಗಿ ನಾನು ಸಹ ತುಂಬ ಪಾಸ್ಟ್..
ಪುಟ್ಟ ಪುಟ್ಟ ಕಾಲು ಹೆಜ್ಜೆ ಮಾತ್ರ ಚಿಕ್ಕದು, ವೇಗ ಎಕ್ಸಪ್ರೆಸ್..
ಎರಡ್ ನಿಮಿಷ ಬಿಟ್ರೆ ಮನೆ ಕಂಪೌಂಡ್ ಹೊರಗಡೆ ಇರ್ತಿನಿ. ನಂದು ಯಾವಾಗ್ಲು ಒನ್ ವೇ...
ರಿಟರ್ನ ಬರಬೇಕಿದ್ರೆ ಅಮ್ಮನೆ ಎತ್ತಕೊಂಡ ಬರಬೇಕು..
ಬಾರಿ ಚಾಲು ನನ್ನಮ್ಮ..ಗೆಜ್ಜೆ ಸಪ್ಪಳ ಮಾಡದೆ ಹೊರಗಡೆ ಹೆಜ್ಜೆ ಹಾಕ್ತಿನಂತ.. ಪಿಂಕು ಪಿಂಕು ಚಪ್ಪಲಿ ತೊಡಿಸ್ತಾರೆ ಮನೆಯೊಳಗೆ..
ಮೊದಲಾಡಿದ ನುಡಿಯು ಬಾರಿ ತೊದಲು
ಮರು ನುಡಿಯೇ ಕಂದ ಎನಲು..
ಏರಿ ಕೂರುವೆ ಪಪ್ಪನ ಹೆಗಲು
ಪ್ರತಿದಿನ ಇದು ಮಾಮೂಲು...
ಪಪ್ಪಂಗೆ ಡಂಬೆಲ್ಸು ನಾನೆ ..ಡಿಪ್ಸ್ ಹೊಡಿಯೋಕೆ ಎಕ್ಸಟ್ರಾ ವೈಟು ನಾನೆ..
ನಂಗೆ ಸಾರಿ ತುಂಬಾ ಇಷ್ಟ..ಆದ್ರೆ ನನ್ನ ಸೈಜ್ ಗೆ ಎಲ್ಲೂ ಸಿಗಲ್ಲ..ಲಾಕ್ಡೌನ್ ಬೇರೆ.. ಹುಡುಕಿದೆ ಎಲ್ಲೆಲ್ಲು...ಗಾಡ್ರೆಜು.,ಟೇಬಲ್ಲು, ಕಬೋರ್ಡು,ಅಟ್ಟ,ಮೆಟ್ಲು... ಕೊನೆಗೆ ಸಿಕ್ಕಿದ್ದು ಅಮ್ಮನ ವೇಲು...
ನೋಡಿ ಡೀಪಿ ಹಾಕಿರ್ತಿನಿ..ಮರಿಬಾರ್ದು ಹೇಗಿದೆ ಅಂತ ಹೇಳೊಕೆ...
ನಾನ್ ಒಂದ ವಿಷಯ ಮರೆತ್ ಬಿಟ್ಟಿದ್ದೆ ..ತುಂಬ ಕಲ್ತಿದ್ದೆ ಈ ಲಾಕ್ ಡೌನಲ್ಲಿ
ನಾನ್ ಏನೆಲ್ಲಾ ಕಲ್ತಿದಿನಿ ಅಂದ್ರೆ..
ಹೌ ಡಾಗ್ ಸೆಯ್ಸ.........ಬೌ ಬೌ..
ಕ್ಯಾಟ್ ಸೇಯ್ಸ ....ಮೀಯವ್ ಮೀಯವ್..
ಕೌ ಸೇಯ್ಸ.. ಅಂಬೋ..
ಡಕ್ ಸೆಯ್ಸ ......ಕ್ವಕ್ ಕ್ವಕ್....
ನಾನು ಒನ್ ಟು ತ್ರೀ....ಸಂಡೆ ಮಂಡೇ ಹೆಳ್ತಿನಿ
ಅಷ್ಟೇ ಇರೊದು ನಮ್ಮ ಮನೆ ಕ್ಯಾಲೆಂಡರ್ ನಲ್ಲಿ..
ಒಮ್ಮೊಮ್ಮೆ ಗೋಡೆ ಮೇಲೆ ಬರಿಬೇಕು ಅನ್ಸುತ್ತೆ..
ಅಮ್ಮ ಕಣ್ ಬಿಟ್ಟಾಗ ಎಲ್ಲಾ ಮರ್ತೊಗುತ್ತೆ..
ತುಂಬಾ ಯೊಚ್ನೆ ಆಗ್ತಿದೆ ಅದ್ಯಾವಗ ಸ್ಕೂಲ್ ಒಪನ್ ಮಾಡ್ತರೋ..
ಹೇ ಹೇ ನನಗಲ್ಲ..ನಮ್ ಸೀನಿಯರ್ಸಗೆ ...
ನಾನಿನ್ನು ತುಂಬ ಜೂನಿಯರ್.. ಜಸ್ಟ್ ಎಯ್ಟಿನ್...ಎಯ್ಟಿನ್ ಮಂತ್..
ರೀಸೆಂಟಾಗಿ ಸ್ಕೂಲ್ ಗೆ ಹೋಗಿದ್ದೆ ಟೀಚರ್ಸ್ ಇಲ್ಲ.. ನರ್ಸ ಇದ್ದಿದ್ರು ಎರಡೆರಡ ಇಂಜೆಕ್ಷನ್ ಕೊಟ್ರು ಗೊತ್ತಾ ಟೂ ಡೇಸ್ ಫುಲ್ ಫೀವರ್..
ಈ ಇಂಜೆಕ್ಷನ್ ಮುಂದೆ ಕರೋನಾ ವ್ಯಾಕ್ಷಿನ್ ಏನು ಅಲ್ಲ..ನೀವೆಲ್ಲ ತಗೊಳ್ಳಿ ಅಯ್ತಾ ಮರಿಬೇಡಿ..
Thursday, 23 August 2018
ಹಸಿವು
ಎಂತ ಕ್ರೂರಿ ಹಸಿವು
ಕಂಡ ಕಂಡಲ್ಲಿ ಕಸಿದು ತಿನ್ನುವಂತಿದೆ
ಎಸೆದು ಮಾಸಿದ ಅಗಳನ್ನ
ಕಸದಡಿಯಲ್ಲಿ ಹುಡುಕಿದೆ.
ಎಂತ ಕ್ರೂರಿ ಹಸಿವು
ಘನತೆ ಗೌರವ ಪಕ್ಕಕ್ಕಿಟ್ಟು
ಬೇಡಿ ತಿಂದದ್ದಾಯಿತು.
ಸಾಲದ್ದಕ್ಕೆ ಮೈಮಾರಿ ಕೊಂಡದ್ದು ಆಯಿತು
ಎಂತ ಕ್ರೂರಿ ಹಸಿವು
ಯಾಚಿಸಿ ಯಾಮಾರಿಸಿದ್ದಾಯ್ತು
ಸದ್ದಿಲ್ಲದೆ ಕದ್ದು ಒದ್ದಿಸಿಕೊಂಡಿದ್ದು ಅಯಿತು.
ಇಂದು ತುಂಬಿದ ಹೊಟ್ಟೆ ನಾಳೆ ಕಾಲಿಯಾಯ್ತು.
ಎಂತ ಕ್ರೂರಿ ಹಸಿವು
ಸದಾ ಅದರದ್ದೆ ಮೇಲುಗೈ
ನಾಗರಿಕತೆಯ ಹುಟ್ಟಿನಿಂದ ಇಲ್ಲಿಯವರೆಗೂ.
ಹೊಟ್ಟೆ ಕೇಳುತ್ತಿಲ್ಲ,ಕಂಗಳರಸುತ್ತಿದೆ ಅವರಿವರ ಕೈ.
ಎಂತ ಕ್ರೂರಿ ಈ ಹಸಿವು
ದೇಹ ಮಾಸಿ ಶವಾಸನದಲ್ಲಿ ಮಲಗಿಸಿದೆ.
ಹಸಿದ ಹೊಟ್ಟೆಗೆ ವಿಷವು ದಕ್ಕಲಿಲ್ಲ,
ಇನ್ನೆರಡು ತುತ್ತು ಕೈಯಲ್ಲೇ ಉಳಿದಿದೆ..
ಎಂತ ಕ್ರೂರಿ ಹಸಿವು
ಕಂಡ ಕಂಡಲ್ಲಿ ಕಸಿದು ತಿನ್ನುವಂತಿದೆ
ಎಸೆದು ಮಾಸಿದ ಅಗಳನ್ನ
ಕಸದಡಿಯಲ್ಲಿ ಹುಡುಕಿದೆ.
ಎಂತ ಕ್ರೂರಿ ಹಸಿವು
ಘನತೆ ಗೌರವ ಪಕ್ಕಕ್ಕಿಟ್ಟು
ಬೇಡಿ ತಿಂದದ್ದಾಯಿತು.
ಸಾಲದ್ದಕ್ಕೆ ಮೈಮಾರಿ ಕೊಂಡದ್ದು ಆಯಿತು
ಎಂತ ಕ್ರೂರಿ ಹಸಿವು
ಯಾಚಿಸಿ ಯಾಮಾರಿಸಿದ್ದಾಯ್ತು
ಸದ್ದಿಲ್ಲದೆ ಕದ್ದು ಒದ್ದಿಸಿಕೊಂಡಿದ್ದು ಅಯಿತು.
ಇಂದು ತುಂಬಿದ ಹೊಟ್ಟೆ ನಾಳೆ ಕಾಲಿಯಾಯ್ತು.
ಎಂತ ಕ್ರೂರಿ ಹಸಿವು
ಸದಾ ಅದರದ್ದೆ ಮೇಲುಗೈ
ನಾಗರಿಕತೆಯ ಹುಟ್ಟಿನಿಂದ ಇಲ್ಲಿಯವರೆಗೂ.
ಹೊಟ್ಟೆ ಕೇಳುತ್ತಿಲ್ಲ,ಕಂಗಳರಸುತ್ತಿದೆ ಅವರಿವರ ಕೈ.
ಎಂತ ಕ್ರೂರಿ ಈ ಹಸಿವು
ದೇಹ ಮಾಸಿ ಶವಾಸನದಲ್ಲಿ ಮಲಗಿಸಿದೆ.
ಹಸಿದ ಹೊಟ್ಟೆಗೆ ವಿಷವು ದಕ್ಕಲಿಲ್ಲ,
ಇನ್ನೆರಡು ತುತ್ತು ಕೈಯಲ್ಲೇ ಉಳಿದಿದೆ..
Monday, 20 August 2018
ದೇವರೆ ಇಲ್ಲದ ಬದುಕಿನಲಿ
ದೇವರೆ ಇಲ್ಲದ ಬದುಕಿನಲಿ
ನೀನೆ ಜೊತೆಯಾದೆ.
ನಗುವು ಕಾಣದ ಹೃದಯದಲಿ
ಮಗುವು ನೀನಾದೆ.
ನನ್ನ ನಗುವು ನೀನಾದೆ.|ಪ|
ಬಾಳೆ ಒಲವಿನ ಹೊಂದಿಕೆ
ಪ್ರೀತಿ ಅದರಲಿ ನಂಬಿಕೆ
ನಿನದೆ ಪ್ರೀತಿಯ ಪ್ರತಿಬಿಂಬ
ತಬ್ಬುತ ಮರೆತೆನು ಜಗವನ್ನೆ.
ಮುಗ್ದ ನಗುವಲ್ಲಿ....
ತೊದಲು ಮಾತನ್ನು ಉಲಿಯುತ ನಲಿಯುತ ಹಾಗೆ ಬಾರೋ ಕಂದ..
ಬಳಲಿದೆ ಒಡಲು..
ಸಿಹಿಯನು ಉಣಿಸುವೆ ಉಣಿಸುವೆ..
ಬೆಳಕು ತಂದೆ ಬಾಳಿಗೆ
ನೀಗಿಸಿದೆ ನನ್ನ ಬೇಗೆ
ಪ್ರತಿದಿನ ಪ್ರತಿ ಕ್ಷಣ ಇರಲೀ ಸೌಭಾಗ್ಯ..
ತುದಿಯಲಿ ಮೊದಲಲಿ ನೀನೆ ಮೊದಲಿಗ..
ಸುಖವೇ ಇರಲಿ ದುಃಖವೇ ಬರಲೀ
ನಿನ್ನ ಪ್ರೀತಿಯೊಂದೆ ನನಗೆ ಶಾಶ್ವತ..
Thursday, 15 December 2016
ಕನಸು
ಈಗೀಗ ...ನಿದ್ದೆ ಬರುತ್ತಿಲ್ಲ. ಕೊರೆಯುವ ಚಳಿಗೆ ಹೊದಿಕೆ ಸಾಲುತ್ತಿಲ್ಲ...
ರಾತ್ರಿಯಿಡಿ ಕನಸು ಕಾಣುವುದೇ ಅಯ್ತು.
ಕನಸ್ಸಲ್ಲು ಅನಾಥ ಪ್ರಜ್ಞೆ ..ನೀನಿಲ್ಲದೆ ನಾನೇನಾ ತಬ್ಬಲಿ ಅನಿಸುತ್ತಿದೆ.
ಸಂದೇಶ ಪೂಜಾರಿ ಗುಲ್ವಾಡಿ
Thursday, 1 December 2016
ಆಮಂತ್ರಣ
ತಪ್ಪಾಯಿತೇ...ನಿನ್ನ ನಗುವೇ ಕರೆಯೋಲೆ ಎಂದು ಭಾವಿಸಿದ್ದು.
ನಿನ್ನೆದೆಯ ಸಾಮ್ರಾಜ್ಯಕ್ಕೆ ದಕ್ಕಲಿಲ್ಲ ಆಮಂತ್ರಣ,
ಗೆಳೆಯ..ನಿನ್ನ ನೋಡಲು ನೆಪ ಹುಡುಕುತಿರುವೆ ..ಈಗಲಾದರು ನೀಡು ಆಮಂತ್ರಣ.
ಸಂಧಿಸುವೆ ಮಂಟಪದಲ್ಲಿ...
ಸಂದೇಶ ಪೂಜಾರಿ ಗುಲ್ವಾಡಿ
Tuesday, 22 November 2016
ಕವಿತೆ ಓ ಕವಿತೆ
ಹೂ ಬನದಲಿ ಕುಳಿತರೂ ನಿನ್ನದೇ ಚಿಂತೆ..
ಅರಿತೆ ನಾನರಿತೆ ನಿನ್ನ ಮನದಲಿ ನಾ ಬೆರತೆ...
ಬಿಡುವಿಲ್ಲದೆ ನಾ ನಿನ್ನ ಮರೆತೆ...
ಬಿಟ್ಯಾಕೆ ಹೋದೆ ನೀ...ಈ ಬಳಗದ ಗೆಳೆತನ ಕೊಟ್ಯಾಕೆ..ಹೋದೆ ನೀ....
ನಿನ್ನ ಪ್ರೀತಿಗಾಗಿ ನಿಮ್ಮ ಪ್ರೀತಿಗಾಗಿ ನಾ ಮತ್ತೆ ಬರುವೆನು....ನಾ ಮತ್ತೆ ಬರೆವೆನು....
ಸಂದೇಶ ಪೂಜಾರಿ ಗುಲ್ವಾಡಿ
ಸಾಲದ ಮನೆ
ಇದು ಸಾಲದ ಮನೆ
ಇಲ್ಲಿ ಸಾಲವು ಸಿಗುವುದು ಬನ್ನಿ..
ಊಟಕೂ ಸಾಲದ ಮನೆ
ಪ್ರೀತಿಗೂ ಸಾಲದ ಮನೆ
ನೋಟಕೆ ಸಾಲಾದ ಮನೆ..
ನೋಟಿಗೆ ಸಾಲದ ಮನೆ
ಬನ್ನಿ ಇದು ಸಾಲು ಸಾಲಾದ ಮನೆ
ಸಾವಿರ ಸಾವಿರ ಕೋಣೆ
ಇಲ್ಲಿ ಸಾಲದ ಸಾವಿನ ಕೋಣೆ..
ಎಲ್ಲಿ ಸಾಲದ ಕೊನೆ.?..........ಸಾವಿನ ಕೊನೆ...
ಸಂದೇಶ ಪೂಜಾರಿ ಗುಲ್ವಾಡಿ
Monday, 7 November 2016
Wednesday, 2 November 2016
ಗೋಡೆ
ಒಂದೇ ಪ್ರೀತಿಗೆ ಎರಡು ಮುಖಗಳು
ಆಚೆ ಅವಳು ಈಚೆ ನಾನು ಗೋಡೆ ಬರಹಗಳು.
ಅಕ್ಕ ಪಕ್ಕದ ಮನೆಯವರು ನಮ್ಮ ಪ್ರೀತಿಗೆ ತಡೆ ಜಾತಿಯೆಂಬ ಈ ಗೋಡೆ.
ಒಂದೇ ಅಂತಸ್ತು ಸಂಧಿಸಲಾಗಲಿಲ್ಲಾ.ಸಂಧಿಗೊಂದು ತೂತ ಕೊರೆದು ಆಚೆ ಇಣುಕುವಾಸೆ.
ಅಣ್ಣ ಬಂದ ಸುಣ್ಣ ತಂದ ಬಣ್ಣ ಬಳಿದು ಬಿಟ್ಟ.
ಹಳೆಯ ನೆನಪು ಹೇಳದ ಮಾತು ಗೋಡೆಯೊಳಗೆ ಮಾಸಿತ್ತು.
ಹೇಳಬೇಕಿದ್ದ ಅದೆಷ್ಟೋ ಕನಸುಗಳು ಭಿತ್ತಿಯೊಳಗೆ ಬತ್ತಿ ಹೋಗಿತ್ತು.
-ಸಂದೇಶ ಪೂಜಾರಿ ಗುಲ್ವಾಡಿ
Friday, 28 October 2016
ಕವಿ
ಮಹಾ ಕಾವ್ಯದ ಸೃಷ್ಟಿಗೆ ಪಣ ತೊಟ್ಟಿದ್ದಾನೆ..ಪದಗಳೇ ಸಾಲುತ್ತಿಲ್ಲ...
ಬಳುವಳಿ ಪಡೆಯಲು ಅವನಿಗಿಷ್ಟವಿಲ್ಲ.
ಸಾರಸ್ವತ ಲೋಕದ ಬ್ರಹ್ಮನು ಅವನಲ್ಲ.ಆದರೂ ಆಸೆ ಚಿಗುರಿತಲ್ಲಾ..
ಅವನೊಬ್ಬ ಭಾವಜೀವಿ.
ಬಿರುದು ಸನ್ಮಾನವಿತ್ತ ಜನ ಮಹಾಕವಿಯೆಂದರು..ಅವನ ದೃಷ್ಟಿಯಲ್ಲಿ ಸೃಷ್ಟಿಕಾರ್ಯ ಮುಗಿದಿಲ್ಲ.
ಹುಚ್ಚನಂತೆ ಗೊಣಗುತ್ತಾನೆ...ನಾಲ್ಕು ಸಾಲು ಗೀಚುತ್ತಾನೆ...ಮತ್ತೆ ಗೀಚುತ್ತಾ ಇದ್ದಾನೆ
ಸಂದೇಶ ಪೂಜಾರಿಗುಲ್ವಾಡಿ
ಕವಿತೆಯ ಹುಟ್ಟು
ಹ್ರದಯದ ಕದ ತಟ್ಟಿ ಇಣುಕಿ
ಕೋಟಿ ಪದಗಳ ಪಟ್ಟಿ ಕೆಣುಕಿ
ಹುಟ್ಟುವುದು ಕಾಣ ಕವಿತೆ
ಈಗಷ್ಟೆ ಜನ್ಮ ಮ್ರತ್ಯುವಿಲ್ಲದೆ ಮರುಜನ್ಮ
ಸದ್ಯ ಸ್ವಸ್ಥ ಪುನರುತ್ಥಾನ
ನಿನ್ನಂತೆ ತುಂಬಿ ನಿಂತದಲ್ಲ ಸದಾ ಉಕ್ಕುವ ಒರತೆ.
ಯೋಜನೆಯ ಯೋಚನಾಲಹರಿ
ಮುಂಚೂಣಿಯಲ್ಲಿದೆ ಭಾವನೆ ಸಾಗಿದ್ದೆ ದಾರಿ.
ಮಿಥ್ಯವಾದವಲ್ಲ ಸತ್ಯದ ಕಲ್ಪನೆ ಒಡಲಾಳದ ಚರಿತೆ.
ಚೈತನ್ಯದ ದಾಳಿಗೆ ಚೇತ್ಕಾರ ಮೇಳೈಯಿಸಿ
ದೂರ ಸರಿದಿದೆ ಜಡತೆ ಕೊನೆಯರಸಿ
ಉದಯಿಸಿದೆ ಬೆಳದಿಂಗಳ ಬಾಂಧವ್ಯ ಕವಿತೆ.
ಸಂದೇಶ ಪೂಜಾರಿ ಗುಲ್ವಾಡಿ
Saturday, 22 October 2016
ತ್ಯಾಗ
ನೀ ನಗುವ ಮೊದಲೆ ನನ್ನೊಳಗೆ ಚಿಗುರಿತು ಪ್ರೀತಿ
ಮತ್ತೆ ಮತ್ತೆ ನಿನ್ನ ನೋಡಿದೆ
ನಗುತ್ತಿದ್ದ ನೀ ಸ್ತಬ್ಧಳಾದೆ ಕೆಂದುಟಿಯ ಜೋಡಿಸಿ
ಅಂದೆ ಯೋಚಿಸಿದೆ ನಿನ್ನ ನಗುವ ಕಸಿಯ ಬಾರದೆಂದು
ಮತ್ತೆ ಎಂದು ಸಹ ನಿನ್ನ ನೋಡಬಯಸಿಲ್ಲ..
ಸಂದೇಶ ಪೂಜಾರಿ ಗುಲ್ವಾಡಿ
Thursday, 20 October 2016
ಅಂತರಾಳ
ನನ್ನನ್ನೇ ಸಮರ್ಥಿಸುತ್ತಿರುತ್ತೆನೆ
ಯಾರಿಗೂ ಸೋಲಲ್ಲ ಅಂತ
ಏನು ಮೋಡಿ ಮಾಡಿದೆ
ಸೋತೆನಲ್ಲ ನಾ ನಿನಗೆ.
ನಿಜಕ್ಕೂ ನೀನು ಮಾಡಿದ್ದು ಮೋಡಿಯಲ್ಲ.
ನಿನಗೆ ನನ್ನಲ್ಲಿ ಪ್ರೀತಿ ಇಲ್ಲ.
ನಾನೆ ನಿನ್ನನ್ನು ನೋಡಿ ಮೂಢನಾದೆ
ಸತ್ಯ ಇರಬಹುದೆ?
ನಿನ್ನಲ್ಲಿ ಚೆಲುವಿದೆ ನಾ ನಿನ್ನ ಪರವಾದೆ.
ನೀ ಬಯಸುವುದು ಅದನ್ನೆ ಅಲ್ಲವೆ?
ಹಾಗೆಯೆ ನಾ ಭಾರವಾದೆ.
ಅರ್ಥವಾಗದು ಗೆಳತಿ ನನಗೆ
ನನ್ನ ನೆನಪು ಸುಳಿದರು ಸಹಿಸದ ನೀ ನನ್ನ ಮನ ಅರಿವ ಬಗೆ ಹೇಗೆ?
ಸಂದೇಶ ಪೂಜಾರಿ ಗುಲ್ವಾಡಿ
Friday, 14 October 2016
ಸಂಚಾರಿ
ನನ್ನ ಮನಕೆ ನುಗ್ಗಿ ದಾಳಿ ಮಾಡಿದ ಮೇಲೆ. ನನ್ನ ಕನಸುಗಳೆಲ್ಲಾ ಸಂಚಾರ ಹೊರಟಿವೆ..
ಗೆಳತಿ ಅಲೆಮಾರಿ ಮಾಡದೆ ನೆಲೆಯುರಲು ಅವಕಾಶ ಕೇಳುತಿವೆ..
ಒಡಲಕೊರವ ಕಡಲಾಗದೆ
ಹುಣ್ಣಿಮೆ ಬಳದಿಂಗಳಾಗಿ ಬಾ..
ಸಂದೇಶಪೂಜಾರಿ ಗುಲ್ವಾಡಿ
ಸುಮ್ಮನೆ
ಸುಮ್ಮನೆ
ಸುಳ್ಳು ಸೃಷ್ಟಿಸಿದೆಯಾ ಕಳ್ಳ ಗೆಳೆಯಾ
ಹಳ್ಳ ದಿಣ್ಣೆಯನ್ನೇರಿ ಬೆಳ್ಳಿ ಮೋಡ ತೋರಿಸುವೆನೆಂದು...
ಇಲ್ಲಾ ಗೆಳತಿ ನಿಲ್ಲೆ ಗೆಳತಿ...ನಮಗಾಗೆ ಕರಗಿತಿಂದು....
ಹೊಗೋಣ ಪ್ರೀತಿಹನಿಯಲಿ ಮಿಂದು.
ತೊಯ್ದ ಮಳೆಗೆ ಸೃಷ್ಟಿಯಾಗಲಿ ಹಸಿರ ಬನ.
ಇಲ್ಲೆ ಕುಳಿತು ಹಗುರವಾಗಲಿ ನಮ್ಮ ಮನ...
ಸಂದೇಶ ಪೂಜಾರಿ ಗುಲ್ವಾಡಿ
Thursday, 13 October 2016
ನೀತಿ
ನೀವು ಹಿರಿಯರು,ಪುರಾಣ ಗ್ರಂಥ ಹುಡುಕಿ ಹುಡುಕಿ ಕೊಡುತ್ತಿರುವಿರಿ ನಿದರ್ಶನ.
ಕಷ್ಟವಾದರೂ ಅವಡುಗಚ್ಚಿ ಪಾಲಿಸಿದೆ ನಿಮ್ಮ ಮಾರ್ಗದರ್ಶನ.
ಸ್ವಂತಿಕೆಯ ಮೇಲೆ ಮೂಡುವ ಅದೆಷ್ಟೋ ಪ್ರಶ್ನೆ.
ರೀತಿ,ನೀತಿ,ರಿವಾಜುಗಳ ಮುಂದೆ ಮೂಕ ಸನ್ನೆ.
ನಾನು ಕಿರಿಯವ ನೈತಿಕತೆ ಭೋದಿಸಲು ಹೊರಟರೆ ತಪ್ಪು.
ಇರಲಿ ಬಿಡಿ ಕಾಯುವೆ ನನಗೂ ಬರುತ್ತಲ್ಲಾ ಮುಪ್ಪು.
ಕೊಂಚ ಹಿಡಿದರೂ ತಾಳೆಗರಿಗಳಿಗೆ ಹುಳುಕು,
ನನಗಿಲ್ಲ ಕಿಂಚಿತ್ತು ಅಂಜಿಕೆ,ಅಳುಕು.
ನೀತಿಗಳಲ್ಲಿ ಹುದುಗಿದ್ದರೆ ಸಾಕಲ್ಲವೆ ಸಾರ್ವಕಾಲಿಕ ಸತ್ವ.
ಇನ್ನೇನು ಬೇಕು ಮಂದಿ ಮನಸ್ಸುಗಳಲ್ಲಿ ಹೊಂದಲು ಅಮರತ್ವ.
ಸಂದೇಶ ಪೂಜಾರಿ ಗುಲ್ವಾಡಿ
ಬೊಂಬೆ ಮಾಡಿದರಯ್ಯ
ನನ್ನ ಬೊಂಬೆ ಮಾಡಿದರಯ್ಯ
ಕೈಕಾಲು,ಗಂಟುಗಳಿಗೆ ಕೀಲು ಬಿಗಿದು
ಚಲನೆ ನೀಡಿದರಯ್ಯ.
ಈ ಲೋಕದ ನೇಪಥ್ಯದಲ್ಲಿ ನನ್ನದೇನಿದೆ..? ಆಡಿಸಿದಾತನ ಕೈಗೊಂಬೆ ನಾನು.
ಬಾಯ್ಬಿಟ್ಟು ಬೊಬ್ಬಿರಿದರು ಕೇಳುಗರು ಬೇಕಲ್ಲ..
ಸೂತ್ರ ಹಿಡಿದವನೆ ಮರೆತಿಹನಲ್ಲ.
ಕೆಳಗೆ ದುಮುಕಲು ಭಯ.ನನ್ನ ನಾ ಅರಿಯಲಾಗಲಿಲ್ಲ.ಮಣ್ಣಿನ ಬೊಂಬೆಯೊ ಚಂದನದ ಗೊಂಬೆಯೋ...
ಸಂದೇಶ ಪೂಜಾರಿ ಗುಲ್ವಾಡಿ
ಗೊಂಬು
ನೀ ನಡೆದರೆ ಚಂದ..ಕುಣಿದರೂ ಚಂದ
ಅಳಬೇಡ ನನ್ನ ಮುದ್ದು ಕಂದ
ಬೆಳ್ಳಂಬೆಳಗೆ ಬೆಳ್ಳಿ ಬಟ್ಟಲಲ್ಲಿ ಹಾಲ ಕಾಯಿಸಿ ಕುಡಿಸುವೆ ಬಾರೋ ನಂದ.
ನೂರಾಟ ತಂದು ಕೊಡುವೆ ನೀರಾಟ ಆಡದಿರು...
ಮುದ್ದು ಕಂದ ನನ್ನ ಗೊಂಬು.
ನಾ ಹೇಗೆ ಹಾಕಲಿ ಕಡಿವಾಣ ನಿನ್ನ ಓರೆ ಓಟಕೆ..
ಕಿರುನಗೆ ಮಿಂಚು ಕಣ್ಣಲ್ಲಿ ಕುಡಿನೋಟ ಸಾಟಿ ಯಾರು ನಿನ್ನ ನಗುವಿಗೆ..
ಕರ ನೀಡಿ ಕರೆದಾಗ ಓಡೋಡಿ ಬಂದು ಎದೆಗಪ್ಪು...ಬೆನ್ನು ತಟ್ಟುವೆ ನನ್ನ ಗೊಂಬೆ.
ಸಂದೇಶ ಪೂಜಾರಿ ಗುಲ್ವಾಡಿ
ಬೊಂಬೆ
ನನ್ನ ಒಂದು ಬೊಂಬೆ ಮಾಡಿದೆ
ಹೊಳೆವ ಕಣ್ಣು ಕೆಂಪುಗಲ್ಲ ನನ್ನೆ ನಾ ನೋಡಿದೆ.
ಮುದ್ದಿಸುವೆ ಎಂದು ಕಾದಿರುವೆ..
ಮುದ್ದಿಸದೆ ಆಟವಾಡಿದೆ..ವಿನೋದ ನೋಡಿದೆ.
ಜೀವ ನೀಡಿದೆ ನೀನಿಲ್ಲದೆ ದೇಹ ಬಾಡಿದೆ.ನೋವ ಕಾಡಿದೆ..ಬೊಂಬೆ ಹಾಡಿದೆ..
ಬಾರದ ಬಯಕೆ ಬಯಸಿ ಬಂದರು ಬಹಳ ಮಂದಿ..
ನಿನ್ನ ಇರುವಿಕೆಯೇ ಇರದೆ ನಾ ಬೆದರಿದ ಬೊಂಬೆ
ಸಂದೇಶ ಪೂಜಾರಿ ಗುಲ್ವಾಡಿ